ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಇನ್ನು ಫ್ಲಿಪ್ ಕಾರ್ಟ್ನಲ್ಲಿಯೂ ಸಿಗುತ್ತೆ ಎಣ್ಣೆ!
ನವದೆಹಲಿ, ಆಗಸ್ಟ್ 17: ಆನ್ಲೈನ್ನಲ್ಲಿ ಮದ್ಯ ಪೂರೈಕೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಸರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕೆ ಮದ್ಯ ಮಾರಾಟಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಇ-ಕಾಮರ್ಸ್ ಕ್ಷೇತ್ರದ ದಿಗ್ಗಜ ಫ್ಲಿಪ್ ಕಾರ್ಟ್, ದೇಶದ ಎರಡು ಪ್ರಮುಖ ನಗರಗಳಲ್ಲಿ ಮದ್ಯ ಸರಬರಾಜು ಮಾಡಲು ಮದ್ಯ ತಯಾರಕ ಸಂಸ್ಥೆ ಡಿಯಾಜಿಯೊ ಸ್ಟಾರ್ಟಪ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಕೆಲವು ತಿಂಗಳ ಹಿಂದಷ್ಟೇ ಮತ್ತೊಂದು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಇದೇ ರೀತಿಯ ಆನ್ಲೈನ್ ಮದ್ಯ ಮಾರಾಟ ಸೌಲಭ್ಯ ಆರಂಭಿಸಲು ಉದ್ದೇಶಿಸಿತ್ತು. ಭಾರತದಲ್ಲಿ ಪ್ರಸ್ತುತ ಮದ್ಯ ಮಾರುಕಟ್ಟೆಯು 2.03 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ ಎಂದು ಐಡಬ್ಲ್ಯೂಎಸ್ಆರ್ ಡಿಂಕ್ಸ್ ಮಾರುಕಟ್ಟೆ ವಿಶ್ಲೇಷಣೆ ಅಂದಾಜಿಸಿತ್ತು.
ಡಿಯಾಜಿಯೊ ಬೆಂಬಲವುಳ್ಳ ಭಾರತದ ಆಲ್ಕೊಹಾಲ್ ಹೋಮ್ ಡೆಲಿವರಿ ಮೊಬೈಲ್ ಆಪ್, ಹಿಪ್ಬಾರ್ ಮೂಲಕ ಪಶ್ಚಿಮ ಬಂಗಾಳದ ಪೂರ್ವ ಭಾಗ ಮತ್ತು ಒಡಿಶಾದ ನಗರಗಳಲ್ಲಿ ಫ್ಲಿಪ್ಕಾರ್ಟ್ಅನ್ನು ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ ಎಂದು ವರದಿ ತಿಳಿಸಿದೆ. ಮುಂದೆ ಓದಿ...

ಫ್ಲಿಪ್ ಕಾರ್ಡ್ ಪ್ಲಾಟ್ಫಾರ್ಮ್ನಲ್ಲಿ ಖರೀದಿ
ಫ್ಲಿಪ್ ಕಾರ್ಟ್ ಬಳಕೆದಾರರಿಗೆ ತನ್ನ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಹಿಪ್ಬಾರ್ ಆಪ್ ಪ್ರವೇಶಿಸಲು ಅವಕಾಶ ನೀಡುತ್ತದೆ. ಫ್ಲಿಪ್ ಕಾರ್ಟ್ ಗ್ರಾಹಕರು ಮೊಬೈಲ್ ಆಪ್ ಮೂಲಕ ತಮ್ಮ ಇಷ್ಟದ ಮದ್ಯದ ಉತ್ಪನ್ನವನ್ನು ಆರ್ಡರ್ ಮಾಡಬಹುದು. ಫ್ಲಿಪ್ ಕಾರ್ಟ್ ಚಿಲ್ಲರೆ ಔಟ್ಲೆಟ್ಗಳಲ್ಲಿ ಅದನ್ನು ಖರೀದಿಸಿ ಸರಬರಾಜು ಮಾಡುತ್ತದೆ.

ಸ್ವಿಗ್ಗಿ, ಜೊಮ್ಯಾಟೋ ಮಾರಾಟ
ಆಹಾರ ಸರಬರಾಜು ಸ್ಟಾರ್ಟ್ಅಪ್ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೋ ಕೂಡ ಕೆಲವು ನಗರಗಳಲ್ಲಿ ಮನೆ ಮನೆಗೆ ಮದ್ಯ ಪೂರೈಕೆ ಸೌಲಭ್ಯ ಆರಂಭಿಸಿದ್ದವು. ಕೊರೊನಾ ವೈರಸ್ ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಆನ್ಲೈನ್ ಮದ್ಯಕ್ಕೆ ವಿಪರೀತ ಬೇಡಿಕೆ ಉಂಟಾಗಿತ್ತು. ಹೀಗಾಗಿ ಕೆಲವೆಡೆ ರಾಜ್ಯ ಸರ್ಕಾರಗಳೂ ಆನ್ಲೈನ್ ಮದ್ಯ ಮಾರಾಟಕ್ಕೆ ಮುಂದಾಗಿವೆ.

ಅಮೆಜಾನ್ನಲ್ಲಿ ಆರಂಭ
ಪಶ್ಚಿಮ ಬಂಗಾಳದ ಪೂರ್ವ ಭಾಗದ ಸ್ಥಳೀಯ ಸರ್ಕಾರ ಮತ್ತು ಒಡಿಶಾದಲ್ಲಿ ಫ್ಲಿಪ್ ಕಾರ್ಟ್ ಡಿಯಾಜಿಯೊ ಮೂಲಕ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಿವೆ. ಪಶ್ಚಿಮ ಬಂಗಾಳದಲ್ಲಿ ಆಲ್ಕೊಹಾಲ್ ಪೂರೈಕೆ ಮಾಡಲು ಅಮೆಜಾನ್, ಜೂನ್ ತಿಂಗಳಲ್ಲಿ ಅನುಮತಿ ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ಆನ್ಲೈನ್ ಫಾರ್ಮಸಿ ಆರಂಭಿಸುವುದಾಗಿಯೂ ಅಮೆಜಾನ್ ಶುಕ್ರವಾರ ತಿಳಿಸಿದೆ.

ಮದ್ಯ ಮಾರಾಟಗಾರರ ಸಂಘದ ಆಕ್ಷೇಪ
ಆನ್ಲೈನ್ ಮದ್ಯ ಪೂರೈಕೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, ಬಳಿಕ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿಯೂ ಆನ್ಲೈನ್ ಸರಬರಾಜು ಬಗ್ಗೆ ರಾಜ್ಯ ಸರ್ಕಾರ ಯೋಜಿಸಿದೆ. ಸರ್ಕಾರದ ಉದ್ದೇಶಕ್ಕೆ ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Adani: ವಿಕಲಚೇತನ ಛಾಯಾಗ್ರಾಹಕರಿಗಾಗಿ 'ಗ್ಲೋಬಲ್ ಎಬಿಲಿಟಿ ಫೋಟೋಗ್ರಫಿ ಚಾಲೆಂಜ್ 2026' ಘೋಷಣೆ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ









Click it and Unblock the Notifications