ಜಿಯೋ ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್
ಏರ್ ಟೆಲ್ ತನ್ನ ಗ್ರಾಹಕರಿಗೆ 244 ರು ಗಳಿಗೆ 70ಜಿಬಿ 4ಜಿ ಡಾಟಾ ನೀಡುವುದಾಗಿ ಘೋಷಿಸಿದೆ. ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಸಮ್ಮರ್ ಆಫರ್ ಕಡಿತಗೊಳಿಸಿ ಧನ್ ಧನಾ ಧನ್ ಆಫರ್ ಬಿಟ್ಟ ಮೇಲೆ ದರ ಸಮರ ಮತ್ತೆ ಶುರುವಾಗಿದೆ.
ಬೆಂಗಳೂರು, ಏಪ್ರಿಲ್ 19: ರಿಲಯನ್ಸ್ ಜಿಯೋ ನೀಡಿರುವ ಧನ್ ಧನಾ ಧನ್ ಆಫರ್ ವಿರುದ್ಧ ಟೆಲಿಕಾಂ ದೈತ್ಯ ಭಾರ್ತಿ ಏರ್ ಟೆಲ್ ಮತ್ತೊಮ್ಮೆ ತೊಡೆ ತಟ್ಟಿ ನಿಂತಿದೆ. ತನ್ನ ಗ್ರಾಹಕರಿಗೆ ಮೂರು ಹೊಸ ಯೋಜನೆಗಳನ್ನು ಏರ್ ಟೆಲ್ ಪ್ರಕಟಿಸಿದೆ.
ಏರ್ ಟೆಲ್ ತನ್ನ ಗ್ರಾಹಕರಿಗೆ 244 ರು ಗಳಿಗೆ 70ಜಿಬಿ 4ಜಿ ಡಾಟಾ ನೀಡುವುದಾಗಿ ಘೋಷಿಸಿದೆ. ಟೆಲಿಕಾಂ ನಿಯಂತ್ರಕ ಟ್ರಾಲ್ ನಿರ್ದೇಶನದಂತೆ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಸಮ್ಮರ್ ಆಫರ್ ಕಡಿತಗೊಳಿಸಿ ಧನ್ ಧನಾ ಧನ್ ಆಫರ್ ಬಿಟ್ಟಿತ್ತು. ಇದರಿಂದ ಮತ್ತೊಮ್ಮೆ ಟೆಲಿಕಾಂ ದರ ಸಮರ ಆರಂಭವಾಗಿದೆ. [ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್]
ಧನ್ ಧನಾ ಧನ್ ಆಫರ್ ವಿರುದ್ಧ ಏರ್ ಟೆಲ್ ಮೂರು ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.
* ಏರ್ ಟೆಲ್ 244ರು ಯೋಜನೆ
* ಏರ್ ಟೆಲ್ 399 ರು ಯೋಜನೆ
* ಏರ್ ಟೆಲ್ 345 ರು ಯೋಜನೆ
ಯೋಜನೆಗಳ ಬಗ್ಗೆ ವಿವರ ಮುಂದೆ ಇದೆ...

Airtel Rs 244 Plan
* 70 ದಿನಗಳ ಮಟ್ಟಿಗೆ ಪ್ರತಿದಿನ 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* ಪ್ರತಿ ದಿನದ ಡಾಟಾ ಮಿತಿ 1ಜಿಬಿ ಮಾತ್ರ.
* ಮೈಏರ್ ಟೆಲ್ ಆಪ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, 244ರು ಯೋಜನೆಯಲ್ಲಿ ಎಸ್ಟಿಡಿ ಹಾಗೂ ಸ್ಥಳೀಯ ಕರೆಗಳು ಉಚಿತ.
* ಆದರೆ, ಏರ್ ಟೆಲ್ ನಿಂದ ಏರ್ ಟೆಲ್ ಗೆ 300 ನಿಮಿಷಗಳ ಮಿತಿ ಹಾಕಲಾಗಿದೆ.
* ವಾರವೊಂದಕ್ಕೆ ಬೇರೆ ನೆಟ್ವರ್ಕ್ ಗಳಿಗೆ 1,200 ನಿಮಿಷಗಳ ಕಾಲ ಉಚಿತ ಕರೆ ಮಾಡಬಹುದು.
* ಕಾಲ್ ಮಿತಿ ಮೀರಿದ ಮೇಲೆ ಪ್ರತಿ ನಿಮಿಷಕ್ಕೆ 0.10 ಪೈಸೆಯಂತೆ ದರ ನಿಗದಿಯಾಗಿದೆ.

Airtel Rs 399 Plan
* 70 ದಿನಗಳ ಮಟ್ಟಿಗೆ ಪ್ರತಿದಿನ 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* ಮೈಏರ್ ಟೆಲ್ ಆಪ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, 244ರು ಯೋಜನೆಯಲ್ಲಿ ಎಸ್ಟಿಡಿ ಹಾಗೂ ಸ್ಥಳೀಯ ಕರೆಗಳು ಯಾವುದೇ ನೆಟ್ವರ್ಕ್ ಉಚಿತ.
* 70ದಿನಗಳ ಕಾಲಮಿತಿ 3,000 ನಿಮಿಷಗಳ ಕಾಲ ಉಚಿತ ಕರೆ ಮಾಡಬಹುದು.
* ಕಾಲ್ ಮಿತಿ ಮೀರಿದ ಮೇಲೆ ಪ್ರತಿ ನಿಮಿಷಕ್ಕೆ 0.10 ಪೈಸೆಯಂತೆ ದರ ನಿಗದಿಯಾಗಿದೆ.

Airtel Rs 345 Plan
* 1ಜಿಬಿ ಡಾಟಾವನ್ನು 2 ಜಿಬಿಗೆ ಏರಿಸಲಾಗಿದೆ.
* 28 ದಿನಗಳ ಅವಧಿ ಪ್ರತಿದಿನ 2 ಜಿಬಿ ಲಭ್ಯವಾಗಲಿದೆ.
* 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* 3,000 ನಿಮಿಷಗಳ ಉಚಿತ ಕಾಲ್ ಮಿತಿ ನೀಡಲಾಗಿದೆ.

ಆರಂಭಿಕ ಪ್ಲಾನ್ 309
ಆರಂಭಿಕ ಪ್ಲಾನ್ 309 ರು ನಿಂದ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್ನ 3 ತಿಂಗಳ ಕಾಲ ನೀಡಲಿದೆ. ಇನ್ನಷ್ಟು ವಿವರಕ್ಕೆ ಕ್ಲಿಕ್ ಮಾಡಿ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications