ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಲಿರುವ ಎಲ್ & ಟಿ
ಗಾಂಧಿನಗರ, ಅ.28: ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡುವ ಗುತ್ತಿಗೆಯನ್ನು ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪೆನಿ ಪಡೆದುಕೊಂಡಿದೆ. ಗುಜರಾತ್ ಸರ್ಕಾರ 'ಏಕತೆಯ ಪ್ರತಿಮೆ'ಯನ್ನು ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನು ಸೋಮವಾರ ಅಧಿಕೃತವಾಗಿ ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.
ಸುಮಾರು
182ಮೀಟರ್
ಎತ್ತರದ
ಏಕತಾ
ಪ್ರತಿಮೆ
ನಿರ್ಮಾಣಕ್ಕೆ
ತಗಲುವ
ಅಂದಾಜು
ವೆಚ್ಚ
ಬರೋಬ್ಬರಿ
2979
ಕೋಟಿ
ರು.
ಕಾಮಗಾರಿ
ನಾಲ್ಕು
ವರ್ಷದೊಳಗೆ
ಮುಗಿಯಲಿದ್ದು,
2018ರ
ವೇಳೆಗೆ
ಸಾರ್ವಜನಿಕರ
ದರ್ಶನಕ್ಕೆ
ಲಭ್ಯವಾಗಲಿದೆ
ಎಂದು
ಗುಜರಾತ್
ಮುಖ್ಯಮಂತ್ರಿ
ಆನಂದಿ
ಬೇನ್
ಪಟೇಲ್
ತಿಳಿಸಿದ್ದಾರೆ.
ಷೇರುಪೇಟೆಯಲ್ಲಿ
ಎಲ್
ಅಂಡ್
ಟಿ
ಷೇರುಗಳು
ಮಂಗಳವಾರ
ಮಧ್ಯಾಹ್ನದ
ವೇಳೆ
ಬಿಎಸ್ಇನಲ್ಲಿ
1573.65
ರು.ನಂತೆ
ಶೇ
0.61ರಷ್ಟು
ಏರಿಕೆ
ಕಂಡಿತ್ತು.
ಎನ್ಎಸ್
ಇನಲ್ಲಿ
1577.50
ರು.ನಂತೆ
ಶೇ
0.64ರಷ್ಟು
ಏರಿಕೆ
ಕಂಡಿತ್ತು.
ಇದರಲ್ಲಿ 1347 ಕೋಟಿ ರೂ. ಮುಖ್ಯ ಪ್ರತಿಮೆಗೆ ಖರ್ಚಾಗಲಿದೆ. 235 ಕೋಟಿ ರೂ. ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಗೆ ತಗುಲಲಿದೆ. 83 ಕೋಟಿ ರೂ. ಹಣವು ಪ್ರತಿಮೆ ಮತ್ತು ಸೇತುವೆಗೆ ಸಂಪರ್ಕ ಕಲ್ಪಿಸಲು ಖರ್ಚಾಗಲಿದೆ. ಎಲ್ ಅಂಡ್ ಟಿ ಸಂಸ್ಥೆ 15 ವರ್ಷಗಳ ಕಾಲ ನಿರ್ವಹಣೆ ಹೊಣೆ ಹೊರಲಿದ್ದು, ಇದಕ್ಕಾಗಿ 657 ಕೋಟಿ ರೂ. ಹಣವನ್ನು ಪಡೆಯಲಿದೆ ಎಂದು ಸಿಎಂ ಆನಂದಿ ಬೇನ್ ಅವರು ವಿವರಿಸಿದರು. [200 ಕೋಟಿ ಟ್ವೀಟ್ ಲೋಕದಲ್ಲಿ ಶಾಕ್]
75
ಸಾವಿರ
ಕ್ಯೂಬೆಕ್
ಮೀಟರ್
ಕಾಂಕ್ರಿಟ್,
5700
ಮೆಟ್ರಿಕ್
ಟನ್
ಕಬ್ಬಿಣ,
18,500
ಉಕ್ಕು,
22,500
ಕಂಚು
ಸೇರಿದಂತೆ
ಮತ್ತಿತರ
ವಸ್ತುಗಳನ್ನು
ಬಳಸಿಕೊಳ್ಳಲಾಗುತ್ತದೆ.
ಗುಜರಾತಿನ
ನರ್ಮದಾ
ಜಿಲ್ಲೆಯ
ಕೇವದಿಯಾ
ಪ್ರದೇಶದಲ್ಲಿರುವ
ಸರ್ದಾರ್
ಸರೋವರ್
ಡ್ಯಾಮ್
ಪಕ್ಕ
ಪ್ರತಿಮೆ
ನಿರ್ಮಿಸಲಾಗುತ್ತಿದೆ.
ಪ್ರವಾಸಿಗರನ್ನು
ಆಕರ್ಷಿಸುವ
ಉದ್ದೇಶದಿಂದಲೇ
ವಿವಿಧ
ರೀತಿಯ
ಯೋಜನೆಗಳನ್ನು
ಹಮ್ಮಿಕೊಳ್ಳಲಾಗಿದೆ.[ರಾಷ್ಟ್ರೀಯ
ಏಕತಾ
ದಿನಾಚರಣೆ
ಮಹತ್ವವೇನು?]
ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಿಗಾಗಿ 'ಏಕತೆಯ ಪ್ರತಿಮೆ'ಯನ್ನು ನಿರ್ಮಿಸಲು ರೈತರಿಂದ ಕಬ್ಬಿಣದ ಚಿಕ್ಕ ಚಿಕ್ಕ ತುಂಡುಗಳನ್ನು ಸಂಗ್ರಹಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟು ಯೋಜನಾ ವೆಚ್ಚ 2,063 ಕೋಟಿ ರು ಗೂ ಅಧಿಕ ಎಂದು ಗುಜರಾತ್ ಸರ್ಕಾರದ ಅಧಿಕೃತ ವೆಬ್ ತಾಣಗಳು ಈ ಹಿಂದೆ ಘೋಷಿಸಿದ್ದವು. ಕೇಂದ್ರ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಲಾಗಿರುವ ಮೊತ್ತಕ್ಕಿಂತ ಸರ್ದಾರ್ ಪ್ರತಿಮೆಗೆ ನೀಡಿರುವ ಅನುದಾನ ಮೊತ್ತ ಎಲ್ಲರ ಹುಬ್ಬೇರಿಸಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆಯಾಗಿತ್ತು.