Get Updates
Get notified of breaking news, exclusive insights, and must-see stories!

ಇಂದೋರ್‌ ಶೀಘ್ರದಲ್ಲೇ ಬೆಂಗಳೂರನ್ನು ಹಿಂದಿಕ್ಕಲಿದೆ: ಚೌಹಾಣ್‌

ಭೋಪಾಲ್‌, ಜೂ 1: ಮುಂದಿನ 10 ವರ್ಷಗಳಲ್ಲಿ ಇಂದೋರ್ ನಗರವು ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಹಿಂದಿಕ್ಕಿ ದೇಶದ ಐಟಿ ಹಬ್ ಆಗಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಇಂದೋರ್‌ನಲ್ಲಿ ನಡೆದ ಇಂದೋರ್ ಗೌರವ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದೋರ್ ಬೆಂಗಳೂರು ಮತ್ತು ಹೈದರಾಬಾದ್ ಅನ್ನು ಹಿಂದಿಕ್ಕಲಿದ್ದು, ಇಂದೋರ್ ದೇಶದ ಐಟಿ ಹಬ್ ಆಗಲಿದೆ. ಇತ್ತೀಚೆಗೆ ಸುಮಾರು 100 ಹೊಸ ಸ್ಟಾರ್ಟಪ್ ಕಂಪನಿಗಳನ್ನು ಇಂದೋರ್‌ನಲ್ಲಿ ತೆರೆಯಲಾಗಿದೆ. ನಾವು ಇಲ್ಲಿನ ಸ್ಟಾರ್ಟಪ್ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಸೂಪರ್ ಕಾರಿಡಾರ್‌ನಲ್ಲಿ ಸ್ಟಾರ್ಟ್‌ಅಪ್ ಪಾರ್ಕ್ ಅನ್ನು ಇಂದೋರ್ ಅಭಿವೃದ್ಧಿ ಪ್ರಾಧಿಕಾರವು ಶೀಘ್ರದಲ್ಲೇ ನಿರ್ಮಿಸಲಿದೆ. ಇಂದೋರ್ ವೀರರ ನಗರವಾಗಿದೆ. ನಾವು ಇಂದೋರ್ ಅನ್ನು ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡುತ್ತೇವೆ ಎಂದು ಅವರು ಹೇಳಿದರು.

ಅಂಗನವಾಡಿಗಳ ಕಾರ್ಯವೈಖರಿಗೆ ಶ್ಲಾಘನೆ

ಅಂಗನವಾಡಿಗಳ ಕಾರ್ಯವೈಖರಿಗೆ ಶ್ಲಾಘನೆ

ನಾವು ಒಂದು ಕೆಲಸವನ್ನು ಪ್ರತ್ಯೇಕವಾಗಿ ತೆಗೆದುಕೊಂಡರೆ ನಮ್ಮ ನಾಗರಿಕ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ. ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ಇತರ ಕೆಲಸಗಳೊಂದಿಗೆ ಹೊಸ ಒಳ್ಳೆಯ ಕೆಲಸವನ್ನು ನಾವು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ. ಇದು ಇಂದೋರ್ ಮತ್ತು ಮಧ್ಯಪ್ರದೇಶವನ್ನು ಬೆಳವಣಿಗೆಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತದೆ. ಇಂದೋರ್ ವಿಶ್ವದ ಅದ್ಭುತ ನಗರವಾಗಲಿದೆ ಎಂದ ಚೌಹಾಣ್‌ ರಾಜ್ಯದ ಅಂಗನವಾಡಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಂಗನವಾಡಿಗಳನ್ನು ನಡೆಸುವುದು ಕೇವಲ ಸರ್ಕಾರದ ಕೆಲಸವಲ್ಲ. ಅದಕ್ಕಾಗಿಯೇ ಸರ್ಕಾರವು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ನಾವು ನಿರ್ಧರಿಸಿದ್ದೇವೆ. ಆದರೆ ಸಮಾಜವೂ ಸರ್ಕಾರದ ಜೊತೆ ನಿಲ್ಲಬೇಕು. ಇಂದೋರ್ ಒಂದು ಅದ್ಭುತ ನಗರ. ಇಂದು ನಾನು ನಿಮ್ಮೆಲ್ಲರ ಸಹಕಾರದೊಂದಿಗೆ ಇಂದೋರ್ ಅನ್ನು ವಿಶ್ವದ ಅತ್ಯುತ್ತಮ ನಗರವನ್ನಾಗಿ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.

1500 ಆಸನಗಳ ಸಭಾಂಗಣ

1500 ಆಸನಗಳ ಸಭಾಂಗಣ

ಭಾರತೀಯ ಹಿನ್ನೆಲೆ ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರು ಇಂದೋರ್‌ನಲ್ಲಿ ಜನಿಸಿದರು ಎಂದು ಇದೇ ವೇಳೆ ಸ್ಮರಿಸಿದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಲತಾ ಮಂಗೇಶ್ಕರ್ ಸ್ಮರಣಾರ್ಥ ರಾಜೇಂದ್ರ ನಗರದಲ್ಲಿ 24 ಕೋಟಿ ವೆಚ್ಚದಲ್ಲಿ ಇಂದೋರ್ ಅಭಿವೃದ್ಧಿ ಪ್ರಾಧಿಕಾರದಿಂದ 1500 ಆಸನಗಳ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಈ ಸಭಾಂಗಣಕ್ಕೆ 'ಸ್ವರ್' ಎಂದು ಹೆಸರಿಸಲಾಗುವುದು ಎಂದು ಹೇಳಿದರು.

ಅಭಿವೃದ್ಧಿಯಲ್ಲಿ ಇಂದೋರ್ ಬೆಂಗಳುರು ಮೀರಿಸುತ್ತದೆ

ಅಭಿವೃದ್ಧಿಯಲ್ಲಿ ಇಂದೋರ್ ಬೆಂಗಳುರು ಮೀರಿಸುತ್ತದೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮೇ 30ರಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಮುಂದಿನ 10 ವರ್ಷಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ಗಳನ್ನು ಅಭಿವೃದ್ಧಿಯಲ್ಲಿ ಇಂದೋರ್ ಮೀರಿಸುತ್ತದೆ ಎಂದು ಹೇಳಿದ್ದಾರೆ.

ನಾವು ತ್ವರಿತ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ

ನಾವು ತ್ವರಿತ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ನಗರ ಸಂಸ್ಥೆಗಳ ಚುನಾವಣೆ ಘೋಷಣೆಯಾಗುತ್ತಿದೆ. ಅಭಿವದ್ಧಿಗೆ ಬಿಜೆಪಿ ಅಗತ್ಯ. ಇಂದೋರ್ ಮಹಾನಗರ ಹಾಗೂ ಜಿಲ್ಲಾ ಬಿಜೆಪಿಯ ಮಹಾನಗರ ಪಾಲಿಕೆ, ಬಿಜೆಪಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಜನರು ಉತ್ತಮ ಕೆಲಸ ಮಾಡಿದ್ದಾರೆ. ಈ ಕಾರಣದಿಂದಾಗಿ ನಾವು ತ್ವರಿತ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಮುಂಬರುವ 10 ವರ್ಷಗಳಲ್ಲಿ ಇಂದೋರ್ ಅಭಿವೃದ್ಧಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಹಿಂದೆ ಸರಿಯುತ್ತದೆ ಎಂಬುದು ನನ್ನ ಅಭಿಮತ. ಇದಕ್ಕಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅವಶ್ಯಕ. ಬಿಜೆಪಿಯಿಂದ ಮೇಯರ್ ಆಯ್ಕೆಯಾಗಬೇಕು ಎಂದು ಹೇಳಿದರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+