ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್!
ನವದೆಹಲಿ, ಡಿ.10: ಭಾರತೀಯ ವಾಯು ಸೇನೆ ತನ್ನ ಸಿಬ್ಬಂದಿಗಳಿಗೆ ಚೀನಾ ಮೂಲದ ಹ್ಯಾಂಡ್ ಸೆಟ್ ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದು ನೆನಪಿರಬಹುದು. ಈಗ ಪೇಟೆಂಟ್ ಸಮಸ್ಯೆಯಿಂದ ಬಳಲುತ್ತಿರುವ ಚೀನಾ ಮೊಬೈಲ್ ಮಾರಾಟ ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಹೀಗಾಗಿ ಸದ್ಯಕ್ಕೆ ಚೀನಾದ ಶಿಯೋಮಿ ರೆಡ್ಮಿ ಮೊಬೈಲ್ ಫೋನ್ ಗಳು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಆನ್ ಲೈನ್ ಮೂಲಕ ಫ್ಲಿಪ್ ಕಾರ್ಟ್ ಸಂಸ್ಥೆ ರೆಡ್ಮಿ ಮೊಬೈಲ್ ಗಳನ್ನು ಮಾರುತ್ತಿದೆ.
ಅದರೆ, ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸುತ್ತಿರುವ ಈ ಮೊಬೈಲ್ ಗಳು ಪೇಟೆಂಟ್ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಶಿಯೋಮಿ ಮೊಬೈಲ್ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. [ಭದ್ರತಾ ವೈಫಲ್ಯ, ಚೀನಾ ಮೊಬೈಲ್ ಸಂಸ್ಥೆ ಹೇಳಿದ್ದೇನು? ]
ಚೀನಾದ ಕ್ಸಿಯೋಮಿ ರೆಡ್ಮಿ 1ಎಸ್ ಮೊಬೈಲ್ ಫೋನ್ ಬಳಸುವುದರಿಂದ ದೇಶದ ಭದ್ರತಾ ವ್ಯವಸ್ಥೆಯ ಗೌಪ್ಯತಾ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಸೇನೆ ಸಂಶಯ ವ್ಯಕ್ತಪಡಿಸಿತ್ತು. ಈ ಬಗ್ಗೆ ಕೊನೆಗೂ ಎಚ್ಚೆತ್ತುಕೊಂಡ ಚೀನಾ ಕಂಪನಿ ಸುರಕ್ಷತಾ ನಿಯಮಗಳನ್ನು ಬದಲಾಯಿಸಿ ಗ್ರಾಹಕರ ಮಾಹಿತಿ ರಕ್ಷಣೆಗೆ ಮುಂದಾಗಿತ್ತು. ಈಗ ಪೇಟೆಂಟ್, ಲೈಸನ್ಸ್ ಸಮಸ್ಯೆಯ ಸುಳಿಯಲ್ಲಿ ಚೀನಾ ಸಂಸ್ಥೆ ಸಿಲುಕಿದೆ.

ಜಸ್ಟೀಸ್ ಜಿಪಿ ಮಿತ್ತಲ್ ಅವರು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶಿಯೋಮಿ ಫೋನ್ ಗಳು ಆಮದು ತಡೆಯುವಂತೆ ಸೂಚಿಸಿದ್ದಾರೆ. ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ದುರ್ಬಳಕೆ ಬಗ್ಗೆ ಉತ್ತರ ನೀಡಿ ಅಫಡವಿಟ್ ಸಲ್ಲಿಸುವಂತೆ ಶಿಯೋಮಿ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳಿಗೆ ಕೋರ್ಟ್ ಸೂಚಿಸಿದೆ.
ಲೈಸನ್ಸ್ ಪಡೆಯದೆ ಮಾರಾಟ: ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸಲು ಅಗತ್ಯವಾಗಿದ್ದ ಲೈಸನ್ಸ್ ಪಡೆಯದೆ ಶಿಯೋಮಿ ಸಂಸ್ಥೆ ಮೊಬೈಲ್ ಗಳನ್ನು ಮಾರಾಟ ಮಾಡಿರುವ ಅರೋಪ ಹೊತ್ತುಕೊಂಡಿದೆ.
ಈಗ ಶಿಯೋಮಿ ಹಾಗೂ ಫ್ಲಿಫ್ ಕಾರ್ಟ್ ಇಲ್ಲಿತನಕ ಮಾರಾಟವಾದ ಎಎಂಆರ್, ಎಡ್ಜ್, 3ಜಿ ಸಾಧನಗಳು ಎಷ್ಟು? ಇದರಿಂದ ಗಳಿಸಿದ್ದೆಷ್ಟು ಎಂಬ ವಿವರಗಳನ್ನು ತನಿಖೆ ನಡೆಸುವ ಮೂವರು ಆಯುಕ್ತರಿಗೆ ನೀಡಬೇಕು. ಆಯುಕ್ತರ ಖರ್ಚು ವೆಚ್ಚ(ಸುಮಾರು 3.5ಲಕ್ಷ ರು)ವನ್ನು ಎರಿಕ್ಸನ್ ಸಂಸ್ಥೆ ಭರಿಸಲಿದೆ. ಈ ತನಿಖಾ ತಂಡ ನಾಲ್ಕು ವಾರಗಳಲ್ಲಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಿದೆ.
ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಯವಾದ ರೆಡ್ಮಿ 1 ಎಸ್ ಮೊಬೈಲ್ ಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. 7ನೇ ಫ್ಲಾಶ್ ಸೇಲ್ ನಲ್ಲಿ ಸುಮಾರು 90,000 ಹ್ಯಾಂಡ್ ಸೆಟ್ ಗಳನ್ನು ಕ್ಷಣಾರ್ಧದಲ್ಲಿ ಮಾರಾಟ ಮಾಡಿತ್ತು. 4.2 ಸೆಕೆಂಡುಗಳಲ್ಲಿ 40,000ಕ್ಕೂ ಅಧಿಕ ಹ್ಯಾಂಡ್ ಸೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿತ್ತು. (ಪಿಟಿಐ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications