ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಟಾಟಾ: ಇನ್ಫಿಗೆ 4ನೇ ಸ್ಥಾನ
ಕಳೆದ ವರ್ಷದ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಆ ಸ್ಥಾನವನ್ನು ಟಾಟಾ ಕಂಪನಿ ಕಳೆದುಕೊಳ್ಳಬಹುದೆಂಬ ಅನುಮಾನವಿತ್ತು. ಆದರೆ, ಹಾಗಾಗಿಲ್ಲ.
ನವದೆಹಲಿ, ಮೇ 17: ಬ್ರಾಂಡ್ ಫೈನಾನ್ಸ್ ಎಂಬ ಕಂಪನಿಯು ನಡೆಸಿದ ಗ್ರಾಹಕ ಅಭಿಪ್ರಾಯ ಆಧಾರಿತ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಹೊರಹೊಮ್ಮಿದೆ. ಇನ್ನು, ಕನ್ನಡಿಗರ ಹೆಮ್ಮೆಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.
ಕಳೆದ ವರ್ಷವೂ ಇದೇ ಕಂಪನಿಯಿಂದ ಇದೇ ಮಾದರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಟಾಟಾ ಕಂಪನಿ ನಂಬರ್ ಒನ್ ಕಂಪನಿಯಾಗಿ ಹೊರಹೊಮ್ಮಿತ್ತು.

ಸಮೀಕ್ಷೆಯಲ್ಲಿ ಏರ್ ಟೆಲ್ ಸಂಸ್ಥೆಯು ದೇಶದ ಎರಡನೇ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದ್ದರೆ, ಸರ್ಕಾರದ ಸ್ವಾಮ್ಯದ ಎಲ್ ಐಸಿ ಗ್ರಾಹಕರ ಮೂರನೇ ವಿಶ್ವಾಸಾರ್ಹ ಕಂಪನಿ ಎನಿಸಿದೆ.
ಕಳೆದ ವರ್ಷದ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಆ ಸ್ಥಾನವನ್ನು ಟಾಟಾ ಕಂಪನಿ ಕಳೆದುಕೊಳ್ಳಬಹುದೆಂಬ ಅನುಮಾನವಿತ್ತು. ಅದಕ್ಕೆ ಕಾರಣ, ಇತ್ತೀಚೆಗೆ ಟಾಟಾ ಸಮೂಹ ಕಂಪನಿಗಳಲ್ಲಿ ಆದ ಒಳಜಗಳ.
ಕಂಪನಿಯ ಮುಖ್ಯಸ್ಥರಾಗಿದ್ದ ಸೈರಸ್ ಮಿಸ್ತ್ರಿಯವರನ್ನು ಕಂಪನಿಯಿಂದ ಹೊರಹಾಕಿದ್ದು ಆನಂತರ, ರತನ್ ಟಾಟಾ ಅವರೇ ಕಂಪನಿಯ ಜವಾಬ್ದಾರಿ ಹೊತ್ತಿದ್ದು ಹಾಗೂ ಆನಂತರದ ಮಿಸ್ತ್ರಿ ಅವರು ಕಾನೂನು ಸಮರ ಸಾರಿದ್ದು... ಇವೇ ಮುಂತಾದ ವಿಚಾರಗಳಿಂದಾಗಿ, ಟಾಟಾ ಕಂಪನಿಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಹಾಗಾಗಿಲ್ಲ. ಈಗಲೂ 150 ವರ್ಷಗಳ ಹಿಂದಿನ ಟಾಟಾ ಕಂಪನಿಯ ಮೇಲೆ ಜನರ ವಿಶ್ವಾಸ ಅಚಲವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಕಂಪನಿ ಹೇಳಿಕೊಂಡಿದೆ.
ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಜನರ ನಂಬಿಕೆ ಗಳಿಸಿದ ಟಾಪ್ 10 ಕಂಪನಿಗಳು ಇಲ್ಲಿವೆ.
1. ಟಾಟಾ
2. ಏರ್ ಟೆಲ್
3. ಎಲ್ಐಸಿ
4. ಇನ್ಫೋಸಿಸ್
5. ಎಸ್ ಬಿಐ
6. ರಿಲಯನ್ಸ್
7. ಎಲ್ ಆ್ಯಂಡ್ ಟಿ
8. ಇಂಡಿಯನ್ ಆಯಿಲ್
9. ಎಚ್ ಸಿಎಲ್
10. ಮಹಿಂದ್ರಾ
{promotion-urls}
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications