ಫ್ಲಿಪ್ ಕಾರ್ಟಿನಲ್ಲಿ 10 ಲಕ್ಷ ಹೂಡಿ, ಕೋಟಿಗಟ್ಟಲೆ ಬಾಚಿದ ಗುಪ್ತ
ಬೆಂಗಳೂರು, ಮೇ 12: ಹೇಲಿಯಾನ್ ವೆಂಚರ್ಸ್ ಎಂಬ ಆರ್ಥಿಕ ಸಂಸ್ಥೆ ಹುಟ್ಟುಹಾಕಿ, 2009ರಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆ 10 ಲಕ್ಷ ನೀಡಿ ಏಂಜೆಲ್ ಇನ್ವೆಸ್ಟರ್ ಎನಿಸಿಕೊಂಡಿದ್ದ ಆಶೀಶ್ ಗುಪ್ತ ಈಗ ಬರೋಬ್ಬರಿ 20 ಮಿಲಿಯನ್ ಡಾಲರ್ ಹೊಂದಲಿದ್ದಾರೆ.
ಬೆಂಗಳೂರು ಮೂಲದ ಭಾರತದ ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸುಮಾರು 16 ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಅಮೆರಿಕದ ವಾಲ್ ಮಾರ್ಟ್ ಖರೀದಿಸಿದೆ. ಇದಾದ ಬಳಿಕ, ಫ್ಲಿಪ್ ಕಾರ್ಟ್ ಷೇರುಗಳನ್ನು ಹೊಂದಿದ್ದವರ ಷೇರು ಮೌಲ್ಯಗಳು ಗಗನಕ್ಕೇರಿವೆ.
ಈ ಒಪ್ಪಂದದ ಬಳಿಕ ಅಮೆರಿಕದ ರೀಟೈಲ್ ಕ್ಷೇತ್ರದ ದಿಗ್ಗಜ ವಾಲ್ ಮಾರ್ಟ್ ಸುಮಾರು 2 ಬಿಲಿಯನ್ ಡಾಲರ್ (ಸುಮಾರು 13000 ಕೋಟಿ ರು) ಈಕ್ವಿಟಿಯನ್ನು ಫ್ಲಿಪ್ ಕಾರ್ಟಿಗೆ ಸೇರಿಸಿ ಇಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ. ಜತೆಗೆ ಫ್ಲಿಪ್ ಕಾರ್ಟ್ ನಂಬಿ ಹೂಡಿಕೆ ಮಾಡಿದ್ದವರ ಬಾಳು ಬೆಳಕಾಗಿದೆ.

ಆಶೀಶ್ ಗುಪ್ತಾ: 1998ರಲ್ಲಿ ಜಂಗ್ಲಿ ಎಂಬ ಬೆಲೆ ತುಲನೆ ಮಾಡುವ ಸ್ಟಾರ್ ಅಪ್ ಸಂಸ್ಥೆ ಹುಟ್ಟುಹಾಕಿದ್ದ ಇವರು ನಂತರ ಅಮೆಜಾನ್ ಸಂಸ್ಥೆಗೆ 240 ಮಿಲಿಯನ್ ಡಾಲರ್ ಗೆ ಮಾರಿದ್ದರು. ಎರಡು ದಶಕಗಳ ಬೈಕ ಗುಪ್ತಾ ಅವರು ಅಮೆಜಾನ್ ನ ಎದುರಾಳಿಗಳಾದ ವಾಲ್ಮಾರ್ಟ್ ಹಾಗೂ ಫ್ಲಿಪ್ ಕಾರ್ಟ್ ಡೀಲ್ ನಿಂದಾಗಿ 20 ಮಿಲಿಯನ್ ಡಾಲರ್ ಹೊಂದಲಿದ್ದಾರೆ.
ಫ್ಲಿಪ್ ಕಾರ್ಟ್ ಅಲ್ಲದೆ, ಮೇಕ್ ಮೈ ಟ್ರಿಪ್, ಮ್ಯೂಸಿಗ್ಮಾ ಮುಂತಾದ ಸಂಸ್ಥೆಗೂ ಏಂಜೆಲ್ ಇನ್ವೆಸ್ಟರ್ ಆಗಿದ್ದರು. ಎಲ್ಲದರಿಂದಲೂ ಲಾಭ ಗಳಿಸಿದ್ದಾರೆ. ಯುಎಸ್ ನಲ್ಲಿ ನೆಲೆಸಿರುವ ಗುಪ್ತ ಅವರು ಸ್ಟಾನ್ ಫರ್ಡ್ ವಿವಿಯಿಂದ ಪಿಎಚ್ ಡಿ ಪಡೆದಿದ್ದು, ಐಐಟಿ ಪದವೀಧರರು ಕೂಡಾ ತಾವಂತ್ ಟೆಕ್ನಾಲಜೀಸ್ ಕೂಡಾ ಸಾಕಷ್ಟು ಸದ್ದು ಮಾಡಿತ್ತು.
ಉದ್ಯೋಗ ಸೃಷ್ಟಿ
ಫ್ಲಿಪ್ ಕಾರ್ಟ್ ನ ಈ ಡೀಲ್ ನಿಂದಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿದೆಯಲ್ಲದೇ, ಫ್ಲಿಪ್ ಕಾರ್ಟ್ ನ ಸಾವಿರಾರು ಷೇರುದಾರರು ಕೋಟ್ಯಧಿಪತಿಗಳಾಗುತ್ತಿದ್ದಾರೆ.ಫ್ಲಿಪ್ ಕಾರ್ಟ್ ನ 100 ಮಂದಿ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಕೋಟ್ಯಧಿಪತಿಗಳಾಗುತ್ತಿದ್ದಾರೆ.
ವಾಲ್ ಮಾರ್ಟ್ ಡೀಲ್ ಬಳಿಕ 1 ಷೇರ್ ಗೆ 150 ಡಾಲರ್ ಅಂದರೆ ಅಂದಾಜು 10 ಸಾವಿರ ರೂಪಾಯಿ ಷೇರು ಮೌಲ್ಯದಂತೆ ಷೇರುಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದೆಂದು ಫ್ಲಿಪ್ ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications