ಫ್ಲಿಪ್ ಕಾರ್ಟ್ನಲ್ಲಿ ಬದಲಾವಣೆ: ಕೆಲಸ ಕಳೆದುಕೊಳ್ಳಲಿದ್ದಾರೆ 200 ಮಂದಿ
ನವದೆಹಲಿ, ನವೆಂಬರ್ 16: ಫ್ಲಿಪ್ ಕಾರ್ಟ್ ಸಮೂಹದ ಭಾಗವಾದ ಆನ್ಲೈನ್ ಫ್ಯಾಷನ್ ಮಾರಾಟ ಸಂಸ್ಥೆ ಜಬೊಂಗ್ ತನ್ನ ಅರ್ಧದಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದ್ದು, ಇದರಿಂದ ಸುಮಾರು 200 ಮಂದಿ ಉದ್ಯೋಗ ನಷ್ಟದ ಭೀತಿಗೆ ಒಳಗಾಗಿದ್ದಾರೆ.
ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನ ಬನ್ಸಲ್ ಅವರು ವೈಯಕ್ತಿಕ ದುರ್ನಡತೆ ಆರೋಪದ ಕಾರಣ ಸಿಇಒ ಸ್ಥಾನ ತ್ಯಜಿಸಿ ಹೊರನಡೆದ ಬೆನ್ನಲ್ಲೇ, ಫ್ಲಿಪ್ ಕಾರ್ಟ್ನ ಪ್ರಮುಖ ಷೇರುದಾರ, ಅಮೆರಿಕದ ವಾಲ್ ಮಾರ್ಟ್ ಭಾರಿ ಬದಲಾವಣೆಗಳಿಗೆ ಮುಂದಾಗಿದೆ.
ಫ್ಲಿಪ್ ಕಾರ್ಟ್ ಸಮೂಹದ ಭಾಗವಾದ ಜಬೊಂಗ್ ಅನ್ನು ಮಿಂತ್ರಾದೊಂದಿಗೆ ವಿಲೀನಗೊಳಿಸಲು ವಾಲ್ ಮಾರ್ಟ್ ಮುಂದಾಗಿದೆ. ಈ ಎರಡೂ ಸಂಸ್ಥೆಗಳನ್ನು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರ ನಿಯಂತ್ರಣಕ್ಕೆ ತರಲಾಗಿದೆ.

ಜಬೊಂಗ್ ವೆಬ್ಸೈಟ್ ಕಾರ್ಯನಿರ್ವಹಣೆ ಮುಂದುವರಿಸಲಿದೆ. ಆದರೆ, ಖರೀದಿದಾರರನ್ನು ಅದು ಮಿಂತ್ರಾ ವೆಬ್ ಸೈಟ್ಗೆ ಸಂಪರ್ಕಿಸಲಿದೆ.
ಅಲ್ಲದೆ, ಜಬೊಂಗ್ ಗುರುಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಈ ನಡುವೆ ಮಿಂತ್ರಾ- ಜಬೊಂಗ್ನ ಮುಖ್ಯಸ್ಥ ಅನಂತ್ ನಾರಾಯಣ್, ತಾವು ಎರಡೂ ಸಂಸ್ಥೆಗಳ ಮುಖ್ಯಸ್ಥರಾಗಿ ಮುಂದುವರಿಯಲಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಬಿನ್ನಿ ಅವರ ರಾಜೀನಾಮೆ ಬಳಿಕ ಅನಂತ್ ನಾರಾಯಣ್, ತಮ್ಮ ಕಾರ್ಯಚಟುವಟಿಕೆಗಳಿಗಾಗಿ ಕಲ್ಯಾಣ್ ಕೃಷ್ಣಮೂರ್ತಿ ಅವರಿಗೆ ವರದಿ ಮಾಡುವಂತೆ ಸೂಚನೆ ಬಂದಿರುವುದರಿಂದ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications