ಟಿಸಿಎಸ್ ಸಿಇಒ ಚಂದ್ರ ಸಂಬಳ ಶೇ 14ರಷ್ಟು ಏರಿಕೆ
ಬೆಂಗಳೂರು, ಜೂ.09: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್ ಚಂದ್ರಶೇಖರನ್ ಅವರ ಸಂಬಳದ ಪ್ಯಾಕೇಜ್ ಶೇ 14ರಷ್ಟು ಏರಿಕೆಯಾಗಿದೆ. 2014-15 ಅವರ ಆರ್ಥಿಕ ವರ್ಷದಲ್ಲಿ ಚಂದ್ರಶೇಖರನ್ ಅವರ ಸಂಬಳ ಶೇ 14ರಷ್ಟು ಏರಿಕೆಯಾಗಿ ವಾರ್ಷಿಕ ವೇತನ 21.28ಕೋಟಿ ರು ಆಗಿದೆ.
ಟಿಸಿಎಸ್ ಸಂಸ್ಥೆ ತನ್ನ ಸಿಇಒ ಸೇರಿದಂತೆ ಉದ್ಯೋಗಿಗಳ ವೇತನವನ್ನು ಶೇ.14ರಷ್ಟು ಹೆಚ್ಚಳ ಮಾಡಿತ್ತು. ಚಂದ್ರಶೇಖರನ್ ಅವರು 2013-14ರ ಸಾಲಿನ ಆರ್ಥಿಕ ವರ್ಷ ಅವಧಿಯಲ್ಲಿ ಚಂದ್ರಶೇಖರನ್ ಅವರು 18.68 ಕೋಟಿ ವೇತನ ಪಡೆಯುತ್ತಿದ್ದರು. ಈಗ 21.28 ಕೋಟಿ ರುಗೇರಿದೆ. [ಟಿಸಿಎಸ್ ಉದ್ಯೋಗಿಗಳಿಗೆ ಬಂಪರ್ ಬೋನಸ್]

ಟಿಸಿಎಸ್ ಸಂಸ್ಥೆ ವಾರ್ಷಿಕ ಆದಾಯ ವರದಿಯ ಪ್ರಕಾರ, ಎನ್ ಚಂದ್ರಶೇಖರನ್ ಅವರು ವೇತನದ ಕಟ್ ಆಫ್ ಹೀಗಿದೆ: ಸಂಬಳ- 1.79 ಕೋಟಿ ರು, ಇನಾಮು ಮೌಲ್ಯದ ಅಡಿಯಲ್ಲಿ 2.62 ಕೋಟಿ ರು ಮತ್ತು ಸಂಸ್ಥೆ ನೀಡುವ ವಿವಿಧ ವಿಭಾಗದ ಕಮಿಷನ್ ಅಡಿಯಲ್ಲಿ 16 ಕೋಟಿ ರು. ಪಡೆದಿದ್ದಾರೆ. ಇತರೆ ಭತ್ಯೆಗಳ ಅಡಿಯಲ್ಲಿ 86.61 ಲಕ್ಷ ಪಡೆದಿದ್ದಾರೆ. [ಮೈಕ್ರೋಸಾಫ್ಟ್ ಸಿಇಒ ಸತ್ಯ ಸಂಬಳವೇ ಅಧಿಕ!]
ಇದಲ್ಲದೆ ಚಂದ್ರಶೇಖರನ್ ಅವರು 88,528 ಷೇರುಗಳನ್ನು ಟಾಟಾ ಸಮೂಹದಲ್ಲಿ ಹೊಂದಿದ್ದಾರೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಟಿಸಿಎಸ್ ಸಿಎಫ್ ಒ ರಾಜೇಶ್ ಗೋಪಿನಾಥನ್ ಸಂಬಳದ ಪ್ಯಾಕೇಜ್ (ಟೇಕ್ ಹೋಮ್) 2.14 ಕೋಟಿ ರು ನಷ್ಟಿದೆ. [ವಿಶಾಲ್ ಸಿಕ್ಕಾ ಸಂಬಳ ವಿವರ]

2014ರ ಜೂನ್ 14ರಂದು ಇನ್ಫೋಸಿಸ್ ನಿರ್ದೇಶಕರಾಗಿ ನೇಮಕಗೊಂಡಿದ್ದ ವಿಶಾಲ್ ಸಿಕ್ಕಾ ಅವರ ವೇತನ ಕೂಡ ಸುಮಾರು ಶೇ.33 ರಷ್ಟು ಏರಿಕೆಯಾಗಿ 4.56 ಕೋಟಿ ರು ಪಡೆಯುತಿದ್ದಾರೆ. ವಿಪ್ರೋ ಸಂಸ್ಥೆ ಸಿಇಒ ಟಿಕೆ ಕುರಿಯನ್ ಅವರು ಶೇ 33ರಷ್ಟು ಏರಿಕೆ ಪಡೆದು 1.46 ಮಿಲಿಯನ್ ಡಾಲರ್ (9.3 ಕೋಟಿ ರು) ಪಡೆದಿದ್ದಾರೆ. (ಪಿಟಿಐ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications