Get Updates
Get notified of breaking news, exclusive insights, and must-see stories!

ದುರ್ಬಲ ವರ್ಗದವರಿಗೆ ಸೌಲಭ್ಯ ಒದಗಿಸಿ: ಇನ್ಫಿ ನಾರಾಯಣ ಮೂರ್ತಿ

ಬೆಂಗಳೂರು, ಜುಲೈ 15: ''ಒಂದು ದೇಶದ ಪ್ರಗತಿಯಾಗಬೇಕಾದರೆ ಶ್ರೀಮಂತರ ಪಟ್ಟಿಗೆ ಇನ್ನಷ್ಟು ಸೇರಿಸುವುದಲ್ಲ, ಅದರ ಬದಲಿಗೆ ದುರ್ಬಲ ವರ್ಗದವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವುದಾಗಿದೆ'' ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ''ಸೌಲಭ್ಯ ವಂಚಿತರಾಗಿರುವ ಜನರಿಗೆ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಒಂದು ದೇಶ ಪ್ರಗತಿ ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಬದ್ಧತೆಯನ್ನು ತೋರಬೇಕಾಗಿದೆ'' ಎಂದು ತಿಳಿಸಿದರು.

''ಈ ದಿಸೆಯಲ್ಲಿ ಮತ್ತು ಭಾರತ ಎದುರಿಸುತ್ತಿರುವ ದೊಡ್ಡ ದೊಡ್ಡ ಸಮಸ್ಯೆಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಂಶೋಧಕ ಯೋಧರನ್ನು ಗುರುತಿಸಬೇಕಾಗಿದೆ. ಇಂತಹ ಕೆಲಸವನ್ನು ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ ಮಾಡುತ್ತಿರುವ ಶ್ಲಾಘನೀಯವಾಗಿದೆ'' ಎಂದರು.

''ವಿಜ್ಞಾನ ಮತ್ತು ವಿಜ್ಞಾನ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ISF ನಲ್ಲಿ ಸುಲಭವಾಗಿ ಸೇರಬಹುದು ಮತ್ತು ವಿಜ್ಞಾನ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸುಲಭವಾದ ಸಂಪರ್ಕದೊಂದಿಗೆ ನಗರದಲ್ಲಿ ISF ಆಧುನಿಕ, ಆರಾಮದಾಯಕ, ತಂತ್ರಜ್ಞಾನ-ಆಧಾರಿತ ಮತ್ತು ಉತ್ಪಾದಕ 'ಮನೆ'ಯನ್ನು ಹೊಂದಿರಬೇಕು'' ಎಂದು ಅವರು ತಿಳಿಸಿದರು.

ISF ವೃತ್ತಿಪರರಿಗಾಗಿ ಕಚೇರಿಗಳನ್ನು ಹೊಂದಿದೆ

ISF ವೃತ್ತಿಪರರಿಗಾಗಿ ಕಚೇರಿಗಳನ್ನು ಹೊಂದಿದೆ

ಈ ಕಟ್ಟಡವು ISF ವೃತ್ತಿಪರರಿಗಾಗಿ ಕಚೇರಿಗಳನ್ನು ಹೊಂದಿದೆ, ಹಲವಾರು ಕಾನ್ಫರೆನ್ಸ್ ಕೊಠಡಿಗಳು, ತಂತ್ರಜ್ಞಾನ ಸೌಲಭ್ಯಗಳಿರುವ 100-ಆಸನಗಳ ಸಭಾಂಗಣ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನಗಳಿಗೆ ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದೆ. ISF ತನ್ನ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಮತ್ತು ಸಾಧನೆಗಳ ಮೂಲಕವೇ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಲು ಅಂತಹ 'ಮನೆ' ಅಗತ್ಯ ಎಂದು ನಾವು ಭಾವಿಸಿದ್ದೇವೆ. ಈ ಯೋಜನೆಗೆ ಹಣಕಾಸಿನ ಬೆಂಬಲ ನೀಡಿರುವುದಕ್ಕಾಗಿ ಇನ್ಫೋಸಿಸ್‌ಗೆ ISF ಕೃತಜ್ಞವಾಗಿದೆ ಎಂದು ಹೇಳಿದರು.

ಭಾರತದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರ

ಭಾರತದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರ

2006ರಲ್ಲಿ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಅದರ 25ನೇ ವರ್ಷಾಚರಣೆಯನ್ನು ಸ್ಮರಣೀಯವಾಗಿಸಲು ನಾವು ಬಯಸಿದ್ದೆವು. ಈ ವೇಳೆ ನಾನು ಜಾಗತಿಕ ಮತ್ತು ಭಾರತೀಯ ಮಟ್ಟದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ನಮ್ಮ ಕೊಡುಗೆಯ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಜಾಗತಿಕ ಮಟ್ಟದಲ್ಲಿ, ನಾವು ಇನ್ಫೋಸಿಸ್ ಪ್ರತಿಷ್ಠಾನ - ಎಸಿಎಂ (ಕಂಪ್ಯೂಟಿಂಗ್ ಮೆಷಿನರಿ ಅಸೋಸಿಯೇಷನ್) ಬಹುಮಾನ ವನ್ನು ಸ್ಥಾಪಿಸಿದ್ದು, ವಿಶ್ವದ ಅತ್ಯಂತ ಭರವಸೆಯ ಯುವ ಕಂಪ್ಯೂಟರ್ ವಿಜ್ಞಾನ ಸಂಶೋಧಕರಿಗೆ ವಾರ್ಷಿಕವಾಗಿ ನೀಡಲಾಗುವುದು ಎಂದು ತಿಳಿಸಿದರು.

ಮುಂದೆ ನಾವು ಭಾರತದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ನಮ್ಮ ಕೊಡುಗೆಯತ್ತ ಗಮನ ಹರಿಸಿದ್ದೇವೆ. ಭಾರತದೊಂದಿಗೆ ಸಂಪರ್ಕ ಹೊಂದಿದ ವಿಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಸಂಶೋಧಕರನ್ನು ಪ್ರೋತ್ಸಾಹಿಸುವ ಯೋಜನೆಯಲ್ಲಿ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ. ಸಂಶೋಧನೆಯನ್ನು ವೃತ್ತಿಜೀವನವಾಗಿ ಆಯ್ಕೆ ಮಾಡಿಕೊಳ್ಳುವ ಯುವ ಭಾರತೀಯರಿಗೆ ಮಾದರಿಗಳನ್ನು ರಚಿಸಲು ನಾವು ಬಯಸಿದ್ದೇವೆ. ಆದ್ದರಿಂದ, 2009ರಲ್ಲಿ, ನಾವು ಐದು ವಿಭಾಗಗಳಲ್ಲಿ ಬಹುಮಾನಗಳನ್ನು ಸ್ಥಾಪಿಸಿದ್ದೇವೆ - ನೈಸರ್ಗಿಕ ವಿಜ್ಞಾನ; ಗಣಿತ ಮತ್ತು ಸಂಬಂಧಿತ ಕ್ಷೇತ್ರಗಳು; ಎಂಜಿನಿಯರಿಂಗ್; ಜೀವ ವಿಜ್ಞಾನ; ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನ. ಪ್ರತಿ ಬಹುಮಾನವೂ US$ 100,000 ನಗದನ್ನು ಒಳಗೊಂಡಿದೆ. ಬಹುಮಾನ ವಿಜೇತರು ಭಾರತೀಯ ನಿವಾಸಿಯಾಗಿದ್ದರೆ ಅವರಿಗೆ ಈ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ ಎಂದರು.

ಹೊಸ ಆಲೋಚನೆಗಳು ಮತ್ತು ಸಿದ್ಧಾಂತ

ಹೊಸ ಆಲೋಚನೆಗಳು ಮತ್ತು ಸಿದ್ಧಾಂತ

ನಾವು ವಿಜ್ಞಾನದ ಬಗ್ಗೆ ಏಕೆ ಚಿಂತಿತರಾಗಿದ್ದೇವೆ? ವಿಜ್ಞಾನ ಎಂದರೇನು? ಪ್ರಕೃತಿಯ ರಹಸ್ಯಗಳನ್ನು ಬಿಚ್ಚಿಡುವುದು ವಿಜ್ಞಾನದ ಉದ್ದೇಶ. ಅಂದರೆ, ನೈಸರ್ಗಿಕ ವಿದ್ಯಮಾನವನ್ನು ಗಮನಿಸುವುದು, ಅಸ್ತಿತ್ವದಲ್ಲಿರುವ ಸಿದ್ಧಾಂತಗಳಿಗೆ ವಿರುದ್ಧವಾಗಿ ಅದರ ವೈಪರೀತ್ಯಗಳನ್ನು ಅಧ್ಯಯನ ಮಾಡುವುದು ಮತ್ತು ಈ ವೈಪರೀತ್ಯಗಳ ವಿವರಣೆಯನ್ನು ನೀಡುವ ಹೊಸ ಆಲೋಚನೆಗಳು ಮತ್ತು ಸಿದ್ಧಾಂತಗಳೊಂದಿಗೆ ಬರುವುದು ಆಗಿದೆ ಎಂದರು.

ನಮ್ಮ ದೇಶವು ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅದ್ವಿತೀಯ ಪ್ರಗತಿಯನ್ನು ಸಾಧಿಸುತ್ತಿದೆ. ನಾವು ರಾಕೆಟ್ ಮತ್ತು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದೇವೆ. ನಾವು ಉಕ್ಕಿನ ಸ್ಥಾವರಗಳು, ವಿದ್ಯುತ್ ಸ್ಥಾವರಗಳು ಮತ್ತು ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ. ನಾವು ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದೇವೆ. ನಾವು ಹೃದಯ ಮತ್ತು ಮೂತ್ರಪಿಂಡ ಕಸಿ ಮಾಡುತ್ತೇವೆ. ಆದರೂ, ನಮ್ಮ 140 ಕೋಟಿ ಭಾರತೀಯರಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ, ಪೋಷಣೆ ಮತ್ತು ಆಶ್ರಯದ ನಮ್ಮ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ನಾವಿನ್ನೂ ಸಾಕಷ್ಟು ದೂರದಲ್ಲಿದ್ದೇವೆ ಎಂದರು.

ನಾವು ಅವರನ್ನು ಪ್ರೋತ್ಸಾಹಿಸಬೇಕು

ನಾವು ಅವರನ್ನು ಪ್ರೋತ್ಸಾಹಿಸಬೇಕು

ನಮ್ಮ ದೇಶವು ಎದುರಿಸುತ್ತಿರುವ ಈ ಮತ್ತು ಇತರ ಪ್ರಮುಖ ಸಮಸ್ಯೆಗಳಿಗೆ ತ್ವರಿತ, ನವೀನ ಮತ್ತು ಕೈಗೆಟುಕುವ ಪರಿಹಾರಗಳನ್ನು ಕಂಡುಹಿಡಿಯಲು ಮಾನವ ಮನಸ್ಸಿನ ಶಕ್ತಿಯನ್ನು ಬಳಸುವುದು ಇಂದಿನ ಅಗತ್ಯವಾಗಿದೆ. ಯಾವುದೇ ರಾಷ್ಟ್ರವು ಮಾನವ ಮನಸ್ಸಿನ ಶಕ್ತಿಯನ್ನು ಬಳಸದೆ ಬಡತನ ಮತ್ತು ಅನಾರೋಗ್ಯದ ಸಮಸ್ಯೆಗಳನ್ನು ಪರಿಹರಿಸಿದ ಮತ್ತು ಆರ್ಥಿಕ ಸಮೃದ್ಧಿಯನ್ನು ಸಾಧಿಸಿದ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ವಿಜ್ಞಾನ, ಗಣಿತ ಮತ್ತು ಎಂಜಿನಿಯರಿಂಗ್ ಸಂಶೋಧಕರು ನಮ್ಮ ದೇಶದ ದೊಡ್ಡ ಸಮಸ್ಯೆಗಳ ವಿರುದ್ಧದ ನಮ್ಮ ಯುದ್ಧದಲ್ಲಿ ಮುಂಚೂಣಿಯ ಯೋಧರಾಗಿದ್ದಾರೆ. ಅದಕ್ಕಾಗಿಯೇ ನಾವು ಅವರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+