54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್
ಬೆಂಗಳೂರು, ಜೂನ್ 24: ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸರಿ ಸುಮಾರು 16 ಬಿಲಿಯನ್ ಯುಎಸ್ ಡಾಲರ್ ನೀಡಿ, ಅಮೆರಿಕದ ವಾಲ್ ಮಾರ್ಟ್ ಸಂಸ್ಥೆ ಖರೀದಿಸಿ ವರ್ಷಗಳು ಕಳೆದರೂ ಸಂಪೂರ್ಣ ನಿಯಂತ್ರಣ ಹೊಂದುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ.
ವಾಲ್ಮಾರ್ಟ್ ಪಾಲಾದ ಬಳಿಕ ಫ್ಲಿಪ್ ಕಾರ್ಟಿನ ಸಹ ಸ್ಥಾಪಕ, ಹಾಲಿ ಸಿಇಒ ಸಚಿನ್ ಬನ್ಸಾಲ್ ಅವರು 9 ವರ್ಷಗಳ ಬಳಿಕ ಸಿಇಒ ಹುದ್ದೆ ತೊರೆಯಲಿದ್ದಾರೆ. ಜೊತೆಗೆ ತಮ್ಮ ಬಳಿಯಿದ್ದ 5.5 % ಷೇರುಗಳನ್ನು ವಾಲ್ ಮಾರ್ಟ್ ಗೆ ಮಾರಿದ್ದರು.
ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಮೂಹ ಸಂಸ್ಥೆ ಸಿಇಒ ಆಗಿ ಮುಂದುವರೆದಿದ್ದರು. ಈಗ ತಮ್ಮ ಬಳಿ ಇದ್ದ 54 ಲಕ್ಷ ಈಕ್ವಿಟಿ ಷೇರುಗಳನ್ನು ರೀಟೈಲ್ ಮಾರುಕಟ್ಟೆ ದಿಗ್ಗಜ ವಾಲ್ಮಾರ್ಟಿಗೆ ಮಾರಿದ್ದಾರೆ. ಇದರ ಮೊತ್ತ ಸುಮಾರು 76 ಮಿಲಿಯನ್ ಡಾಲರ್ (531 ಕೋಟಿ ರು) ಎನ್ನಲಾಗಿದೆ.

ವಾಲ್ ಮರ್ಟ್ ಅಧೀನದಲ್ಲಿರುವ ಲಕ್ಸಂಬರ್ಗ್ ನ ಎಫ್ ಐಟಿ ಹೋಲ್ಡಿಂಗ್ಸ್ ಎಸ್ಎ ಆರ್ ಎಲ್ ಪೇಪರ್ . ವಿಸಿಗೆ ಈ ಮೊತ್ತ ಸೇರಲಿದೆ. ಬಿನ್ನಿ ಬನ್ಸಾಲ್ ಅವರ ಷೇರುಗಳ ಮಾರಾಟದ ಬಳಿಕ ಈಗ ವಾಲ್ಮಾರ್ಟ್ ಬಳಿ ಇರುವ ಫ್ಲಿಪ್ ಕಾರ್ಟಿನ ಷೇರಿನ ಸಂಖ್ಯೆ 5,39,912ಕ್ಕೇರಿದೆ.
ಬಿನ್ನಿ ಬನ್ಸಲ್ ವಿರುದ್ಧ ವೈಯಕ್ತಿಕ ದುರ್ನಡತೆ ಆರೋಪದ ಮೇಲೆ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಿಂದ ಸ್ವತಂತ್ರ ತನಿಖೆಯೊಂದು ನಡೆದಿತ್ತು. ಆ ನಂತರ ತಮ್ಮ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. ನಂತರ ಫ್ಲಿಪ್ ಕಾರ್ಟ್ ಸಿಇಒ ಆಗಿರುವ ಕಲ್ಯಾಣ್, ಅವರಿಗೆ ಮೈಂತ್ರಾ ಮತ್ತು ಜಬೊಂಗ್ ಮುಖ್ಯಸ್ಥರಾಗಿರುವ ಅನಂತ್ ನಾರಾಯಣನ್ ವರದಿ ಮಾಡಿಕೊಳ್ಳಲಿದ್ದಾರೆ.
ವಾಲ್ಮಾರ್ಟ್ನ ಇತರೆ ಮಾರುಕಟ್ಟೆಗಳಿಗೂ ಬೃಹತ್ ಪ್ರಮಾಣದ ಉತ್ಪನ್ನಗಳನ್ನು ಖರೀದಿಸುವಂಥ ದೇಶಗಳಲ್ಲಿ ಭಾರತವೂ ಪ್ರಮುಖವಾದದ್ದು. ಈ ಉತ್ಪನ್ನಗಳಲ್ಲಿ ಕರಕುಶಲ, ಜವಳಿ, ಉಡುಪುಗಳು, ಫಾರ್ಮಾಸ್ಯುಟಿಕಲ್ಸ್ ಇತ್ಯಾದಿಗಳು ಸೇರಿದ್ದು, ಈ ಮೂಲಕ ಸ್ಥಳೀಯ ಉತ್ಪಾದನೆ ಮತ್ತು ರಫ್ತಿಗೆ ವಾಲ್ ಮಾರ್ಟ್ ಉತ್ತೇಜನ ನೀಡುತ್ತಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications