ಮುಂಚೂಣಿ ಉದ್ಯಮಿಗಳ ಪಟ್ಟಿಯಿಂದ ಜಾಕ್ ಮಾ ಹೆಸರು ಕೈಬಿಟ್ಟ ಚೀನಾ ಸರ್ಕಾರಿ ಪತ್ರಿಕೆ
ಬೀಜಿಂಗ್, ಫೆಬ್ರವರಿ 2: ಚೀನಾದ ಸರ್ಕಾರಿ ಮಾಧ್ಯಮವು ಪ್ರಕಟಿಸಿರುವ ದೇಶದ ಪ್ರಮುಖ ಉದ್ಯಮಶೀಲರ ಪಟ್ಟಿಯಿಂದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್ ಮಾ ಅವರ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಸರ್ಕಾರಕ್ಕೂ ಜಾಕ್ ಮಾ ಅವರ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ವರದಿಗಳಿಗೆ ಮತ್ತಷ್ಟು ಪುಷ್ಟಿ ದೊರೆತಿದೆ.
ಶಾಂಘೈ ಸೆಕ್ಯುರಿಟೀಸ್ ನ್ಯೂಸ್ ಮೊದಲ ಪುಟದಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಚೀನಾದ ಖ್ಯಾತ ಉದ್ಮಿ ಜಾಕ್ ಮಾ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ಬದಲು ಹುವೀ ಟೆಕ್ನಾಲಜೀಸ್ನ ರೆನ್ ಝೆಂಗ್ಫೀ, ಷಿಯೋಮಿ ಕಾರ್ಪ್ಸ್ನ ಲೀ ಜುನ್ ಮತ್ತು ಬಿವೈಡಿಯ ವಾಂಗ್ ಚುವಾನ್ಫು ಅವರನ್ನು ತಮ್ಮ ಕೊಡುಗೆಗಾಗಿ ಶ್ಲಾಘಿಸಲಾಗಿದೆ.
ಮಂಗಳವಾರ ಈ ಲೇಖನ ಪ್ರಕಟಗೊಂಡಿದ್ದು, ಅಲಿಬಾಬಾ ಕೂಡ ತನ್ನ ತ್ರೈಮಾಸಿಕ ಅವಧಿಯ ಆದಾಯದ ವರದಿ ಪ್ರಕಟಿಸಿದೆ. ಸರ್ಕಾರಿ ಸ್ವಾಮ್ಯದ ಪತ್ರಿಕೆಯು ಅಲಿಬಾಬಾವನ್ನು ಪರಿಗಣಿಸದೆ ಇರುವುದರ ಬಗ್ಗೆ ಸಂಸ್ಥೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಕ್ಟೋಬರ್ 24ರಂದು ತಮ್ಮ ಭಾಷಣದಲ್ಲಿ ಜಾಕ್ ಮಾ ಅವರು ಚೀನಾದ ಆರ್ಥಿಕ ನೀತಿ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಘಟನೆ ಬಳಿಕ ಅಲಿಬಾಬಾ ಸಮೂಹದ 37 ಬಿಲಿಯನ್ ಡಾಲರ್ ಐಪಿಒ ಯೋಜನೆಗೆ ಚೀನಾ ಸರ್ಕಾರ ತಡೆ ನೀಡಿತ್ತು. ನಂತರ 'ಆಫ್ರಿಕಾದ ಬಿಸಿನೆಸ್ ಹೀರೋಗಳು' ಎಂಬ ಟಿವಿ ಕಾರ್ಯಕ್ರಮದ ಫೈನಲ್ನ ತೀರ್ಪುಗಾರ ಪಟ್ಟಿಯಿಂದ ಜಾಕ್ ಮಾ ಹೆಸರನ್ನು ಕೈಬಿಡಲಾಗಿತ್ತು.
ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಬಳಿಕ ಎರಡು ತಿಂಗಳವರೆಗೆ ಜಾಕ್ ಮಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಎಲ್ಲಿದ್ದಾರೆ ಎನ್ನುವುದು ಕೂಡ ಬಹಿರಂಗವಾಗಿರಲಿಲ್ಲ. ಕಳೆದ ತಿಂಗಳು 50 ಸೆಕೆಂಡುಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications