ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ 500, 1,000 ತಗೊಳ್ತಿಲ್ಲ
ಪೆಟ್ರೋಲ್ ಬಂಕ್ ಗಳಲ್ಲಂತೂ ವಿಪರೀತ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇಡೀ ದೇಶದಲ್ಲೇ ಇಂಥ ಸ್ಥಿತಿ ಇದೆ. ಇನ್ನು ಲೆಕ್ಕಾಚಾರದಲ್ಲಿ ಹಣ ಖರ್ಚು ಮಾಡುವ, ಅಗತ್ಯ ಕಂಡಾಗ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡುವ ವೇತನದಾರರು ಕಂಗಾಲಾಗಿದ್ದಾರೆ.
ಬೆಂಗಳೂರು, ನವೆಂಬರ್ 9: ಬಹುತೇಕ ಕಡೆ ಒಂದೇ ಥರದ ವಾತಾವರಣ. ಸಣ್ಣ ವಾಗ್ವಾದ, ಮಾತುಕತೆ, ಹೀಗೆ ಮಾಡಿದರೆ ಹೇಗೆ ಎಂಬ ಸಿಟ್ಟು..ಈ ದೃಶ್ಯಗಳ ಸ್ಥಳದ ಬದಲಾವಣೆ ಅದರೂ ಮಾತುಕತೆ, ಸಿಟ್ಟು, ಸೆಡವು ಮಾತ್ರ ಒಂದೇ ಥರ ಕಾಣುತ್ತಿದೆ. ನಿಮ್ಮ ಊಹೆ ನಿಜ. 500, 1000ದ ನೋಟು ತಗೊಳ್ತಾನೆ ಇಲ್ಲ ಅನ್ನೋದು ಎಲ್ಲ ಕಡೆ ಕೇಳಿ ಬರುತ್ತಿರುವ ಆರೋಪ.
ಪೆಟ್ರೋಲ್ ಬಂಕ್ ಗಳಲ್ಲಂತೂ ವಿಪರೀತ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇಡೀ ದೇಶದಲ್ಲೇ ಇಂಥ ಸ್ಥಿತಿ ಇದೆ. ಇನ್ನು ಲೆಕ್ಕಾಚಾರದಲ್ಲಿ ಹಣ ಖರ್ಚು ಮಾಡುವ, ತುಂಬ ಅಗತ್ಯ ಕಂಡಾಗ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡುವ ವೇತನದಾರರು ಅಕ್ಷರಶಃ ಕಂಗಾಲಾಗಿದ್ದಾರೆ. ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ದುಡ್ಡನ್ನೇ ಕೊಡುತ್ತಿದ್ದಾರೆ.[ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

ಆದರೆ, 72 ಗಂಟೆ ಕಾಲ ಪೆಟ್ರೋಲ್ ಬಂಕ್ ಗಳಲ್ಲಿ ಹಳೆ 500, 1000ದ ನೋಟು ತಗೋಬೇಕು. ಆದರೆ ಕೆಲವು ಬಂಕ್ ಗಳಲ್ಲಿ ಸ್ವೀಕರಿಸುತ್ತಿಲ್ಲ. ಕೆಲವರಂತೂ ತಮ್ಮ ಬಳಿಯಿರುವ ಹಳೇ ನೋಟು ಬಂಕ್ ಗಳಲ್ಲಿ ಬದಲಿಸಿಕೊಳ್ಳಬಹುದು ಅಂತಲೇ ಹೋಗ್ತಿದ್ದಾರೆ. ಬ್ಯಾಂಕ್ ನಲ್ಲಿ ವಿಪರೀತ ಅನ್ನೋಷ್ಟು ಜನ ಸೇರ್ತಾರೆ. ಆದ್ದರಿಂದ ಬಂಕ್ ಸುಲಭದ ಮಾರ್ಗ ಎಂದು ಹಲವರು ಯೋಚಿಸ್ತಿದ್ದಾರೆ.

ಬ್ಯಾಂಕ್ ಗಳು ತೆರೆದು, ಅವು ಪುರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸುವವರೆಗೆ ಈ ಸಮಸ್ಯೆ ಹೀಗೆ ಇರುತ್ತೆ. ಇನ್ನು ಬುಧವಾರ ದಿನದ ಆರಂಭದಲ್ಲೇ ಈ ಪರಿಯ ಗೊಂದಲ ಕಾಣಿಸಿಕೊಂಡಿದೆ. ಇನ್ನು ಸಂಜೆ ಹಾಗೂ ರಾತ್ರಿ ವೇಳೆಗೆ ಹೇಗಾಗಬಹುದು ಎಂಬ ಚಿಂತೆ ಎದುರಾಗಿದೆ. ಈ ಸನ್ನಿವೇಶ ಎದುರಿಸುವುದು ದೇಶದಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಿಗೆ ಸಲೀಸಲ್ಲ.[ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications