ನೋಟು ಮುದ್ರಣ ಹೆಚ್ಚಳ: ಕ್ಯಾಶ್ಲೆಸ್ ಇಂಡಿಯಾ ಕಥೆಯೇನು?
ನವದೆಹಲಿ, ಆಗಸ್ಟ್ 30: ಅಪನಗದೀಕರಣದ ಬಳಿಕ ಹಿಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೋಟುಗಳನ್ನು ಮುದ್ರಿಸಿದೆ.
ಡಿಜಿಟಲ್ ಇಂಡಿಯಾದ ಗುರಿಯಲ್ಲಿ 'ನಗದು ರಹಿತ' ಭಾರತದ ನಿರ್ಮಾಣದ ಮೋದಿ ಸರ್ಕಾರದ ಉದ್ದೇಶಕ್ಕೆ ವ್ಯತಿರಿಕ್ತವಾದ ಸನ್ನಿವೇಶ ಕಂಡುಬಂದಿದೆ.
ಅಪನಗದೀಪಕರಣ ಬಳಿಕದ ಎರಡು ವರ್ಷಗಳಲ್ಲಿ ಹೊಸ ನೋಟ್ಗಳ ಪ್ರಮಾಣ ಮತ್ತು ಮುದ್ರಣ ಮೌಲ್ಯಗಳಲ್ಲಿ ಗಣನೀಯ ಹೆಚ್ಚಳವಾಗಿದೆ. 2016ರ ನವೆಂಬರ್ 8ರಂದು ಅಪನಗದೀಕರಣದ ಘೋಷಣೆ ಮಾಡಲಾಗಿತ್ತು. ಅದಕ್ಕೂ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಲಾಗಿದೆ.

ಎರಡು ನೋಟು ಮುದ್ರಣ ಕಂಪೆನಿಗಳಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿ (ಬಿಆರ್ಬಿಎನ್ಎಂಪಿಎಲ್) ಮತ್ತು ಸೆಕ್ಯುಟಿರಿ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. (ಎಸ್ಪಿಎಂಸಿಐಎಲ್) 2018-19ನೇ ಸಾಲಿನಲ್ಲಿ 2,919.1 ಕೋಟಿ ನೋಟುಗಳನ್ನು ಮುದ್ರಿಸಿವೆ. ಇದು 2016-17 ಹಾಗೂ ಅದಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಧಿಕ ಸಂಖ್ಯೆಯ ನೋಟುಗಳ ಪೂರೈಕೆಯಾಗಿದೆ.
2016-17ನೇ ಸಾಲಿನಲ್ಲಿ 13.39 ಲಕ್ಷ ಕೋಟಿ ರೂ. ಒಟ್ಟುಮುಖಬೆಲೆಯ ಹೊಸ ನೋಟುಗಳನ್ನು ಪೂರೈಸಿದೆ. 2016-17ರಲ್ಲಿ ಇದು 7.26 ಲಕ್ಷ ಕೋಟಿ ರೂ. ಇತ್ತು.
ಈ ಎರಡೂ ಕಂಪೆನಿಗಳು ಪೂರೈಕೆ ಮಾಡುತ್ತಿರುವ ಹೊಸ ನೋಟುಗಳ ಮೌಲ್ಯ ಶೇ 16.1ರಷ್ಟು ಹೆಚ್ಚಾಗಿದೆ. ಇದು ಭಾರತದ ಜಿಡಿಪಿಯ ಶೇ 11.2ರಷ್ಟು ಹೆಚ್ಚು. ನೋಟು ಅಪನಗದೀಕರಣದ ಬಳಿಕ 2016-17ರಲ್ಲಿ ತನ್ನ ಆದಾಯ ಶೇ 23.56ರಷ್ಟು ಕುಸಿತವಾಗಿದ್ದರೆ, ವೆಚ್ಚ ಶೇ 107.84ರಷ್ಟು ಅಧಿಕವಾಗಿತ್ತು ಎಂದು ಆರ್ಬಿಐ ತಿಳಿಸಿತ್ತು.
2000 ರೂ. ಮುಖಬೆಲೆಯ ನೋಟುಗಳ ಚಲಾವಣೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆರ್ಬಿಐ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸುತ್ತಿದೆ. ನಗದು ರಹಿತ ಭಾರತದ ಕನಸು ಬಿತ್ತಿರುವ ಮೋದಿ ಸರ್ಕಾರದ ಆಶಯ ಇಲ್ಲಿ ನೆರವೇರುವ ಸೂಚನೆ ಕಾಣಿಸುತ್ತಿಲ್ಲ. ಹೆಚ್ಚಿನ ಕಡೆ ಡಿಜಿಟಲ್ ವಹಿವಾಟು ನಡೆಯುತ್ತಿದ್ದರೂ ಅಧಿಕ ಪ್ರಮಾಣದಲ್ಲಿ ನೋಟುಗಳು ಚಲಾವಣೆಗೆ ಬರುತ್ತಿವೆ.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications