ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಕಂಪನಿ ಆರೋಪಕ್ಕೆ ನಾರಾಯಣ ಮೂರ್ತಿ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಆಗಸ್ಟ್ 18: "ನನ್ನ ಮಕ್ಕಳಿಗಾಗಿ ಯಾವುದೇ ಹಣ, ಹುದ್ದೆ ಕೇಳ್ತಿಲ್ಲ. ಅಥವಾ ಅಧಿಕಾರವನ್ನೂ ಕೇಳ್ತಿಲ್ಲ" ಎಂದು ಇನ್ಫೋಸಿಸ್ ನ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಆಡಳಿತ ಮಂಡಳಿಗೆ ತಿರುಗೇಟು ನೀಡಿದ್ದಾರೆ. ಇನ್ಫೋಸಿಸ್ ಸಿಇಒ ಹಾಗೂ ಎಂ.ಡಿ.ವಿಶಾಲ್ ಸಿಕ್ಕಾ ರಾಜೀನಾಮೆ ನಂತರ ಅವರು ಪ್ರತಿಕ್ರಿಯಿಸಿದ್ದಾರೆ.

ಕೊಚ್ಚಿ ಹೋದ ಇನ್ಫಿ ಷೇರು ಮೌಲ್ಯದ 30 ಸಾವಿರ ಕೋಟಿ, ಇದು ಸಿಕ್ಕಾ ಎಫೆಕ್ಟ್ಕೊಚ್ಚಿ ಹೋದ ಇನ್ಫಿ ಷೇರು ಮೌಲ್ಯದ 30 ಸಾವಿರ ಕೋಟಿ, ಇದು ಸಿಕ್ಕಾ ಎಫೆಕ್ಟ್

ನಾರಾಯಣ ಮೂರ್ತಿ ಅವರು ಸತತವಾಗಿ ದಾಳಿ ನಡೆಸಿದ್ದರಿಂದ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ ಎಂಬ ಇನ್ಫೋಸಿಸ್ ಆಡಳಿತ ಮಂಡಳಿಯ ಆರೋಪಕ್ಕೆ ಖಾರವಾಗಿ ಉತ್ತರಿಸಿದ್ದಾರೆ. ಕಂಪನಿಯ ಆಡಳಿತ ಮಂಡಳಿ ಹಾಗೂ ಮೇಲ್ ಸ್ತರದ ಹುದ್ದೆಯಲ್ಲಿರುವವರ ಜತೆಗೆ ಕಳೆದ ಕೆಲ ಕಾಲದಿಂದ ಇನ್ಫಿ ಮೂರ್ತಿಯವರ ತಿಕ್ಕಾಟ ನಡೆದಿತ್ತು.

Narayana Murthy reaction to Infosys board allegation

"ಈ ಆರೋಪಕ್ಕೆ ಸರಿಯಾದ ರೀತಿಯಲ್ಲಿ, ವೇದಿಕೆಯಲ್ಲಿ ಹಾಗೂ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ" ಎಂದು ನಾರಾಯಣ ಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಕ್ಕಾ ಮಾಡಿದ ಆರೋಪಗಳು ಆಧಾರರಹಿತವಾದವು. ಅವುಗಳಿಗೆ ಪ್ರತಿಕ್ರಿಯೆ ನೀಡಿದರೆ ನನ್ನ ಗೌರವಕ್ಕೇ ಕುಂದಾಗುತ್ತದೆ ಎಂದು ಮೂರ್ತಿ ಹೇಳಿದ್ದಾರೆ.

ಇನ್ನು ಸಿಕ್ಕಾ ಬಗ್ಗೆ ಅವರು ಮಾತನಾಡಿದ್ದು, ವಿಶಾಲ್ ಸಿಕ್ಕಾ ಪದೇಪದೇ ಕೆಳಮಟ್ಟದ ಕಾರ್ಪೊರೇಟ್ ಗವರ್ನೆನ್ಸ್ ಅನ್ನು ಇನ್ಫೋಸಿಸ್ ಆಡಳಿತದೊಳಕ್ಕೆ ತಂದರು ಎಂದು ಹೇಳಿದ್ದಾರೆ.

English summary
Hours after the CEO and MD Vishal Sikka blamed co-founder and former CEO Narayana Murthy for his resignation, NRN hit back, saying he will reply to all the allegations when the time is right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X