ಎಸ್ ಬಿಐನಲ್ಲೂ ಇನ್ನು ಮುಂದೆ ಹಣ ವ್ಯವಹಾರಕ್ಕೆ ಕಟ್ಟಬೇಕು ಶುಲ್ಕ
ಇತ್ತೀಚೆಗಷ್ಟೇ ಸೇವಿಂಗ್ ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟಿರದ ಗ್ರಾಹಕರಿಗೆ ದಂಡ ಹಾಕುವ ನಿರ್ಧಾರ ಕೈಗೊಂಡಿದ್ದ ಎಸ್ ಬಿಐನಿಂದ ಈಗ ಮತ್ತೊಂದು ಬಾಣ ಪ್ರಯೋಗ.
ನವದೆಹಲಿ, ಮಾರ್ಚ್ 6: ಇತ್ತೀಚೆಗಷ್ಟೇ, ಖಾಸಗಿ ವಲಯಗಳ ಪ್ರಮುಖ ಬ್ಯಾಂಕುಗಳಾದ ಎಚ್ ಡಿಎಫ್ ಸಿ, ಐಸಿಐಸಿಐ, ಆ್ಯಕ್ಸಿಸ್ ಬ್ಯಾಂಕುಗಳು ತಮ್ಮಲ್ಲಿನ ಹಣದ ವ್ಯವಹಾರಗಳಿಗೆ ನಿರ್ದಿಷ್ಟ ಶುಲ್ಕವನ್ನು ನಿಗದಿಗೊಳಿಸುವ ಮೂಲಕ ಆ ಬ್ಯಾಂಕ್ ಗಳಲ್ಲಿ ವ್ಯವಹರಿಸುವ ಗ್ರಾಹಕರಿಗೆ ಶಾಕ್ ನೀಡಿದ್ದವು. ಇದೀಗ, ಅವುಗಳ ಸಾಲಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಸೇರಿಕೊಂಡಿದೆ.
ಮಾರ್ಚ್ 6ರಂದು ಬಿಡುಗಡೆಗೊಂಡಿರುವ ಎಸ್ ಬಿಐ ಪ್ರಕಟಣೆಯಲ್ಲಿ ಎಸ್ ಬಿಐನ ಯಾವುದೇ ಶಾಖೆಯಲ್ಲಿ ಉಚಿತವಾಗಿ ಹಣ ತುಂಬಿಸಲು ಕೇವಲ ಮೂರು ಅವಕಾಶಗಳನ್ನು ಮಾತ್ರ ನೀಡಲಾಗಿದ್ದು, ಆನಂತರದ ಎಲ್ಲಾ ಹಣದ ವ್ಯವಹಾರಗಳಿಗೆ (ಡೆಪಾಸಿಟ್ ಅಥವಾ ವಿತ್ ಡ್ರಾ) ನಿರ್ದಿಷ್ಠ ಶುಲ್ಕವನ್ನು ನಿಗದಿಗೊಳಿಸಿದೆ. ಈ ಹೊಸ ನಿಯಮ ಮುಂದಿನ ತಿಂಗಳ 1ನೇ ತಾರೀಖಿನಿಂದ (ಏಪ್ರಿಲ್ 1) ಜಾರಿಗೊಳ್ಳಲಿದೆ.[ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!]

ಇತ್ತೀಚೆಗಷ್ಟೇ, ತನ್ನಲ್ಲಿರುವ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಗ್ರಾಹಕರಿಗೆ ದಂಡ ವಿಧಿಸುವ ನಿಯಮವನ್ನು ಜಾರಿಗೊಳಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್, ಇದೀಗ, ತನ್ನ ಗ್ರಾಹಕರಿಗೆ ಮತ್ತೊಂದು ರೀತಿಯ ಬಿಸಿ ಮುಟ್ಟಿಸಿದೆ.
ವಿತ್ ಡ್ರಾ ಶುಲ್ಕ ಹೇಗೆ?
ಎಸ್ ಬಿಐ ಎಟಿಎಂಗಳ ಮೂಲಕ ಹಣ ಡ್ರಾ ಮಾಡುವುದಾದರೆ ತಿಂಗಳಿಗೆ ಐದು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ಆರನೇ ವಹಿವಾಟಿನಿಂದ ಪ್ರತಿ ವ್ಯವಹಾರಕ್ಕೆ 10 ರು.ರಂತೆ ಶುಲ್ಕ ವಿಧಿಸಲಾಗುವುದು. ಆದರೆ, ಬ್ಯಾಂಕು ಖಾತೆಯಲ್ಲಿ 25,000 ರು.ಗಳಿಗಿಂತಲೂ ಹೆಚ್ಚು ಹಣ ಇಟ್ಟುಕೊಂಡಿರುವ ಗ್ರಾಹಕರಿಗೆ ಈ ನಿಯಮ ಅನ್ವಯವಾಗದು ಎಂದು ಇಂಟರ್ ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ಹೇಳಿದೆ.
ಇತರ ಎಟಿಎಂಗಳ ಮೂಲಕ ಡ್ರಾ: ಇತರ ಬ್ಯಾಂಕುಗಳ ಎಟಿಎಂಗಳಿಂದ ಎಸ್ ಬಿಐ ಖಾತೆಯ ಹಣ ತೆಗೆಯುವುದಾದರೆ ಅದಕ್ಕೆ ತಿಂಗಳಿಗೆ ಮೂರು ಬಾರಿ ಉಚಿತ ಅವಕಾಶವುಂಟು. ಅದನ್ನು ಮೀರಿದ ವಿತ್ ಡ್ರಾ ಗಳಿಗೆ ಪ್ರತಿ ವ್ಯವಹಾರಕ್ಕೂ 20 ರು. ಶುಲ್ಕ ವಿಧಿಸಲಾಗುತ್ತದೆ.
ಎಸ್ ಎಂಎಸ್ ಗಳಿಗೂ ಶುಲ್ಕ: ಎಸ್ ಬಿಐ ಖಾತೆಯ ಹಣದ ವ್ಯವಹಾರಗಳ ಬಗ್ಗೆ ಎಸ್ಎಂಎಸ್ ಅಲರ್ಟ್ ಇಟ್ಟುಕೊಂಡಿದ್ದಲ್ಲಿ ಅವರಿಗೂ ಶುಲ್ಕ ಬೀಳಲಿದೆ. ವರ್ಷದ ಪ್ರತಿ ಮೂರು ತಿಂಗಳಿಗೆ ಯಾರ ಅಕೌಂಟಿನಲ್ಲಿ ಸರಾಸರಿ 25,000 ರು. ಹಣವಿರುವುದಿಲ್ಲವೋ ಅಂಥವರು ಎಸ್ಎಂಎಸ್ ಅಲರ್ಟ್ ಸೌಲಭ್ಯ ಪಡೆದಿದ್ದಲ್ಲಿ ಅವರಿಗೆ ಆ ಮೂರು ತಿಂಗಳಿಗೆ 15 ರು. ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಪ್ರತಿ ತಿಂಗಳಿಗೆ 5 ರು. ಶುಲ್ಕ ವಿಧಿಸಿದಂತಾಗುತ್ತದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications