ಮಹಿಳಾ ಸ್ವಸಹಾಯ ಗುಂಪುಗಳಿಗಾಗಿಯೇ ಪ್ರತ್ಯೇಕ ಇಲಾಖೆ
ಭುವನೇಶ್ವರ, ಮಾರ್ಚ್ 8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಒಡಿಶಾ ಸರ್ಕಾರವು 'ಮಿಷನ್ ಶಕ್ತಿ ಇಲಾಖೆ' ಎಂಬ ರಾಜ್ಯದಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ (ಎಸ್ಎಚ್ಜಿ) ಸಶಕ್ತೀಕರಣಕ್ಕಾಗಿ ಹೊಸ ಇಲಾಖೆಯನ್ನು ಸ್ಥಾಪಿಸಲು ನಿರ್ಧರಿಸಿದೆ.
ಮಿಷನ್ ಶಕ್ತಿ ನಿರ್ದೇಶನಾಲಯ ಮತ್ತು ಒಡಿಶಾ ಜೀವನೋಪಾಯ ಯೋಜನೆಗಳನ್ನು (ಒಎಲ್ಎಂ) ಮಿಷನ್ ಶಕ್ತಿ ಇಲಾಖೆ ಅಡಿ ತರಬೇಕೆಂಬ ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಅಹವಾಲು ಇಲಾಖೆ ಮುಂದಿರಿಸಿದ್ದ ಪ್ರಸ್ತಾಪವನ್ನು ಮುಖ್ಯಮಂತ್ರಿ ನವಿನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗಾಗಿ ಪ್ರತ್ಯೇಕ ಇಲಾಖೆಯೊಂದನ್ನು ಸೃಷ್ಟಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು 2020ರ ಮಾರ್ಚ್ 8ರಂದು ಮುಖ್ಯಮಂತ್ರಿ ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

'ಇಲಾಖೆಗಳು ಮತ್ತು ಸಂಸ್ಥೆಗಳು ಈಗಾಗಲೇ ತೆಗೆದುಕೊಂಡಿರುವ ಎಸ್ಎಚ್ಜಿ ಕಾರ್ಯಕ್ರಮಗಳನ್ನು ಬಲಪಡಿಸುವಲ್ಲಿ ಹೊಸ ಇಲಾಖೆ ಸಹಾಯ ಮಾಡಲಿದೆ. ಜತೆಗೆ ಎಲ್ಲ ಯೋಜನೆಗಳನ್ನು ಒಂದು ವೇದಿಕೆಯಡಿ ತರುವ ಮೂಲಕ ಹೆಚ್ಚಿನ ಗಮನ ಹರಿಸಲು, ಹೊಂದಾಣಿಕೆ ಹಾಗೂ ಚಟುವಟಿಕೆಗಳ ಪುನರಾವರ್ತನೆ ತಪ್ಪಿಸಲು ನೆರವು ನೀಡಲಿದೆ' ಎಂದು ರಾಜ್ಯ ಸಂಪುಟ ಸಭೆಯ ಬಳಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಸಹಾಯ ಗುಂಪುಗಳು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಅವುಗಳ ಸಂಘಟನೆಗಳೊಂದಿಗೆ ಇಲಾಖೆ ಕೆಲಸ ಮಾಡಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಿಷನ್ ಶಕ್ತಿಯು 2001ರಿಂದ ನಡೆಯುತ್ತಿರುವ ಎಸ್ಎಚ್ಜಿ ಚಳವಳನ್ನು ಒಂದೆಡೆ ಸಂಘಟಿಸಲಿದೆ.
ಸರ್ಕಾರಿ ಸ್ವಾಮ್ಯದ ಒಎಂಸಿ ಲಿಮಿಟೆಡ್ಗೆ, 2020-21ನೇ ಹಣಕಾಸು ಸಾಲಿನಲ್ಲಿ ರಾಷ್ಟ್ರೀಯ ಇ-ಹರಾಜು ಮೂಲಕ ಮಾರಲು ಉದ್ದೇಶಿಸಿರುವ ತನ್ನ ಸಂಪೂರ್ಣ ಪ್ರಮಾಣದ ಬಾಕ್ಸೈಟ್ ಖನಿಜವನ್ನು ತನ್ನ ದೀರ್ಘಕಾಲದ ಸಂಪರ್ಕ ಪೂರೈಕೆದಾರ ವೇದಾಂತ ಲಿಮಿಟೆಡ್ಗೆ ಮಾರಾಟ ಮಾಡಲು ಉಕ್ಕು ಹಾಗೂ ಗಣಿ ಇಲಾಖೆಯು ಮುಂದಿರಿಸಿದ್ದ ಪ್ರಸ್ತಾಪವನ್ನು ರಾಜ್ಯ ಸಂಪುಟ ಅಂಗೀಕರಿಸಿದೆ. ಪ್ರತಿ ಮೆಟ್ರಿಕ್ ಟನ್ಗೆ 1000 ರೂ.ದಂತೆ ಮಾರಾಟ ದರ ವಿಧಿಸಲಾಗಿದೆ.
ಅಲ್ಲದೆ, ಒರಿಸ್ಸಾ ಹೈಕೋರ್ಟ್ ನಿಗದಿಪಡಿಸಿರುವಂತೆ ಒಎಂಸಿಯು ಭೇದಾತ್ಮಕ ದರವನ್ನು ಪಾವತಿಸುವ ಕ್ರಮವನ್ನು ತೆಗೆದುಕೊಳ್ಳಲಿದೆ. ಇದು 2020-21ನೇ ಹಣಕಾಸು ವರ್ಷದ ಒಂದು ಸಮಯದ ಮಾನದಂಡಕ್ಕೆ ಸೀಮಿತವಾಗಿರುವಂತೆ ನಡೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಬಾಲಸೋರ್ ಜಿಲ್ಲೆಯ ರೆಮುನಾ ತಾಲ್ಲೂಕು ವ್ಯಾಪ್ತಿಯಲ್ಲಿನ ಸಮಾಲ್ಪುರ ಗ್ರಾಮದಲ್ಲಿ 12.09 ದಶಮಾಂಶ ಹಾಗೂ ಬಂಪಡಾ ಗ್ರಾಮದಲ್ಲಿ 12.91 ದಶಮಾಂಶ ಅಳತೆಯ ಸರ್ಕಾರಿ ಭೂಮಿಯನ್ನು ಭುವನೇಶ್ವರದಲ್ಲಿ ಏಮ್ಸ್ನ ಉಪಗ್ರಹ ಕೇಂದ್ರ ಸ್ಥಾಪಿಸುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಉಚಿತವಾಗಿ ಭೋಗ್ಯಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸಂಪುಟವು ಶನಿವಾರ ನಡೆಸಿದ ಸಂಪುಟ ಸಭೆಯಲ್ಲಿ ಒಟ್ಟು 16 ಪ್ರಸ್ತಾಪಗಳಿಗೆ ಅನುಮೋದನೆ ನೀಡಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications