ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಟಾಟಾ: ಇನ್ಫಿಗೆ 4ನೇ ಸ್ಥಾನ
ಕಳೆದ ವರ್ಷದ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಆ ಸ್ಥಾನವನ್ನು ಟಾಟಾ ಕಂಪನಿ ಕಳೆದುಕೊಳ್ಳಬಹುದೆಂಬ ಅನುಮಾನವಿತ್ತು. ಆದರೆ, ಹಾಗಾಗಿಲ್ಲ.
ನವದೆಹಲಿ, ಮೇ 17: ಬ್ರಾಂಡ್ ಫೈನಾನ್ಸ್ ಎಂಬ ಕಂಪನಿಯು ನಡೆಸಿದ ಗ್ರಾಹಕ ಅಭಿಪ್ರಾಯ ಆಧಾರಿತ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಹೊರಹೊಮ್ಮಿದೆ. ಇನ್ನು, ಕನ್ನಡಿಗರ ಹೆಮ್ಮೆಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.
ಕಳೆದ ವರ್ಷವೂ ಇದೇ ಕಂಪನಿಯಿಂದ ಇದೇ ಮಾದರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಟಾಟಾ ಕಂಪನಿ ನಂಬರ್ ಒನ್ ಕಂಪನಿಯಾಗಿ ಹೊರಹೊಮ್ಮಿತ್ತು.

ಸಮೀಕ್ಷೆಯಲ್ಲಿ ಏರ್ ಟೆಲ್ ಸಂಸ್ಥೆಯು ದೇಶದ ಎರಡನೇ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದ್ದರೆ, ಸರ್ಕಾರದ ಸ್ವಾಮ್ಯದ ಎಲ್ ಐಸಿ ಗ್ರಾಹಕರ ಮೂರನೇ ವಿಶ್ವಾಸಾರ್ಹ ಕಂಪನಿ ಎನಿಸಿದೆ.
ಕಳೆದ ವರ್ಷದ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಆ ಸ್ಥಾನವನ್ನು ಟಾಟಾ ಕಂಪನಿ ಕಳೆದುಕೊಳ್ಳಬಹುದೆಂಬ ಅನುಮಾನವಿತ್ತು. ಅದಕ್ಕೆ ಕಾರಣ, ಇತ್ತೀಚೆಗೆ ಟಾಟಾ ಸಮೂಹ ಕಂಪನಿಗಳಲ್ಲಿ ಆದ ಒಳಜಗಳ.
ಕಂಪನಿಯ ಮುಖ್ಯಸ್ಥರಾಗಿದ್ದ ಸೈರಸ್ ಮಿಸ್ತ್ರಿಯವರನ್ನು ಕಂಪನಿಯಿಂದ ಹೊರಹಾಕಿದ್ದು ಆನಂತರ, ರತನ್ ಟಾಟಾ ಅವರೇ ಕಂಪನಿಯ ಜವಾಬ್ದಾರಿ ಹೊತ್ತಿದ್ದು ಹಾಗೂ ಆನಂತರದ ಮಿಸ್ತ್ರಿ ಅವರು ಕಾನೂನು ಸಮರ ಸಾರಿದ್ದು... ಇವೇ ಮುಂತಾದ ವಿಚಾರಗಳಿಂದಾಗಿ, ಟಾಟಾ ಕಂಪನಿಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಹಾಗಾಗಿಲ್ಲ. ಈಗಲೂ 150 ವರ್ಷಗಳ ಹಿಂದಿನ ಟಾಟಾ ಕಂಪನಿಯ ಮೇಲೆ ಜನರ ವಿಶ್ವಾಸ ಅಚಲವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಕಂಪನಿ ಹೇಳಿಕೊಂಡಿದೆ.
ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಜನರ ನಂಬಿಕೆ ಗಳಿಸಿದ ಟಾಪ್ 10 ಕಂಪನಿಗಳು ಇಲ್ಲಿವೆ.
1. ಟಾಟಾ
2. ಏರ್ ಟೆಲ್
3. ಎಲ್ಐಸಿ
4. ಇನ್ಫೋಸಿಸ್
5. ಎಸ್ ಬಿಐ
6. ರಿಲಯನ್ಸ್
7. ಎಲ್ ಆ್ಯಂಡ್ ಟಿ
8. ಇಂಡಿಯನ್ ಆಯಿಲ್
9. ಎಚ್ ಸಿಎಲ್
10. ಮಹಿಂದ್ರಾ
{promotion-urls}
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications