ಸೇಫ್ ಲಾಕರ್ ಗಳ ವಸ್ತುಗಳು ಕಾಣೆಯಾದರೆ, ಬ್ಯಾಂಕ್ ಜವಾಬ್ದಾರಿಯಲ್ಲ!
ಬ್ಯಾಂಕುಗಳ ಸೇಫ್ ಡೆಪಾಸಿಟ್ ಲಾಕರ್ ಗಳಲ್ಲಿ ಇಡುವ ವಸ್ತುಗಳು ಕಾಣೆಯಾದರೆ ಸಂಬಂಧಪಟ್ಟ ಬ್ಯಾಂಕ್ ಜವಾಬ್ದಾರವಲ್ಲ. ಅಲ್ಲದೆ, ಬ್ಯಾಂಕುಗಳಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ.
ಬೆಂಗಳೂರು, ಜೂನ್ 26: ಬ್ಯಾಂಕ್ ಲಾಕರ್ ಗಳಲ್ಲಿ ಇಟ್ಟ ವಸ್ತುಗಳು ಕಾಣೆಯಾದರೆ ಅಥವಾ ಕಳುವಾದರೆ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸ್ಪಷ್ಟಪಡಿಸಿದೆ.
ಲಾಕರ್ ಗಳಲ್ಲಿನ ವಸ್ತುಗಳು ಕಳ್ಳತನವಾದರೆ ಅಥವಾ ಕಾಣೆಯಾದರೆ, ಅದಕ್ಕೆ ಬ್ಯಾಂಕು ಗಳು ಪರಿಹಾರ ನೀಡಬೇಕಿಲ್ಲ ಎಂಬ ಸ್ಪಷ್ಟನೆಯನ್ನೂ ಅದು ನೀಡಿದೆ.

ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ವಕೀಲ ಕುಶ್ ಕಲ್ರಾ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಹೀಗೆ ಹೇಳಿದೆ.
ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಿರುವ ಆರ್ ಬಿಐ, ಸೇಫ್ ಲಾಕರನ್ನು ಬಾಡಿಗೆಗೆ ನೀಡುವಾಗ ಗ್ರಾಹಕರ ಜತೆ ಮಾಡಿ ಕೊಳ್ಳುವ ಒಪ್ಪಂದವು ಬಾಡಿಗೆದಾರ ಮತ್ತು ಮನೆ ಮಾಲೀಕನ ಮಧ್ಯೆ ಆಗುವ ಒಪ್ಪಂದದ ಮಾದರಿಯಲ್ಲಿ ಇರುತ್ತದೆ. ಹೀಗಾಗಿ, ಲಾಕರ್ಗಳಲ್ಲಿ ಇಟ್ಟ ವಸ್ತುಗಳಿಗೆ ಆಯಾ ಗ್ರಾಹಕರೇ ಹೊಣೆಗಾರರು ಎಂದು ಹೇಳಿದೆ.
ಕುಶ್ ಲಗ್ರಾ ಈ ಹಿಂದೆ 19 ಬ್ಯಾಂಕುಗಳಿಗೆ ಇಂಥದ್ದೇ ಪ್ರಶ್ನೆ ಕೇಳಿದಾಗ ಅವೂ ಸಹ ಜವಾಬ್ದಾರಿ ಹೊರಲು ನುಣುಚಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆರ್ ಬಿಐಗೇ ಅವರು ಅರ್ಜಿ ಹಾಕಿದ್ದರು. ಇದೀಗ, ಅಲ್ಲಿಂದಲೂ ಅದೇ ಮಾದರಿಯ ಉತ್ತರ ಬಂದಿದೆ.
ಆರ್ ಬಿಐನ ಈ ಸ್ಪಷ್ಟನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕುಶ್ ಕಲ್ರಾ, ಗ್ರಾಹಕರಿಗೆ ಆಗುವ ನಷ್ಟದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಎಲ್ಲಾ ಬ್ಯಾಂಕುಗಳು ಒಗ್ಗಟ್ಟಾಗಿರುವುದು ಸ್ಪರ್ಧಾ ಕಾಯ್ದೆಗೆ ವಿರುದ್ಧವಾದುದು ಎಂದಿದ್ದಾರೆ. ಈ ಬಗ್ಗೆ ಸ್ಪರ್ಧಾ ಆಯೋಗಕ್ಕೆ ದೂರು ನೀಡಲೂ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪರ್ಧಾ ಆಯೋಗದಿಂದ ಸೂಕ್ತ ತನಿಖೆಯಾಗಬೇಕೆಂಬುದು ಅವರ ಒತ್ತಾಯವಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications