ವಿಪ್ರೋದಲ್ಲಿದ್ದ ಅರ್ಧದಷ್ಟು ಷೇರು ದಾನ ಮಾಡಿದ ಅಜೀಂ ಪ್ರೇಮ್ ಜಿ
ಬೆಂಗಳೂರು, ಜುಲೈ 09: ಐಟಿ ಉದ್ಯಮಿ ಅಜೀಂ ಪ್ರೇಮ್ಜಿ ಅವರು ಮತ್ತೊಮ್ಮೆ ದಾನ ಧರ್ಮ ಕಾರ್ಯಗಳಿಂದ ಸುದ್ದಿಯಾಗಿದ್ದಾರೆ. ಭಾರತದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋದಲ್ಲಿರುವ ತಮ್ಮ ಅರ್ಧದಷ್ಟು ಷೇರುಗಳನ್ನು ದತ್ತಿ ಕಾರ್ಯಗಳಿಗಾಗಿ ನೀಡಿದ್ದಾರೆ.
ಪ್ರೇಮ್ಜಿ ಅವರ ನಿರ್ಧಾರದಿಂದ ಪ್ರಸಕ್ತ ವರ್ಷದಲ್ಲಿ ಅಜೀಂ ಪ್ರೇಮ್ಜಿ ಟ್ರಸ್ಟ್ನ ನಿಧಿಗೆ ಡಿವಿಡೆಂಡ್ ರೂಪದಲ್ಲಿ ಹೆಚ್ಚುವರಿಯಾಗಿ 530 ಕೋಟಿ ರೂ.ಗಳು ಹರಿದು ಬರಲಿವೆ. ತಮ್ಮ ಬಳಿ ಇದ್ದ ಹೆಚ್ಚುವತಿ ಶೇ18ರಷ್ಟು ಷೇರುಗಳನ್ನು ನೀಡುವುದರ ಮೂಲಕ ಒಟ್ಟಾರೆ ಶೇ 39ರಷ್ಟು ಷೇರುಗಳು(53,284 ಕೋಟಿ ರು ಮೌಲ್ಯ) ಟ್ರಸ್ಟಿನ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗವಾಗಲಿದೆ.

ವಿಪ್ರೋದಲ್ಲಿ ಶೇ 73.39ರಷ್ಟು ಷೇರುಗಳನ್ನು ಹೊಂದಿರುವ ಪ್ರೇಮ್ ಜಿ ಅವರು ಈ ಮುಂಚೆ 4.3 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಶೇ 21ರಷ್ಟು ಷೇರುಗಳನ್ನು ದಾನ ಮಾಡಿದ್ದರು. ಹರೂನ್ ಇಂಡಿಯಾ ಅತ್ಯಂತ ಉದಾರ ವ್ಯಕ್ತಿಗಳ ಪಟ್ಟಿಯಲ್ಲಿ 2014ರಲ್ಲಿ ಪ್ರೇಂಜಿ ಅಗ್ರಸ್ಥಾನ ಪಡೆದುಕೊಂಡಿದ್ದರು.
69ರ ಹರೆಯದ ಪ್ರೇಮ್ಜಿ ಧರ್ಮಾರ್ಥ ಕಾರ್ಯಗಳಿಗಾಗಿ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಕೊಡುಗೆಯಾಗಿ ನೀಡುವಂತೆ ವಿಶ್ವದ ಶ್ರೀಮಂತರನ್ನು ಆಹ್ವಾನಿಸುವ, ಬಿಲಿಯಾಧಿಪತಿಗಳಾದ ವಾರೆನ್ ಬಫೆಟ್ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಾಯೋಜಿಸಿದ್ದ 'ಗಿವಿಂಗ್ ಪ್ಲೆಜ್'ಗೆ ಮೊದಲು ಸಹಿ ಮಾಡಿದ ಭಾರತೀಯರ ಎಂಬುದನ್ನು ಮರೆಯುವಂತಿಲ್ಲ.
ಕಳೆದ 15 ವರ್ಷಗಳಲ್ಲಿ ನನ್ನ ವೈಯಕ್ತಿಕ ದಾನಕಾರ್ಯಗಳ ಮೂಲಕ ಗಿವಿಂಗ್ ಪ್ಲೆಜ್ನಲ್ಲಿ ನನ್ನ ನಂಬಿಕೆಯನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಪ್ರೇಮ್ಜಿ ಕಂಪೆನಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಶೇರುದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. (ಪಿಟಿಐ)
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications