ಮಧ್ಯಮ ವರ್ಗದ ಜನರಿಗೆ ಜಿಎಸ್ ಟಿಯಿಂದಾಗುವ ಲಾಭಗಳು!
ಜಿಎಸ್ ಟಿಯಡಿಯಲ್ಲಿ ಮಧ್ಯಮ ವರ್ಗ ಹಾಗೂ ಬಡವರು ಬಳಸುವ ಅನೇಕ ವಸ್ತುಗಳು ಶೇ. 5ರೊಳಗಿನ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಆದ್ದರಿಂದ, ಜಿಎಸ್ ಟಿಯು ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗಗಳ ಮೇಲೆ ಹೆಚ್ಚು ಹೊರೆಯಾಗದು ಎಂದು ಹೇಳಲಾಗಿದೆ.
ದೀರ್ಘಕಾಲದಿಂದ ಹಲವಾರು ನಿರೀಕ್ಷೆಗಳ ಜತೆಗೆ ಗೊಂದಲಗಳನ್ನೂ ಹುಟ್ಟಿಸಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜುಲೈ 1ರಿಂದ ದೇಶಾದ್ಯಂತ ಜಾರಿಗೊಂಡಿದೆ.
ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆ - ಎಂಬ ಸೂತ್ರದಡಿ ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಹೊಸ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆ ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಜಿಎಸ್ ಟಿ ಬಗ್ಗೆ ಇಷ್ಟೆಲ್ಲಾ ಹೇಳಲಾಗುತ್ತಿದ್ದರೂ, ಅನೇಕ ಜನರಿಗೆ ಅನೇಕ ರೀತಿಯ ಗೊಂದಲಗಳು ಹಾಗೇ ಇವೆ. ಒಟ್ಟಾರೆಯಾಗಿ, ಇದು ಮಧ್ಯಮ ವರ್ಗಕ್ಕೆ ಅನುಕೂಲವಾಗಲಿದೆಯೇ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇದು ಸಹಕಾರಿಯೇ ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯ ಜನರನ್ನು ಕಾಡುತ್ತಿವೆ.
ಹಾಗಾದರೆ, ಈ ಜಿಎಸ್ ಟಿ ಮಧ್ಯಮ ವರ್ಗದವರಿಗೆ ಹೇಗೆ ಸಹಕಾರಿ? ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೇಗೆ ಅನುಕೂಲಕರ? ದೇಶದ ಪ್ರಗತಿಗೆ ಇದು ನೆರವಾಗುವ ಅಂಶಗಳೇನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಆತನಿಗೇನು ಅನುಕೂಲ?
- ಜನ ಸಾಮಾನ್ಯರ ನಿತ್ಯ ಬಳಕೆಯ ಬಹುಪಾಲು ಸಾಮಗ್ರಿಗಳು ಶೇ. 5ರೊಳಗಿನ ತೆರಿಗೆ ವ್ಯಾಪ್ತಿಗೆ ಬರುತ್ತವೆ.
- ಬಡವರಿಗೆ, ಸಾಮಾನ್ಯ ಜನರಿಗೆ ಇದು ಹೆಚ್ಚು ಉಪಯುಕ್ತ.
- ಬಡವರಿಗೆ ತಮ್ಮ ನಿತ್ಯ ವಸ್ತುಗಳನ್ನು ಕೊಳ್ಳಲು, ತರಕಾರಿ, ಬೇಳೆ ಮುಂತಾದ ಆಹಾರ ಧಾನ್ಯಗಳು ಕೈಗೆಟುವ ದರದಲ್ಲಿ ಸಿಗುತ್ತವೆ.
- ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಇದರಿಂದ ಹೆಚ್ಚು ಅನುಕೂಲ

ತೆರಿಗೆ ಸಲ್ಲಿಕೆಯೂ ಸರಳ
- ವ್ಯಾಪಾರಸ್ಥರ ನೊಂದಾವಣಿ, ರಿಟರ್ನ್ ಸಲ್ಲಿಕೆ, ಟ್ಯಾಕ್ಸ್ ರಿಫಂಡ್ ಎಲ್ಲವೂ ಸರಳ ಹಾಗೂ ಸುಸೂತ್ರ.
- ಉತ್ಪಾದಕರಿಂದ ವಿತರಕರವರೆಗೆ ಸರಕುಗಳು ಸುಲಭವಾಗಿ ಯಾವುದೇ ಅಡೆ ತಡೆಯಿಲ್ಲದೆ ಸಾಗುತ್ತವೆ. ಈ ಹಂತದಲ್ಲಿ ಒಂದರ ಮೇಲೊಂದು ತೆರಿಗೆ ಬೀಳುವ ಪ್ರಮೇಯವೇ ಇರುವುದಿಲ್ಲ.
- ಹಲವಾರು ತೆರಿಗೆಗಳ ಕಾಟವಿಲ್ಲದಿರುವುದರಿಂದ ವಿದೇಶಗಳಿಗೆ ಸರಕುಗಳನ್ನು ರಫ್ತು ಮಾಡುವಂಥ ಉದ್ಯಮಗಳಿಗೆ ಹೆಚ್ಚಿನ ಅನುಕೂಲ.
- ಅನೇಕ ಉದ್ಯಮಿಗಳಿಗೆ ಸಿಗುತ್ತಿದ್ದ ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಇಳಿಮುಖವಾಗುವುದಿರಿಂದ ಕೆಲ ಉತ್ಪಾದನೆಗಳ ಉತ್ಪಾದನಾ ವೆಚ್ಛದಲ್ಲೂ ಇಳಿಮುಖ.

ಏಕೀಕೃತ ಮಾರುಕಟ್ಟೆ ಸ್ಥಾಪನೆ
- ಹೊಸತೊಂದು ಏಕೀಕೃತ ಮಾರುಕಟ್ಟೆ ಸ್ಥಾಪನೆ.
- ಭಾರತವನ್ನು ಉತ್ಪಾದನಾ ಸ್ವರ್ಗವನ್ನಾಗಿಸುವ ಪ್ರಯತ್ನ.
- ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ರಫ್ತಿಗೆ ಹೆಚ್ಚು ಉತ್ತೇಜನ.
- ಹೆಚ್ಚಿನ ಉದ್ಯೋಗಾವಕಾಶದಿಂದ ನಿರುದ್ಯೋಗ ಸಮಸ್ಯೆಗೆ ತಕ್ಕ ಮಟ್ಟಿನ ಮುಕ್ತಿ.

ಗೊಂದಲಗಳಿಲ್ಲ ವ್ಯವಸ್ಥೆ
- ವಿವಿಧ ನಗರಗಳಲ್ಲಿನ ವಿವಿಧ ತೆರಿಗೆಗಳ ಬಗ್ಗೆ ಲೆಕ್ಕಾಚಾರ ಹಾಕುವ ಒತ್ತಡ ಈಗಿಲ್ಲ.
- ತೆರಿಗೆ ಲೆಕ್ಕಾಚಾರ ಸುಲಭ. ಕೆಲವು ಸೇವೆಗಳಿಗೆ ತೆರಿಗೆ ಮುಕ್ತವಾಗಿರಿಸಿರುವುದರಿಂದ ಅವುಗಳ ಬಗ್ಗೆ ಅನವಶ್ಯಕ ಗೊಂದಲವಿಲ್ಲ.
- 1000ಕ್ಕೂ ಹೆಚ್ಚು ಸಾಮಗ್ರಿಗಳು ಹಾಗೂ ಸೇವೆಗಳನ್ನು ನಾಲ್ಕೇ ನಾಲ್ಕು ತೆರಿಗೆ ಕ್ಯಾಟಗರಿಯಲ್ಲಿ ತಂದಿರುವುದರಿಂದ ತೆರಿಗೆ ಲೆಕ್ಕಾಚಾರ ಇನ್ನು ಸುಲಭ.

ಎಲ್ಲವೂ ಸರಾಗ, ಐಕ್ಯತೆಗೆ ನಾಂದಿ
- ಸರಕು ಮತ್ತು ಸೇವೆಗಳು ಸರಾಗವಾಗಿ ನಡೆಯುವಂಥ ವಾತಾವರಣ.
- ಗ್ರಾಹಕರಿಗೆ ಹೆಚ್ಚು ಅನುಕೂಲ.
- ಉತ್ಪಾದಕರು ಹಾಗೂ ಗ್ರಾಹಕರಿನ್ನು ಒಂದೇ ಸೂರಿನಡಿ.
- ರಾಷ್ಟ್ರೀಯತೆ ಹಾಗೂ ಐಕ್ಯತೆಗೆ ನಾಂದಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications