ಚೀನಿಯರಿಂದ ಆಮದು ನಿಲ್ಲಿಸಲು ಕೈಗಾರಿಕೋದ್ಯಮಿಗಳು ಒಟ್ಟಾಗಬೇಕು: ಸಜ್ಜನ್ ಜಿಂದಾಲ್
ನವದೆಹಲಿ, ಜುಲೈ 7: ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಸ್ವತಃ ನಿಷೇಧಿಸಲು ಮುಂದಾಗಿರುವ ಜೆಎಸ್ಡಬ್ಲ್ಯೂ ಗ್ರೂಪ್, ದೇಶದ ಎಲ್ಲಾ ಕೈಗಾರಿಕೋದ್ಯಮಿಗಳು ಒಟ್ಟಾಗಬೇಕೆಂದು ಕರೆ ನೀಡಿದೆ.
ಈ ಕುರಿತು ಮಾತನಾಡಿರುವ ಜೆಎಸ್ಡಬ್ಲ್ಯೂ ಗ್ರೂಪ್ ಮಾಲೀಕ ಸಜ್ಜನ್ ಜಿಂದಾಲ್ ''ಭಾರತೀಯ ಯೋಧರನ್ನು ಎಲ್ಎಸಿಯಲ್ಲಿ ಚೀನಿಯರು ಹತ್ಯೆಗೈದಿದ್ದು ಇಂತಹ ದುಷ್ಟ ನಡೆಯ ನಂತರವೂ ಚೀನಾ ಜೊತೆ ವ್ಯವಹಾರವು ಎಂದಿನಂತೆ ಹೋಗಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
ಇದರ ಜೊತೆಗೆ ಮುಂದಿನ 24 ತಿಂಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ವಾರ್ಷಿಕ ಆಮದನ್ನು ಚೀನಾದಿಂದ ನಿಲ್ಲಿಸುವುದಾಗಿ ಹೇಳಿದ್ದರು.

ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಅವರು, ಈ ನಿರ್ಧಾರವೂ ಚೀನಾ ಭಾರತದ ನೆಲದಲ್ಲಿ ಮಾಡಿದ ದುಷ್ಕೃತ್ಯದ ಪರಿಣಾಮವಾಗಿದೆ ಎಂದು ಹೇಳಿದರು.
ಸಜ್ಜನ್ ಜಿಂದಾಲ್ ಅವರು "ನಮ್ಮ ಸೈನಿಕರು ಎಲ್ಎಸಿಯಲ್ಲಿ(ವಾಸ್ತವಿಕ ನಿಯಂತ್ರಣದ ರೇಖೆ) ಹತ್ಯೆಯಾದ ನಂತರವೂ ನಮ್ಮ ವ್ಯವಹಾರಕ್ಕಾಗಿ ಚೀನಾದ ಅಗ್ಗದ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ'' ಎಂದು ಹೇಳಿದರು. ಇದೇ ವೇಳೆ ಎಲ್ಲಾ ಕೈಗಾರಿಕೋದ್ಯಮಿಗಳು ಒಗ್ಗೂಡಿ ಬಲಿಷ್ಠ ಆತ್ಮ ನಿರ್ಭರ ಭಾರತ್ಗೆ ಒತ್ತು ನೀಡಬೇಕಿದೆ ಎಂದಿದ್ದಾರೆ.












Click it and Unblock the Notifications