ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್
ಬೆಂಗಳೂರು, ಅ.23: ಮೈಕ್ರೋಸಾಫ್ಟ್ ಕಾರ್ಪ್ ಸಂಸ್ಥೆ ತನ್ನ ಲೂಮಿಯಾ ಸರಣಿ ಮೊಬೈಲ್ ಫೋನ್ ಗಳಿಂದ ನೋಕಿಯಾ ಹೆಸರನ್ನು ಕೈಬಿಡುತ್ತಿದೆ. ಅದರೆ, ನೋಕಿಯಾ ಉತ್ಪನ್ನಗಳ ಬಳಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿಕೊಂಡಿದೆ.
ಕಾಕತಾಳೀಯ ಎಂಬಂತೆ ಫಿನ್ ಲ್ಯಾಂಡ್ ನ ನೋಕಿಯಾ ಸಂಸ್ಥೆ ಗುರುವಾರ ತನ್ನ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಭರ್ಜರಿ ಲಾಭ ದಾಖಲಿಸಿದೆ. ಶೇ 13.5 ರಷ್ಟು ಲಾಭ ಗಳಿಸಿದೆ. [ನೋಕಿಯಾ ಬಂದ್, ತಿರುಗಿ ಬಿದ್ದ ಉದ್ಯೋಗಿಗಳು]
ಮೈಕ್ರೋಸಾಫ್ಟ್ ಸಂಸ್ಥೆಗೆ ತನ್ನ ಮೊಬೈಲ್ ತಂತ್ರಜ್ಞಾನವನ್ನು ನೋಕಿಯಾ ಈಗಾಗಲೇ ಮಾರಿಕೊಂಡಿದೆ. ಅದರೆ, ನಾವಿಗೇಷನ್, ನೆಟ್ವರ್ಕ್ ಘಟಕ ಇನ್ನಿತರ ಸ್ಮಾರ್ಟ್ ಫೋನ್ ಪೇಟೆಂಟ್ ಗಳನ್ನು ನೋಕಿಯಾ ತನ್ನಲ್ಲೇ ಉಳಿಸಿಕೊಂಡಿದೆ.
2013ರ ಏಪ್ರಿಲ್ ನಲ್ಲಿ 7.2 ಬಿಲಿಯನ್ ಡಾಲರ್ ಡೀಲ್ ಕುದುರಿಸಿ ನೋಕಿಯಾ ಸಂಸ್ಥೆ ಹ್ಯಾಂಡ್ ಸೆಟ್ ವ್ಯವಹಾರವನ್ನು ಮೈಕ್ರೋಸಾಫ್ಟ್ ತನ್ನದಾಗಿಸಿಕೊಂಡಿತ್ತು. ಅದರೆ, ಹೊಸ ಸರಣಿಯ ಫೋನ್ ಗಳಿಗೂ ನೋಕಿಯಾ ಹೆಸರನ್ನು ಬಳಸಿಕೊಳ್ಳುತ್ತಿತ್ತು. ಅದರೆ, ಅ.23ರ ಮೈಕ್ರೋಸಾಫ್ಟ್ ಫೇಸ್ ಬುಕ್ ಪ್ರಕಟಣೆಯಂತೆ ನೋಕಿಯಾ ಹೆಸರನ್ನು ಕೈಬಿಡಲಾಗಿದೆ. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

ಹೊಸ ಸಿಇಒ ಸತ್ಯ ನಡೆಲ್ಲಾ ಅವರು ಈಗಾಗಲೇ ಫೋನ್ ತಯಾರಿಕೆಯನ್ನು ಕಡಿಮೆಗೊಳಿಸುವಂತೆ ಸೂಚಿಸಿದ್ದಾರೆ. ಜುಲೈನಲ್ಲಿ ಪ್ರಕಟಿಸಿದಂತೆ ಸುಮಾರು 18,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ನಿಂದ ಹೊರಕ್ಕೆ ಕಳಿಸಲಾಗಿದೆ. ಇವರಲ್ಲಿ 12,500 ಉದ್ಯೋಗಿಗಳು ನೋಕಿಯಾ ಘಟಕಕ್ಕೆ ಸೇರಿದವರಾಗಿದ್ದಾರೆ.
ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿರುವ ಲೂಮಿಯಾ 730,830 ಹಾಗೂ 930 ಮೊಬೈಲ್ ಫೋನ್ ಗಳು ನೋಕಿಯಾ ಹೆಸರಿನ ಬದಲು ಮೈಕ್ರೋಸಾಫ್ಟ್ ಲೂಮಿಯಾ ಎಂದೇ ಕರೆಯಲ್ಪಡಲಿದೆ. [ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ]
ನೋಕಿಯಾ ಅಶಾ ಸರಣಿ, ಎಕ್ಸ್ ಸರಣಿಯನ್ನು ಅಂತ್ಯಗಾಣಿಸಲಾಗಿದೆ. ಜಾಗತಿಕವಾಗಿ ವಿಂಡೋಸ್ ಆಧಾರಿತ ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿಸಲು ಮೈಕ್ರೋಸಾಫ್ಟ್ ಯತ್ನಿಸುತ್ತಿದೆ. ಗೂಗಲ್ ನ ಆಂಡ್ರಾಯ್ಡ್ ಹಾಗೂ ಆಪಲ್ ಐಓಸ್ ನಂತರದ ಸ್ಥಾನದಲ್ಲಿ ವಿಂಡೋಸ್ ಫೋನ್ ಗಳು ಮಾರುಕಟ್ಟೆ ಪಾಲು ಹೊಂದಿವೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications