ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್
ಬೆಂಗಳೂರು, ಅ.23: ಮೈಕ್ರೋಸಾಫ್ಟ್ ಕಾರ್ಪ್ ಸಂಸ್ಥೆ ತನ್ನ ಲೂಮಿಯಾ ಸರಣಿ ಮೊಬೈಲ್ ಫೋನ್ ಗಳಿಂದ ನೋಕಿಯಾ ಹೆಸರನ್ನು ಕೈಬಿಡುತ್ತಿದೆ. ಅದರೆ, ನೋಕಿಯಾ ಉತ್ಪನ್ನಗಳ ಬಳಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿಕೊಂಡಿದೆ.
ಕಾಕತಾಳೀಯ ಎಂಬಂತೆ ಫಿನ್ ಲ್ಯಾಂಡ್ ನ ನೋಕಿಯಾ ಸಂಸ್ಥೆ ಗುರುವಾರ ತನ್ನ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಭರ್ಜರಿ ಲಾಭ ದಾಖಲಿಸಿದೆ. ಶೇ 13.5 ರಷ್ಟು ಲಾಭ ಗಳಿಸಿದೆ. [ನೋಕಿಯಾ ಬಂದ್, ತಿರುಗಿ ಬಿದ್ದ ಉದ್ಯೋಗಿಗಳು]
ಮೈಕ್ರೋಸಾಫ್ಟ್ ಸಂಸ್ಥೆಗೆ ತನ್ನ ಮೊಬೈಲ್ ತಂತ್ರಜ್ಞಾನವನ್ನು ನೋಕಿಯಾ ಈಗಾಗಲೇ ಮಾರಿಕೊಂಡಿದೆ. ಅದರೆ, ನಾವಿಗೇಷನ್, ನೆಟ್ವರ್ಕ್ ಘಟಕ ಇನ್ನಿತರ ಸ್ಮಾರ್ಟ್ ಫೋನ್ ಪೇಟೆಂಟ್ ಗಳನ್ನು ನೋಕಿಯಾ ತನ್ನಲ್ಲೇ ಉಳಿಸಿಕೊಂಡಿದೆ.
2013ರ ಏಪ್ರಿಲ್ ನಲ್ಲಿ 7.2 ಬಿಲಿಯನ್ ಡಾಲರ್ ಡೀಲ್ ಕುದುರಿಸಿ ನೋಕಿಯಾ ಸಂಸ್ಥೆ ಹ್ಯಾಂಡ್ ಸೆಟ್ ವ್ಯವಹಾರವನ್ನು ಮೈಕ್ರೋಸಾಫ್ಟ್ ತನ್ನದಾಗಿಸಿಕೊಂಡಿತ್ತು. ಅದರೆ, ಹೊಸ ಸರಣಿಯ ಫೋನ್ ಗಳಿಗೂ ನೋಕಿಯಾ ಹೆಸರನ್ನು ಬಳಸಿಕೊಳ್ಳುತ್ತಿತ್ತು. ಅದರೆ, ಅ.23ರ ಮೈಕ್ರೋಸಾಫ್ಟ್ ಫೇಸ್ ಬುಕ್ ಪ್ರಕಟಣೆಯಂತೆ ನೋಕಿಯಾ ಹೆಸರನ್ನು ಕೈಬಿಡಲಾಗಿದೆ. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

ಹೊಸ ಸಿಇಒ ಸತ್ಯ ನಡೆಲ್ಲಾ ಅವರು ಈಗಾಗಲೇ ಫೋನ್ ತಯಾರಿಕೆಯನ್ನು ಕಡಿಮೆಗೊಳಿಸುವಂತೆ ಸೂಚಿಸಿದ್ದಾರೆ. ಜುಲೈನಲ್ಲಿ ಪ್ರಕಟಿಸಿದಂತೆ ಸುಮಾರು 18,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ನಿಂದ ಹೊರಕ್ಕೆ ಕಳಿಸಲಾಗಿದೆ. ಇವರಲ್ಲಿ 12,500 ಉದ್ಯೋಗಿಗಳು ನೋಕಿಯಾ ಘಟಕಕ್ಕೆ ಸೇರಿದವರಾಗಿದ್ದಾರೆ.
ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿರುವ ಲೂಮಿಯಾ 730,830 ಹಾಗೂ 930 ಮೊಬೈಲ್ ಫೋನ್ ಗಳು ನೋಕಿಯಾ ಹೆಸರಿನ ಬದಲು ಮೈಕ್ರೋಸಾಫ್ಟ್ ಲೂಮಿಯಾ ಎಂದೇ ಕರೆಯಲ್ಪಡಲಿದೆ. [ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ]
ನೋಕಿಯಾ ಅಶಾ ಸರಣಿ, ಎಕ್ಸ್ ಸರಣಿಯನ್ನು ಅಂತ್ಯಗಾಣಿಸಲಾಗಿದೆ. ಜಾಗತಿಕವಾಗಿ ವಿಂಡೋಸ್ ಆಧಾರಿತ ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿಸಲು ಮೈಕ್ರೋಸಾಫ್ಟ್ ಯತ್ನಿಸುತ್ತಿದೆ. ಗೂಗಲ್ ನ ಆಂಡ್ರಾಯ್ಡ್ ಹಾಗೂ ಆಪಲ್ ಐಓಸ್ ನಂತರದ ಸ್ಥಾನದಲ್ಲಿ ವಿಂಡೋಸ್ ಫೋನ್ ಗಳು ಮಾರುಕಟ್ಟೆ ಪಾಲು ಹೊಂದಿವೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications