ಕೇರಳದಲ್ಲಿ ಬರಲಿದೆ ಮೊದಲ ಐಮ್ಯಾಕ್ಸ್ ಥಿಯೇಟರ್
ತಿರುವನಂತಪುರಂ, ನವೆಂಬರ್ 25: ಕೇರಳದಲ್ಲಿ ಮೊದಲ ಬಾರಿ 12 ಸ್ಕ್ರೀನ್ ಸೂಪರ್ಪ್ಲೆಕ್ಸ್ ಐಮ್ಯಾಕ್ಸ್ ಥಿಯೇಟರ್ ಶೀಘ್ರದಲ್ಲೇ ಪಿವಿಆರ್ ಸಿನಿಮಾಸ್ ತಿರುವನಂತಪುರಂನಲ್ಲಿ ಲುಲು ಮಾಲ್ನಲ್ಲಿ ತೆರೆಯಲಿದೆ.
ಪಿವಿಆರ್ ಸಿನಿಮಾಸ್ನ ಪತ್ರಿಕಾ ಪ್ರಕಟಣೆಯು ಸೂಪರ್ಪ್ಲೆಕ್ಸ್ ಐಮ್ಯಾಕ್ಸ್ ಮತ್ತು 4ಡಿಎಕ್ಸ್ನಂತಹ ಅಂತಾರಾಷ್ಟ್ರೀಯ ಮಾದರಿಯ ಸ್ಕ್ರೀನ್ಗಳಿಗೆ ಅತಿಥ್ಯ ವಹಿಸುತ್ತದೆ. ಜೊತೆಗೆ ಉತ್ತಮ ಮತ್ತು ವಿಶೇಷವಾದ ಅನುಭವವನ್ನು ಬಯಸುವ ಪ್ರೇಕ್ಷಕರ ವಿಭಾಗಕ್ಕೆ ಲುಕ್ಸ್ ಅನ್ನು ನೀಡುತ್ತದೆ ಎಂದು ಹೇಳಿದೆ.
ಸಿನಿಮಾ ಸಂಕೀರ್ಣವು ಡಿಸೆಂಬರ್ 5, 2022ರಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಭಾರತದ ಅತಿದೊಡ್ಡ ಸಿನಿಮಾ ಪ್ರದರ್ಶನ ಕಂಪನಿಗಳಲ್ಲಿ ಒಂದಾದ ಪಿವಿಆರ್ ಸಿನಿಮಾಸ್ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಬಿಜ್ಲಿ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಮತ್ತು ಲುಲು ಗ್ರೂಪ್ ಇಂಟರ್ನ್ಯಾಶನಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಎಂಎ ಅವರ ಉಪಸ್ಥಿತಿಯಲ್ಲಿ ಐಮ್ಯಾಕ್ಸ್ ಥಿಯೇಟರ್ ಘೋಷಣೆ ಮಾಡಿದರು.

ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐಮ್ಯಾಕ್ಸ್ ಸಮೀಪದಲ್ಲಿದೆ. ಸಿನಿಮಾ ಸಂಕೀರ್ಣವು 1,739 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಇದು ಕೇರಳ ರಾಜ್ಯದ ಮೊದಲ ಸೂಪರ್ಪ್ಲೆಕ್ಸ್ ಸಿನಿಮಾ ಥಿಯೇಟರ್ ಎಂದು ಹೇಳಲಾಗಿದೆ. ಈ ಸಂಕೀರ್ಣವು ನವದೆಹಲಿ, ಬೆಂಗಳೂರು ಮತ್ತು ನೋಯ್ಡಾದಲ್ಲಿ ಯಶಸ್ವಿಯಾದ ನಂತರ ದೇಶದಲ್ಲಿ ಪಿವಿಆರ್ನ ನಾಲ್ಕನೇ ಸೂಪರ್ಪ್ಲೆಕ್ಸ್ ಥಿಯೇಟರ್ ಸ್ವರೂಪದ್ದಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಿನಿಮಾ ಸಭಾಂಗಣಗಳು ಪಕ್ಕದ ಗೋಡೆಗಳ ಮೇಲೆ ವಿಶಿಷ್ಟವಾದ 'ವಿ' ಮಾದರಿಯನ್ನು ಹೊಂದಿರುತ್ತವೆ. ಹೆಚ್ಚುವರಿಯಾಗಿ ಐಮ್ಯಾಕ್ಸ್ ಮತ್ತು ಲುಕ್ಸ್ಗಾಗಿ ಆಸನ ಮತ್ತು ರಿಯಾಯಿತಿಗಳೊಂದಿಗೆ ವಿಶೇಷವಾದ ವೈಯಕ್ತಿಕ ವಿಶ್ರಾಂತಿ ಗೃಹಗಳಿರುತ್ತವೆ.

ಇವು ಪ್ರಖ್ಯಾತ ನಟರು ಮತ್ತು ನಟಿಯರ ಕ್ಯುರೇಟೆಡ್ ಕಲಾಕೃತಿಗಳು ಸುತ್ತಲೂ ಬಣ್ಣವನ್ನು ಹೊಂದಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ. ಕೇರಳದಲ್ಲಿ ಸಿನಿಮಾ ಥಿಯೇಟರ್ ಆರಂಭದೊಂದಿಗೆ 76 ನಗರಗಳಲ್ಲಿ (ಭಾರತ ಮತ್ತು ಶ್ರೀಲಂಕಾ) 176 ಕಡೆಗಳಲ್ಲಿ 876 ಪರದೆಗಳೊಂದಿಗೆ 2022-23ರ ಆರ್ಥಿಕ ವರ್ಷದಲ್ಲಿ ಪಿವಿಆರ್ ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಂಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications