ಟಾಟಾದಿಂದ 148 ರುಗಳಿಗೆ ಅನಿಯಮಿತ ಕರೆ ಯೋಜನೆ
ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್(ಟಿಟಿಎಲ್)ನ ಟಾಟಾ ಡೊಕೊಮೊ ಕರ್ನಾಟಕದ ತನ್ನ ಗ್ರಾಹಕರಿಗಾಗಿ ಒಂದು ಆಕರ್ಷಕ ಅನಿಯಮಿತ ಕರೆಗಳ' ಯೋಜನೆಯನ್ನು ಪ್ರಕಟಿಸಿದೆ.
ಬೆಂಗಳೂರು, 26 ನೇ ಡಿಸೆಂಬರ್ 2016: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್(ಟಿಟಿಎಲ್)ನ ಟಾಟಾ ಡೊಕೊಮೊ ಕರ್ನಾಟಕದ ತನ್ನ ಗ್ರಾಹಕರಿಗಾಗಿ ಒಂದು ಆಕರ್ಷಕ ಅನಿಯಮಿತ ಕರೆಗಳ' ಯೋಜನೆಯನ್ನು ಪ್ರಕಟಿಸಿದೆ.
ಈ ಯೋಜನೆಯಲ್ಲಿ ಗ್ರಾಹಕರು ಕೇವಲ 148 ರೂಪಾಯಿಗಳಿಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಬಹುದು. ಈ ಯೋಜನೆ ಪ್ರೀ-ಪೇಯ್ಡ್ ಗ್ರಾಹಕರಿಗೆ ಲಭ್ಯವಿದ್ದು, ಇದರನ್ವಯ ತಡೆರಹಿತವಾಗಿ ಮಾತನಾಡಬಹುದು. ಅಲ್ಲದೇ ಇದರ ಜೊತೆಗೆ 3ಜಿ ಡೇಟಾವನ್ನೂ(ಆಯ್ದ ಪ್ಯಾಕ್ ಗಳಲ್ಲಿ) ಮಾರುಕಟ್ಟೆಯಲ್ಲಿಯೇ ಅತ್ಯುತ್ತಮ ದರದಲ್ಲಿ ಬಳಸಬಹುದಾಗಿದೆ. [ಡೊಕೊಮೊದಿಂದ 350 ರುಗಳಿಗೆ, ಪೋಸ್ಟ್-ಪೇ ಆಫರ್]
ಈ ಹೊಸ ಕರೆ ಯೋಜನೆಗಳ ಪ್ರಕಾರ ಟಾಟಾ ಡೊಕೊಮೊ ಗ್ರಾಹಕರು 348 ರೂಪಾಯಿಗಳಲ್ಲಿ 5 ಜಿಬಿ 3ಜಿ ಡೇಟಾದೊಂದಿಗೆ 28 ದಿನಗಳ ವಾಯಿದೆಯೊಂದಿಗೆ ಯಾವುದೇ ನೆಟ್ವರ್ಕ್ ಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಬಹುದು.

ಅದೇ ರೀತಿ, 298 ರೂಪಾಯಿಗಳಲ್ಲಿ 2ಜಿಬಿ 3ಜಿ ಡೇಟಾದೊಂದಿಗೆ ಅನಿಯಮಿತ ಕರೆಗಳ ಸೇವೆಯನ್ನು 28 ದಿನಗಳ ವಾಯಿದೆಯೊಂದಿಗೆ ಪಡೆಯಬಹುದು. ಇನ್ನೂ ಹೆಚ್ಚುವರಿಯಾಗಿ ಈ ಯೋಜನೆಗಳಡಿ ಪ್ರೀ-ಪೇ ಗ್ರಾಹಕರು ಕೇವಲ 148 ರೂಪಾಯಿಗಳಲ್ಲಿ 14 ದಿನಗಳವರೆಗೆ 500 ಎಂಬಿ 3ಜಿ ಡೇಟಾದೊಂದಿಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಲು ಅವಕಾಶವಿದೆ. ಈ ಎಲ್ಲಾ ಯೋಜನೆಗಳ ಹೊರತಾಗಿ ಗ್ರಾಹಕರು ಕೇವಲ 103 ರೂಪಾಯಿಗಳ ರೀಚಾರ್ಜ್ ನಲ್ಲಿ ದೇಶಾದ್ಯಂತ ಇರುವ ಟಾಟಾ ಡೊಕೊಮೊ ಗ್ರಾಹಕರಿಗೆ 28 ದಿನಗಳವರೆಗೆ ಆನ್-ನೆಟ್ ಕರೆಗಳನ್ನು ಅನಿಯಮಿತವಾಗಿ 500 ಎಂಬಿ 3ಜಿ ಡೇಟಾದೊಂದಿಗೆ ಮಾಡಬಹುದು.
ಈ ಅನಿಯಮಿತ ಯೋಜನೆಗಳ ಬಗ್ಗೆ ಮಾತನಾಡಿದ ಟಿಟಿಎಸ್ಎಲ್ ನ ಕರ್ನಾಟಕ ಮತ್ತು ಕೇರಳ ವೃತ್ತಗಳ ಸಿಬಿಯು ಮುಖ್ಯಸ್ಥರಾದ ಬಾಲಾಜಿ ಪ್ರಕಾಶ್ ಅವರು, 'ಈ ಅನಿಯಮಿತ ಯೋಜನೆಗಳ ಮೂಲಕ ನಮ್ಮ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಗರಿಷ್ಟ ಗುಣಮಟ್ಟದ ಧ್ವನಿ ಮತ್ತು ಡೇಟಾ ಸೇವೆಗಳನ್ನು ನೀಡುತ್ತಿದ್ದೇವೆ. ಅನಿಯಮಿತ ಕರೆಗಳು ಮತ್ತು ಹೇರಳವಾದ ಡೇಟಾ ಸೇವೆಯನ್ನು ಲಭ್ಯವಿರುವ ದರದಲ್ಲಿ ನೀಡುತ್ತಿದ್ದೇವೆ. ನಮ್ಮ ಗ್ರಾಹಕರ ಹೆಚ್ಚಾಗುತ್ತಿರುವ ಬೇಡಿಕೆಗಳಿಗೆ ಈ ಅನಿಯಮಿತ ಯೋಜನೆಗಳು ಸೂಕ್ತ ಎನಿಸಲಿವೆ. ಇದು ನಮ್ಮ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯಾಗಿದ್ದು, ಪ್ರಸ್ತುತ ಇರುವ ರಜಾ ಋತುವಿನಲ್ಲಿ ನಮ್ಮ ಗ್ರಾಹಕರು ಅತ್ಯಧಿಕವಾದ ಧ್ವನಿ ಮತ್ತು ಡೇಟಾ ಬಳಕೆ ಮಾಡಲಿ ಎಂಬುದು ನಮ್ಮ ಆಶಯವಾಗಿದೆ. ನಮ್ಮ ಗ್ರಾಹಕಸ್ನೇಹಿ ಸೇವೆಗಳೊಂದಿಗೆ ನಮ್ಮ ಗ್ರಾಹಕರನ್ನು ಸದಾ ಸಂತೋಷದಿಂದ ಇರುವಂತೆ ಮಾಡಲು ನಾವು ಬದ್ಧರಾಗಿದ್ದೇವೆ' ಎಂದು ತಿಳಿಸಿದರು.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications