ಇನ್ಫೋಸಿಸ್ ಉದ್ಯೋಗಿಗಳಿಗೆ 'ವಸ್ತ್ರ ಸ್ವಾತಂತ್ರ್ಯ' ಕೊಟ್ಟ ಸಿಕ್ಕಾ
ಬೆಂಗಳೂರು, ಜೂ.2: ಉದ್ಯೋಗಿಗಳಿಗೆ ಪ್ರತ್ಯೇಕ ಇಮೇಲ್ ಕಳಿಸಿ ಕಾಳಜಿ ತೋರುವ ಮೂಲಕ ಗಮನ ಸೆಳೆದಿದ್ದ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಮತ್ತೊಂದು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ಫೋಸಿಸ್ ಎಂದರೆ ಸ್ಕೂಲ್, ಕಾಲೇಜಿನ ರೀತಿ ಡ್ರೆಸ್ ಕೋಡ್ ಎಂಬ ಮಾತನ್ನು ತುಂಡರಿಸಿದ್ದಾರೆ.
ಡ್ರೆಸ್ ಕೋಡ್ ಇನ್ಮುಂದೆ ಇರಲ್ಲ, ಜೀನ್ಸ್, ಟೀಶರ್ಟ್ ಹಾಕಿಕೊಂಡು ಬನ್ನಿ ಪರ್ವಾಗಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಇ ಮೇಲ್ ಕಳಿಸಿದೆ. ಜೂ,1ರಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ.ನಿಮ್ಮ ನೆಚ್ಚಿನ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಹಾಕಿಕೊಂಡು ಪ್ರತಿದಿನ ಉದ್ಯೋಗಕ್ಕೆ ಬನ್ನಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಯಮ ಬದಲಾಯಿಸಲು ನಾವು ಸಿದ್ಧ ಎಂದು ಇ ಮೇಲ್ ಕಳಿಸಲಾಗಿದೆ. [ಐಫೋನ್ ಕೊಡುಗೆ ನೀಡಿದ ಸಿಕ್ಕಾ]

ಕಳೆದ ಒಂದು ವಾರದಿಂದ ಡ್ರೆಸ್ ಕೋಡ್, ಟೈ, ಸೂಟು ಬೂಟು ಎಲ್ಲವೂ ಇನ್ಮುಂದೆ ಇರಲ್ವಂತೆ ಎಂಬ ಸುದ್ದಿ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಹರಿದಾಡುತ್ತಿತ್ತು. ಈಗ ಇದು ಜಾರಿಗೊಂಡಿದೆ. ಇದಕ್ಕೂ ಮುನ್ನ ಇತರೆ ಕೆಲವು ಐಟಿ ಕಂಪನಿಗಳಂತೆ ಇನ್ಫೋಸಿಸ್ ನಲ್ಲಿ ಶುಕ್ರವಾರ ಮಾತ್ರ ಕ್ಯಾಷುಯಲ್ ಡ್ರೆಸ್ ಹಾಕಿಕೊಂಡು ಕಚೇರಿಗೆ ಹೋಗಬಹುದಿತ್ತು. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]
ಎಷ್ಟೋ ಸಂದರ್ಭಗಳಲ್ಲಿ ಟೈ ಕಟ್ಟಿಕೊಳ್ಳದಿದ್ದರೆ ಮುಖ್ಯದ್ವಾರದಿಂದ ಒಳಗ್ಗೆ ಪ್ರವೇಶವೇ ಸಿಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿ ಬಂದ ಮೇಲೆ ಕಳೆದ ವರ್ಷ ಟೈ ಕಡ್ಡಾಯವನ್ನು ಇನ್ಫಿ ಹಿಂದೆ ಪಡೆದಿತ್ತು.
ಈಗ ಸಿಕ್ಕಾರಂತೆ ಕಪ್ಪು ಟೀ ಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿ ಇನ್ಫಿ ಉದ್ಯೋಗಿಗಳು ಕಾರ್ಯ ನಿರ್ವಹಿಸಬಹುದಾಗಿದೆ. ಇದೆಲ್ಲವೂ ಆಟ್ರಿಷನ್ ರೇಟ್ ತಗ್ಗಿಸಿ, ಉದ್ಯೋಗಿಗಳನ್ನು ಕಂಪನಿಯಲ್ಲೇ ಉಳಿಸಿಕೊಳ್ಳಲು ಸಿಕ್ಕಾ ಕೈಗೊಂಡ ಕ್ರಮ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications