ಎಚ್ ಪಿ ಇಬ್ಭಾಗ ಖಚಿತ, 5 ಸಾವಿರ ಉದ್ಯೋಗ ಗೋತಾ
ಬೆಂಗಳೂರು, ಅ.8: ಹ್ಯೂಲೆಟ್ ಪ್ಯಾಕರ್ಡ್ ಕೋ(ಎಚ್ ಪಿ) ಸಂಸ್ಥೆ ಇಬ್ಭಾಗವಾಗುವುದು ಖಾತ್ರಿಯಾಗಿದೆ. ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಹಾರ ಹಾಗೂ ಹಾರ್ಡ್ ವೇರ್ ಮತ್ತು ಇನ್ನಿತರ ಸರ್ವೀಸ್ ವಿಭಾಗಗಳು ಪ್ರತ್ಯೇಕಗೊಳ್ಳಲಿವೆ. ಪರಿಣಾಮ ಸುಮಾರು 5 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಎಚ್ ಪಿ ಇಬ್ಭಾಗವನ್ನು ಸಂಸ್ಥೆಯ ಸಿಇಒ ಮೆಗ್ ವಿಟ್ಮನ್ ಸಮರ್ಥಿಸಿಕೊಂಡಿದ್ದಾರೆ.
ಕಂಪ್ಯೂಟರ್ (ಪಿಸಿ) ಕ್ಷೇತ್ರದಲ್ಲಿ ಹೊಸತನ ಹುಟ್ಟುಹಾಕಿದ ಎಚ್ ಪಿ ಸಂಸ್ಥೆ ಈಗ ತನ್ನ ಮೂಲ ಶಕ್ತಿಯನ್ನೇ ವಿಭಜನೆ ಮಾಡುತ್ತಿದೆ. ಪೆಪ್ಸಿಕೋ ಸಂಸ್ಥೆ ಕೂಡಾ ತಂಪು ಪಾನೀಯ ಹಾಗೂ ಸ್ನ್ಯಾಕ್ಸ್ ವಿಭಾಗ ಇಬ್ಭಾಗಕ್ಕೆ ಮುಂದಾಗಿದೆ. ಇದೇ ರೀತಿ ಇಬ್ಭಾಗದ ಯೋಜನೆ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲೂ ಚಾಲ್ತಿಯಲ್ಲಿದೆ.
ಈ ವರ್ಷ ಹಲವು ದೊಡ್ಡ ಜಾಗತಿಕ ಕಂಪನಿಗಳ ವಿಭಜನೆಯನ್ನು ಕಾಣಬಹುದಾಗಿದೆ. ಹೂಡಿಕೆದಾರರು ಇದರಿಂದ ಅಷ್ಟೇನು ವಿಚಲಿತರಾಗಿಲ್ಲ. ಮಾನವ ಸಂಪನ್ಮೂಲ ಹೊಂದಾಣಿಕೆ ಸಮಸ್ಯೆ ಹೊರತು ಪಡಿಸಿದರೆ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದು ಕಂಪನಿಗಳ ಮುಂದಿರುವ ದೊಡ್ಡ ಸವಾಲು.

2001ರಲ್ಲಿ ಕಂಪ್ಯಾಕ್ ಕಂಪ್ಯೂಟರ್ ಖರೀದಿಸಿದ ಎಚ್ ಪಿ ಸಂಸ್ಥೆ ಡೆಲ್ ಹಾಗೂ ಐಬಿಎಂ ವಿರುದ್ಧ ಪಿಸಿ ವಿಭಾಗದಲ್ಲಿ ಭಾರಿ ಪೈಪೋಟಿ ನೀಡಿತ್ತು. ಎಚ್ ಪಿಯಲ್ಲಿ ಸದ್ಯಕ್ಕೆ 3,00,000 ಉದ್ಯೋಗಿಗಳಿದ್ದಾರೆ.ವಿಟ್ ಮನ್ ಅವರು ಹ್ಯೂಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್ ನ ಸಿಇಒ ಆಗಿ ಮುಂದುವರೆಯಲಿದ್ದಾರೆ. ಎಚ್ ಪಿ ಐಎನ್ ಸಿ(ಪ್ರಿಂಟಿಂಗ್, ಪರ್ಸನಲ್ ಕಂಪ್ಯೂಟರ್)ಗೆ ಡಿಯಾನ್ ವೈಸ್ಲರ್ ಚೇರ್ಮನ್ ಆಗಲಿದ್ದಾರೆ.
1939ರಲ್ಲಿ ಕ್ಯಾಲಿಫೋರ್ನಿಯಾದ ಗ್ಯಾರೇಜ್ ನಲ್ಲಿ ಬಿಲ್ ಹ್ಯೂಲೆಟ್ ಹಾಗೂ ಡೇವ್ ಪ್ಯಾಕರ್ಡ್ ಅವರು ಆರಂಭಿಸಿದ ಈ ಸಂಸ್ಥೆ ಸಿಲಿಕಾನ್ ವ್ಯಾಲಿಯಲ್ಲಿ ಸದ್ದು ಮಾಡಿದ್ದಲ್ಲದೆ ಪಿಸಿ ವಿಭಾಗದಲ್ಲಿ ಕ್ರಾಂತಿ ಹುಟ್ಟುಹಾಕಿತ್ತು.
ಎಚ್ ಪಿ ಸಂಸ್ಥೆಗೆ ಗೋಲ್ಡ್ ಮನ್ ಸಾಚ್ಸ್ ಅಂಡ್ ಕೋ ಆರ್ಥಿಕ ಸಲಹೆಗಾರ ಸಂಸ್ಥೆಯಾಗಿತ್ತು, ವಾಚ್ ಟೆಲ್, ಲಿಪ್ಟನ್, ರೊಸೆನ್ ಹಾಗೂ ಕಾಟ್ಜ್ ಕಾನೂನು ಸಲಹೆಗಾರ ಸಂಸ್ಥೆಗಳಾಗಿ ವ್ಯವಹರಿಸಿದ್ದವು.ಒಟ್ಟಾರೆ ಕಾರ್ಪೋರೇಟ್ ಬ್ರೇಕ್ ಅಪ್ ಗಳಿಂದ ಇನ್ವೆಷ್ಟ್ಮೆಂಟ್ ಬ್ಯಾಂಕ್ ಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದು ಮಾರುಕಟ್ಟೆ ತಜ್ಞ ಸಂಸ್ಥೆ ಡೀಲ್ ಲಾಜಿಕ್ ಹೇಳಿದೆ. ಕಳೆದ ಈ ವರ್ಷ ಸುಮಾರು 9.4 ಬಿಲಿಯನ್ ಡಾಲರ್ ವಹಿವಾಟು ನಡೆಸಲಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications