ಎಲ್ಲಾ ಡೆಬಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ

ಡೆಬಿಟ್ ಕಾರ್ಡ್ ಬಳಸಿ ಸಾಮಾನ್ಯವಾಗಿ ಮಾಲ್ ಗಳನ್ನು ಬಿಲ್ ಪಾವತಿ ಮಾಡಿ ಕೊಟ್ಟ ರಸೀತಿಗೆ ಸಹಿ ಹಾಕಿ ಗ್ರಾಹಕರು ಹೊರಟು ಬಿಡುತ್ತಿದ್ದರು. ಆದರೆ, ಈಗ ಪ್ರತಿ ಬಾರಿ ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸುವಾಗಲೂ ಪಿನ್ ಸಂಖ್ಯೆ ಹಾಕಲೇಬೇಕು.
ಪಾಯಿಂಟ್ ಆಫ್ ಸೇಲ್ಸ್ (ಪಿಒಎಸ್) ಸೇರಿದಂತೆ ಇತರೆ ಮಾರಾಟ ಮಳಿಗೆಗಳಲ್ಲಿ ಇನ್ನು ಮುಂದೆ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸಬೇಕಾದರೆ ನಾಲ್ಕು ಅಂಕೆಗಳ 'ಪಿನ್' ನಮೂದಿಸುವುದು ಕಡ್ಡಾಯ. ಗ್ರಾಹಕರಿಗೆ ಈಗಾಗಲೇ ಈ ಕುರಿತು 'ಎಸ್ ಎಂಎಸ್' ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು 'ಆರ್ ಬಿಐ' ತಿಳಿಸಿದೆ.
ಇದೇ ಕ್ರೆಡಿಟ್ ಕಾರ್ಡ್ ವಿಷಯಕ್ಕೆ ಬಂದರೆ ಎಲ್ಲಾ ಅಂತಾರಾಷ್ಟ್ರೀಯ ವಹಿವಾಟು ಹಾಗೂ ಇಂಟರ್ನೆಟ್ ಮೂಲಕ ವಹಿವಾಟುಗಳಿಗೆ ಪಿನ್ ಕಡ್ಡಾಯವಾಗಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಆನ್ ಲೈನ್ ಶಾಪಿಂಗ್ ಸಾಧ್ಯವಾಗುತ್ತಿಲ್ಲವೆಂದರೆ ತಕ್ಷಣವೇ ಇಎಂವಿ ಚಿಪ್ ಹಾಗೂ PIN ಇದೆ ಕೇಳಿ ಪಡೆಯಿರಿ.
ಭಾರತದಲ್ಲಿ ಸುಮಾರು 350 ಮಿಲಿಯನ್ ಗೂ ಅಧಿಕ ಡೆಬಿಟ್ ಕಾರ್ಡ್ ಹಾಗೂ 19 ಮಿಲಿಯನ್ ಕ್ರೆಡಿಟ್ ಕಾರ್ಡ್ ಗಳು ಬಳಕೆಯಲ್ಲಿರುವುದು ಕಂಡು ಬಂದಿದೆ.
ಇದರಲ್ಲಿ ಹೊಸದೇನಿಲ್ಲ: ಎಟಿಎಂ ಗಳಲ್ಲಿ ಪ್ರತಿ ವ್ಯವಹಾರ ಪ್ರಕ್ರಿಯೆಗೂ ಪಿನ್ ಸಂಖ್ಯೆ ಬಳಸುವುದು ಕಡ್ಡಾಯಗೊಳಿಸಿದ ಹಾಗೆ ಡೆಬಿಟ್ ಕಾರ್ಡ್ ಬಳಸಿ ನಡೆಸುವ ಪ್ರತಿ ವ್ಯವಹಾರಕ್ಕೂ ಪಿನ್ ಸಂಖ್ಯೆ ನಮೂದಿಸುವುದು ಅನಿವಾರ್ಯವಾಗಲಿದೆ ಎಂದು 2012ರ ಡಿಸೆಂಬರ್ ತಿಂಗಳಿನಲ್ಲೇ ಆರ್ ಬಿಐ ಘೋಷಿಸಿತ್ತು. ಈಗ ಜಾರಿಗೆ ಬಂದಿದೆ ಅಷ್ಟೇ.[ಹೆಚ್ಚಿನ ಸುಧಾರಣೆಗಳ ಬಗ್ಗೆ ಓದಿ]
ಡೆಬಿಟ್ ಕಾರ್ಡ್ ಗಳ ದುರ್ಬಳಕೆ, ಕಳೆದು ಹೋದ ಡೆಬಿಟ್ ಕಾರ್ಡ್ ಗಳ ಮೇಲೆ ನಿಗಾ ವಹಿಸಲು ಈ ರೀತಿ ಕ್ರಮ ಅನಿವಾರ್ಯವಾಗಿದೆ. ಇನ್ಮುಂದೆ ಡೆಬಿಟ್ ಕಾರ್ಡ್ ನಲ್ಲಿ ಗ್ರಾಹಕರ ಭಾವಚಿತ್ರ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಇನ್ನಷ್ಟು ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಡ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಆರ್ ಬಿಐ ಚಿಂತಿಸಿದೆ.
ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಬಳಕೆಯನ್ನು ಕೂಡಾ Foreign Exchange Management Act, 1999 ಕಾಯ್ದೆ ಅನುಗುಣವಾಗಿ ಬಳಕೆಗೆ ನೀಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಕೆಲವು ಡೆಬಿಟ್ ಕಾರ್ಡ್ ಗಳನ್ನು ಹಿಂಪಡೆದು ಸುಧಾರಿತ ಕಾರ್ಡ್ ಗಳನ್ನು ಗ್ರಾಹಕರಿಗೆ ಒದಗಿಸುವಂತೆ ಕೂಡಾ ಆರ್ ಬಿಐ ಹೇಳಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications