ಟಿಸಿಎಸ್ ಸಿಇಒ ಚಂದ್ರ ಸಂಬಳ ಶೇ 14ರಷ್ಟು ಏರಿಕೆ
ಬೆಂಗಳೂರು, ಜೂ.09: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್ ಚಂದ್ರಶೇಖರನ್ ಅವರ ಸಂಬಳದ ಪ್ಯಾಕೇಜ್ ಶೇ 14ರಷ್ಟು ಏರಿಕೆಯಾಗಿದೆ. 2014-15 ಅವರ ಆರ್ಥಿಕ ವರ್ಷದಲ್ಲಿ ಚಂದ್ರಶೇಖರನ್ ಅವರ ಸಂಬಳ ಶೇ 14ರಷ್ಟು ಏರಿಕೆಯಾಗಿ ವಾರ್ಷಿಕ ವೇತನ 21.28ಕೋಟಿ ರು ಆಗಿದೆ.
ಟಿಸಿಎಸ್ ಸಂಸ್ಥೆ ತನ್ನ ಸಿಇಒ ಸೇರಿದಂತೆ ಉದ್ಯೋಗಿಗಳ ವೇತನವನ್ನು ಶೇ.14ರಷ್ಟು ಹೆಚ್ಚಳ ಮಾಡಿತ್ತು. ಚಂದ್ರಶೇಖರನ್ ಅವರು 2013-14ರ ಸಾಲಿನ ಆರ್ಥಿಕ ವರ್ಷ ಅವಧಿಯಲ್ಲಿ ಚಂದ್ರಶೇಖರನ್ ಅವರು 18.68 ಕೋಟಿ ವೇತನ ಪಡೆಯುತ್ತಿದ್ದರು. ಈಗ 21.28 ಕೋಟಿ ರುಗೇರಿದೆ. [ಟಿಸಿಎಸ್ ಉದ್ಯೋಗಿಗಳಿಗೆ ಬಂಪರ್ ಬೋನಸ್]

ಟಿಸಿಎಸ್ ಸಂಸ್ಥೆ ವಾರ್ಷಿಕ ಆದಾಯ ವರದಿಯ ಪ್ರಕಾರ, ಎನ್ ಚಂದ್ರಶೇಖರನ್ ಅವರು ವೇತನದ ಕಟ್ ಆಫ್ ಹೀಗಿದೆ: ಸಂಬಳ- 1.79 ಕೋಟಿ ರು, ಇನಾಮು ಮೌಲ್ಯದ ಅಡಿಯಲ್ಲಿ 2.62 ಕೋಟಿ ರು ಮತ್ತು ಸಂಸ್ಥೆ ನೀಡುವ ವಿವಿಧ ವಿಭಾಗದ ಕಮಿಷನ್ ಅಡಿಯಲ್ಲಿ 16 ಕೋಟಿ ರು. ಪಡೆದಿದ್ದಾರೆ. ಇತರೆ ಭತ್ಯೆಗಳ ಅಡಿಯಲ್ಲಿ 86.61 ಲಕ್ಷ ಪಡೆದಿದ್ದಾರೆ. [ಮೈಕ್ರೋಸಾಫ್ಟ್ ಸಿಇಒ ಸತ್ಯ ಸಂಬಳವೇ ಅಧಿಕ!]
ಇದಲ್ಲದೆ ಚಂದ್ರಶೇಖರನ್ ಅವರು 88,528 ಷೇರುಗಳನ್ನು ಟಾಟಾ ಸಮೂಹದಲ್ಲಿ ಹೊಂದಿದ್ದಾರೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಟಿಸಿಎಸ್ ಸಿಎಫ್ ಒ ರಾಜೇಶ್ ಗೋಪಿನಾಥನ್ ಸಂಬಳದ ಪ್ಯಾಕೇಜ್ (ಟೇಕ್ ಹೋಮ್) 2.14 ಕೋಟಿ ರು ನಷ್ಟಿದೆ. [ವಿಶಾಲ್ ಸಿಕ್ಕಾ ಸಂಬಳ ವಿವರ]

2014ರ ಜೂನ್ 14ರಂದು ಇನ್ಫೋಸಿಸ್ ನಿರ್ದೇಶಕರಾಗಿ ನೇಮಕಗೊಂಡಿದ್ದ ವಿಶಾಲ್ ಸಿಕ್ಕಾ ಅವರ ವೇತನ ಕೂಡ ಸುಮಾರು ಶೇ.33 ರಷ್ಟು ಏರಿಕೆಯಾಗಿ 4.56 ಕೋಟಿ ರು ಪಡೆಯುತಿದ್ದಾರೆ. ವಿಪ್ರೋ ಸಂಸ್ಥೆ ಸಿಇಒ ಟಿಕೆ ಕುರಿಯನ್ ಅವರು ಶೇ 33ರಷ್ಟು ಏರಿಕೆ ಪಡೆದು 1.46 ಮಿಲಿಯನ್ ಡಾಲರ್ (9.3 ಕೋಟಿ ರು) ಪಡೆದಿದ್ದಾರೆ. (ಪಿಟಿಐ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications