ಯುಪಿಐ ಪಾವತಿ ವೈಫಲ್ಯ: ಆರ್ಬಿಐ ಮಾರ್ಗಸೂಚಿ ಹೇಳುವುದೇನು?
ನವದೆಹಲಿ, ಏಪ್ರಿಲ್ 6: ಬಹುತೇಕ ಜನರು ಈಗ ನಗದು ಹಣದ ಬದಲು ಯುಪಿಐ ವಹಿವಾಟನ್ನು ಅವಲಂಬಿಸಿದ್ದಾರೆ. ಪರ್ಸ್ನಲ್ಲಿ ಹಣವಿಲ್ಲದೆ ಇದ್ದ ಸಮಯದಲ್ಲಂತೂ ಯುಪಿಐ ಪಾವತಿ ವರದಾನವಾಗಿದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಬ್ಯಾಂಕ್ಗಳಲ್ಲಿನ ತಾಂತ್ರಿಕ ದೋಷದಿಂದ ಪಾವತಿ ಸಾಧ್ಯವಾಗದೆ ಪೇಚಿಗೆ ಸಿಲುಕುವುದು ಸಾಮಾನ್ಯ. ಆದರೆ ಇದಕ್ಕೆ ಇನ್ನು ಮುಂದೆ ಅಂತ್ಯಗಾಣುವ ನಿರೀಕ್ಷೆ ಮೂಡಿದೆ.
ಬಹುತೇಕ ಬ್ಯಾಂಕ್ ವ್ಯವಸ್ಥೆಗಳಲ್ಲಿ ಏಪ್ರಿಲ್ 1ರ ಬಳಿಕ ಪಾವತಿ ಸಹಜ ಸ್ಥಿತಿಗೆ ಮರಳಿದ್ದು, ಗ್ರಾಹಕರು ಯುಪಿಐ ಮತ್ತು ಐಎಂಪಿಎಸ್ ಸೇವೆಗಳಲ್ಲಿ ಅಡಚಣೆಯಿಲ್ಲದೆ ಬಳಸಲು ಸಾಧ್ಯವಾಗುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಟ್ವಿಟ್ಟರ್ನಲ್ಲಿ ತಿಳಿಸಿದೆ.
ಆದರೆ, ವಹಿವಾಟು ವಿಫಲವಾದ ಬಳಿಕ ತಮ್ಮ ಹಣ ಮರಳಿ ಬರುತ್ತಿಲ್ಲ ಎಂದು ಅನೇಕ ಗ್ರಾಹಕರು ಪ್ರತಿಕ್ರಿಯೆ ನೀಡಿದ್ದಾರೆ. ವಿಫಲಗೊಂಡ ವಹಿವಾಟಿಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್ನಲ್ಲಿಯೇ ಆರ್ಬಿಐ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಇದರ ಅನ್ವಯ ವಹಿವಾಟು ವಿಫಲವಾದ ನಂತರ ಗ್ರಾಹಕರಿಗೆ ಹಣ ಮರಳಿಸಲು ಸಾಧ್ಯವಾಗದೆ ಇದ್ದರೆ ಬ್ಯಾಂಕ್ ಅದಕ್ಕೆ ದಂಡ ತೆರಬೇಕಾಗುತ್ತದೆ.

ಆರ್ಬಿಐನ ಹಾರ್ಮೊನೈಸೇಷನ್ ಆಫ್ ಟರ್ನ್ ಅರೌಂಡ್ ಟೈಮ್ (ಟಿಎಟಿ) ಮಾರ್ಗಸೂಚಿ ಮತ್ತು ಅಧಿಕೃತ ಪಾವತಿ ವ್ಯವಸ್ಥೆ ಬಳಸಿದ ವಹಿವಾಟು ವಿಫಲವಾದರೆ ಗ್ರಾಹಕರಿಗೆ ಪರಿಹಾರ ನೀಡುವ ನಿಯಮದ ಪ್ರಕಾರ, ಫಲಾನುಭವಿಯ ಖಾತೆಗೆ ಹಣ ಪಾವತಿಸುವಲ್ಲಿ ಬ್ಯಾಂಕ್ ವಿಫಲವಾದರೆ, ಎರಡು ದಿನದಲ್ಲಿ ಫಲಾನುಭವಿ ಬ್ಯಾಂಕ್ ಸ್ವಯಂಚಾಲಿತವಾಗಿ ಹಣವನ್ನು ಮರಳಿಸಬೇಕು. ಒಂದು ವೇಳೆ ಎರಡು ದಿನಕ್ಕಿಂತ ಹೆಚ್ಚು ತಡವಾದರೆ ಪ್ರತಿ ದಿನಕ್ಕೆ 100 ರೂಪಾಯಿ ದಂಡ ತೆರಬೇಕಾಗುತ್ತದೆ.
ಎಟಿಎಂಗಳಲ್ಲಿ ಗ್ರಾಹಕರ ಖಾತೆಯಿಂದ ಹಣ ಡೆಬಿಟ್ ಆಗಿ ನಗದು ಸಿಗದೆ ಹೋದರೆ ಅನ್ನು ಆರು ದಿನಗಳಲ್ಲಿ ಅವರ ಖಾತೆಗೆ ಮರಳಿಸಬೇಕು. ಆರು ದಿನಕ್ಕಿಂತ ಹೆಚ್ಚು ದಿನ ಕಳೆದರೆ ಪ್ರತಿ ದಿನ 100 ರೂಪಾಯಿ ದಂಡ ಪಾವತಿಸಬೇಕು. ಕಾರ್ಡ್ನಿಂದ ಕಾರ್ಡ್ಗೆ ಹಣ ವರ್ಗಾವಣೆ ವೇಳೆ ಫಲಾನುಭವಿಗೆ ಹಣ ಸಿಗದೆ ಹೋದರೆ, ಅದನ್ನು ಗ್ರಾಹಕರ ಖಾತೆಗೆ ಮರಳಿಸಲು ಬ್ಯಾಂಕ್ಗೆ ಎರಡು ದಿನದ ಗರಿಷ್ಠ ಸಮಯವಿದೆ. ಇದೇ ರೀತಿಯ ನಿಯಮ ಐಎಂಪಿಎಸ್, ಯುಪಿಐ ಪಾವತಿಗಳಲ್ಲಿ ಅನ್ವಯವಾಗುತ್ತದೆ. ಪಾಯಿಂಟ್ ಆಫ್ ಸೇಲ್ (ಪಿಒಎಸ್) ವಹಿವಾಟಿನಲ್ಲಿ ಆರು ದಿನದಲ್ಲಿ ವಿಫಲಗೊಂಡ ವಹಿವಾಟಿನ ಮೊತ್ತವನ್ನು ಹಿಂದಿರುಗಿಸಲು ಅವಕಾಶವಿದೆ. ವ್ಯಾಪಾರಿಗಳಿಗೆ ಪಾವತಿಸಿದ ಹಣದಲ್ಲಿ ಕಡಿತ ಖಾತರಿಯಾದರೂ ಅವರಿಗೆ ಪಾವತಿಯಾಗದೆ ಇದ್ದಲ್ಲಿ ಆ ಹಣವನ್ನು ಆರು ದಿನದಲ್ಲಿ ಗ್ರಾಹಕರ ಖಾತೆಗೆ ಮರಳಿಸಬೇಕು.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications