ಡೆಬಿಡ್ ಕಾರ್ಡ್ ಇಎಂಐಗೆ ಚಾಲನೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮುಂಬೈ, ಅಕ್ಟೋಬರ್ 10: ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಪರಿಪೂರ್ಣ ಮತ್ತು ಕೈಗೆಟುಕುವ ಶಾಪಿಂಗ್ ಅನುಭವ ಒದಗಿಸುವ ದೃಷ್ಟಿಯಿಂದ, ದೇಶದ ಅತಿದೊಡ್ಡ ಸಾಲ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ "ಡೆಬಿಟ್ ಕಾರ್ಡ್ ಇಎಂಐ" ಸೌಲಭ್ಯವನ್ನು ತನ್ನ ಹಾಲಿ ಇರುವ ಗ್ರಾಹಕರಿಗಾಗಿ ಆರಂಭಿಸಿದೆ.
ಈ ಸೇವೆಯಡಿ, ಗ್ರಾಹಕರು ಆರು ತಿಂಗಳಿನಿಂದ ಹಿಡಿದು 18 ತಿಂಗಳವರೆಗೆ ಇಎಂಐ ಕಾಲಾವಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ದೇಶದ 1500ಕ್ಕೂ ಹೆಚ್ಚು ನಗರಗಳಲ್ಲಿರುವ 40 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳ ಮೂಲಕ ಪೈನ್ಲ್ಯಾಬ್ ಬ್ರಾಂಡ್ನ ಪಿಓಎಸ್ ಯಂತ್ರಗಳ ಸಹಾಯದಿಂದ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಲು ಅವಕಾಶವಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್, "ನಮ್ಮ ಗ್ರಾಹಕರಿಗೆ ಈ ವಿನೂತನ ಉತ್ಪನ್ನ ಬಿಡುಗಡೆ ಮಾಡಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಮೂಲಕ ಅವರು ಹಬ್ಬದ ಪ್ರಸಕ್ತ ಋತುವಿನಲ್ಲಿ ಆನಂದದಾಯಕ ಶಾಪಿಂಗ್ ಅನುಭವ ಆಸ್ವಾದಿಸಬಹುದಾಗಿದೆ. ಎಬಿಡ್ ಖಾರ್ಡ್ ಇಎಂಐ, ಗ್ರಾಹಕರಿಗೆ, ತಮ್ಮ ಡೆಬಿಡ್ಕಾರ್ಡ್ ಬಳಸಿಕೊಂಡೇ, ತಕ್ಷಣವೇ ಸಂಪೂರ್ಣ ಹಣವನ್ನು ಪಾವತಿಸದೇ, ಭಾರತದ ವಿವಿಧ ವ್ಯಾಪಾರಿ ಮಳಿಗೆಗಳಲ್ಲಿ ಇಎಂಐ ಮೂಲಕ ಅಗತ್ಯ ಗ್ರಾಹಕ ಸರಕುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಿದೆ. ಈ ವಿನೂತನ ಕ್ರಮದ ಮೂಲಕ ಎಸ್ಬಿಐ, ಗ್ರಾಹಕರ ಅನುಕೂಲತೆ ಮತ್ತು ತೃಪ್ತಿಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹೊಸ ಉತ್ಪನ್ನದ ಬಿಡುಗಡೆಯು, ಆಹ್ಲಾದಕರ ಮತ್ತು ಯಾವುದೇ ಅಡೆ ತಡೆ ಇಲ್ಲದ ಮುಕ್ತ ಖರೀದಿ ಮತ್ತು ಕಾಗದರಹಿತ ಸಾಲ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ" ಎಂದು ಬಣ್ಣಿಸಿದರು.

ಈ ವಿನೂತನ ಕ್ರಮದಿಂದ ಗ್ರಾಹಕರಿಗೆ ದೊರಕುವ ಕೆಲ ಪ್ರಯೋಜನಗಳೆಂದರೆ, ಶೂನ್ಯ ದಾಖಲೀಕರಣ, ಸಂಸ್ಕರಣಾ ಶುಲ್ಕವಿಲ್ಲದೇ, ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡದೇ, ಈ ಸೌಲಭ್ಯವನ್ನು ಬಳಸಿಕೊಂಡು ತಕ್ಷಣವೇ ವಿತರಿಸಲು ಸಾಧ್ಯವಾಗಲಿದೆ. ಜತೆಗೆ ಕೆಲ ಆಯ್ದ ಬ್ರಾಂಡ್ಗಳಲ್ಲಿ ವಹಿವಾಟು ಶುಲ್ಕ ಶೂನ್ಯವಾಗಿರುತ್ತದೆ. ಈ ಸೌಲಭ್ಯವು ಒಂದು ನಿಮಿಷದ ಒಳಗಾಗಿ ಗ್ರಾಹಕರಿಗೆ ಸಿಗಲಿದ್ದು, ಅವರ ಉಳಿತಾಯ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ವಹಿವಾಟು ಪೂಣಗೊಂಡ ಒಂದು ತಿಂಗಳ ಬಳಿಕ ಇಎಂಟಿ ಪಾವತಿ ಆರಂಭವಾಗುತ್ತದೆ.
ಸ್ವಚ್ಛ ಹಣಕಾಸು ಇತಿಹಾಸ ಮತ್ತು ಉತ್ತಮ ಸಾಲ ಇತಿಹಾಸ ಹೊಂದಿದ ಗ್ರಾಹಕರು ಈ ಸಾಲಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಇಂಥ ಗ್ರಾಹಕರಿಗೆ ಎಸ್ಎಂಎಸ್ ಮತ್ತು ಇ-ಮೇಲ್ನಲ್ಲಿ ಬ್ಯಾಂಕಿನಿಂದ ಮಾಹಿತಿ ನೀಡಲಾಗುತ್ತದ. ಅರ್ಹತೆಯ ಪರಿಶೀಲನೆಗಾಗಿ ಗ್ರಾಹಕರು, ಡಿಸಿಇಎಂಐಗೆ ಇ-ಮೇಲ್ ಮಾಡಿ ಅಥವಾ ದೂರವಾಣಿ: 567676ಗೆ ಡಿಸಿಇಎಂಐ ಎಂದು ನೋಂದಾಯಿತ ಸಂಖ್ಯೆಯಿಂದ ಎಸ್ಎಂಎಸ್ ಸಂದೇಶ ಕಳುಹಿಸಬಹುದು.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications