ಕೆಲವೇ ಗಂಟೆಯಲ್ಲಿ Zoom ಆ್ಯಪ್ ಸಿಇಒ ಸಂಪತ್ತು 29,000 ಕೋಟಿ ರೂಪಾಯಿ ಏರಿಕೆ
ವಾಷಿಂಗ್ಟನ್, ಸೆಪ್ಟೆಂಬರ್ 01: ಕೆಲವೇ ಗಂಟೆಗಳಲ್ಲಿ, ಜ್ಹೂಮ್ ವೀಡಿಯೋ ಕಮ್ಯುನಿಕೇಷನ್ಸ್ ಇಂಕ್. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎರಿಕ್ ಯುವಾನ್ 4.2 ಬಿಲಿಯನ್ ಡಾಲರ್ ಶ್ರೀಮಂತರಾಗಿದ್ದಾರೆ.
ಕೋವಿಡ್-19 ಸಾಂಕ್ರಾಂಮಿಕದ ನಡುವೆ Zoom ಆ್ಯಪ್ ಬಳಕೆದಾರರ ಸಂಖ್ಯೆಯು ಹೆಚ್ಚಾಗಿದ್ದು, ವರ್ಚುವಲ್-ಮೀಟಿಂಗ್ ಕಂಪನಿಯ ಷೇರುಗಳು ಅಮೆರಿಕಾದ ವಹಿವಾಟಿನಲ್ಲಿ ಶೇ 26 ರಷ್ಟು ಏರಿಕೆಯಾಗಿ 410 ಡಾಲರ್ಗೆ ತಲುಪಿದೆ. ಅಲ್ಲದೆ ಕಂಪನಿಯ ತ್ರೈಮಾಸಿಕ ಆದಾಯದಲ್ಲೂ ಏರಿಕೆಯಾಗಿದೆ.
ಜ್ಹೂಮ್ ವೀಡಿಯೋ ಕಮ್ಯುನಿಕೇಷನ್ಸ್ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಎರಿಕ್ ಯುವಾನ್ ಕಂಪನಿಯಲ್ಲಿ ಶೇಕಡಾ 22ರಷ್ಟು ಪಾಲನ್ನು ಹೊಂದಿದ್ದು, ಕೆಲವೇ ಗಂಟೆಯಲ್ಲಿ ಅವರ ಸಂಪತ್ತು 4 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 29,000 ಕೋಟಿ ರೂಪಾಯಿ) ಹೆಚ್ಚಾಗಿದೆ. ಷೇರು ಮೌಲ್ಯವು ಹೀಗೆ ಹೆಚ್ಚಾಗುತ್ತ ಹೋದರೆ ಯುವಾನ್ ಅವರ ಭವಿಷ್ಯದ ಸಂಪತ್ತು 20 ಬಿಲಿಯನ್ ಡಾಲರ್ ಮೀರುತ್ತದೆ.

ಜುಲೈ 31 ರವರೆಗಿನ ಮೂರು ತಿಂಗಳಲ್ಲಿ ಮಾರಾಟವು ಶೇಕಡಾ 355 ರಷ್ಟು ಏರಿಕೆಯಾಗಿ 663.5 ಮಿಲಿಯನ್ ಡಾಲರ್ಗೆ ತಲುಪಿದೆ ಎಂದು ಸಾಫ್ಟ್ವೇರ್ ತಯಾರಕ ಸೋಮವಾರ ವರದಿ ಮಾಡಿದೆ . ಜನವರಿಯಲ್ಲಿ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಮಾರಾಟವು 2.39 ಬಿಲಿಯನ್ ಡಾಲರ್ ಆಗಲಿದೆ ಎಂದು ಜ್ಹೂಮ್ ಹೇಳಿದೆ. ಅಂದರೆ ಆದಾಯವು ಕೇವಲ ಒಂದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಸದ್ಯ 11.2 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಸಂಪತ್ತನ್ನು ಹೊಂದಿರುವ ಯುವಾನ್ ಒಂದೆಡೆಯಾದರೆ, ಅಮೆಜಾನ್.ಕಾಮ್ ಇಂಕ್ ನ ಸಿಇಒ ಜೆಫ್ ಬೆಜೋಸ್ ಸಂಪತ್ತು ಜುಲೈನಲ್ಲಿ ಒಂದೇ ದಿನದಲ್ಲಿ 13 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಕಳೆದ ತಿಂಗಳು 24 ಗಂಟೆಗಳಲ್ಲಿ 8 ಬಿಲಿಯನ್ ಡಾಲರ್ ಸಂಪತ್ತನ್ನ ಸೇರಿಸಿದ್ದಾರೆ.
ಕಳೆದ ವಾರವಷ್ಟೇ ಅಮೆಜಾನ್ ಸಿಇಒ ಜೆಫ್ ಬೇಜೋಸ್ 200 ಬಿಲಿಯನ್ ಡಾಲರ್ ತಲುಪಿದ ಮೊದಲ ವ್ಯಕ್ತಿ ಎನ್ನಿಸಿಕೊಂಡರೆ, ಎಲೋನ್ ಮಸ್ಕ್ 100 ಬಿಲಿಯನ್ ಡಾಲರ್ ದಾಟಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications