ಕಾವಲುಗಾರನಂತೆ ನಿಂತು ಮನೆಯೊಳಗೆ ಹಾವು ಬರದಂತೆ ತಡೆದ ಬೆಕ್ಕು
ಭುವನೇಶ್ವರ, ಜುಲೈ 22: ಪ್ರಾಣಿಗಳಿಗೆ ಒಂದಿಷ್ಟು ಪ್ರೀತಿ ತೋರಿದರೂ ಮಾಲೀಕರಿಗೆ ಜೀವನವಿಡೀ ಪ್ರಾಮಾಣಿಕವಾಗಿರುತ್ತವೆ ಎನ್ನುವ ಮಾತಿದೆ. ಹಾಗೆಯೇ ಈ ಬೆಕ್ಕು ಕೂಡ ನಾಗರಹಾವನ್ನು ತನ್ನ ಮಾಲೀಕನ ಮನೆಯೊಳಗೆ ಬರದಂತೆ ತಡೆದಿದ್ದು, ಸುಮಾರು ಮೂವತ್ತು ನಿಮಿಷಗಳ ಕಾಲ ಕಾವಲುಗಾರನಂತೆ ನೋಡಿಕೊಂಡಿದೆ.
ಒಡಿಶಾದ ಭುವನೇಶ್ವರದಲ್ಲಿ ಈ ಸಂಗತಿ ನಡೆದಿದ್ದು, ಮುದ್ದಾದ ಬೆಕ್ಕಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಸಂಜೆ ಭುವನೇಶ್ವರದ ಸಂಪದ್ ಕುಮಾರ್ ಪರಿದಾ ಎಂಬುವರ ಮನೆ ಸಮೀಪ ಈ ಸಂಗತಿ ನಡೆದಿದೆ. ಸಂಪದ್ ಅವರ ಮನೆಯೊಳಗೆ ನಾಗರ ಹಾವು ಪ್ರವೇಶಿಸಲು ಮುಂದಾಗಿದ್ದು, ಆ ಹಾವನ್ನು ಒಳನುಗ್ಗದಂತೆ ತಡೆಯುವ ಬೆಕ್ಕಿನ ಪ್ರಯತ್ನದ ವಿಡಿಯೋ ವೈರಲ್ ಆಗಿದೆ.

ಏನನ್ನೋ ಕಂಡಂತೆ ಬೆಕ್ಕು ಓಡುತ್ತಿದ್ದುದನ್ನು ಕಂಡ ಮನೆಯವರು ಹೊರಗೆ ಬಂದು ನೋಡಿದಾಗ, ನಾಗರ ಹಾವು ಕಾಣಿಸಿದೆ. ನಾಗರ ಹಾವನ್ನು ನೋಡುತ್ತಿದ್ದಂತೆ ಪರಿದಾ ಮನೆಯವರು ಗಾಬರಿಯಾಗಿ, ಹಾವು ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಹಾವು ಮನೆಯೊಳಗೆ ಪ್ರವೇಶಿಸಲು ಸುಮಾರು ಬಾರಿ ಪ್ರಯತ್ನಿಸಿದೆ. ಆದರೆ ಇದಕ್ಕೆ ಎಡೆಮಾಡಿಕೊಡದ ಬೆಕ್ಕು ಕಾವಲಾಗಿ ನಿಂತಿದೆ. ಹಾವು ಬುಸುಗುಡುತ್ತಾ ಮುಂದಕ್ಕೆ ಬರಲು ಪ್ರಯತ್ನಿಸುತ್ತಿದ್ದರೂ ಅದನ್ನು ತಡೆದಿದೆ.
ಅರ್ಧ ಗಂಟೆ ನಂತರ ಸಹಾಯವಾಣಿ ಸ್ವಯಂ ಸೇವಕರು ಹಾವನ್ನು ಹಿಡಿದಿದ್ದಾರೆ. "ನಾನು ಇಲ್ಲಿಗೆ ಬರುವವರೆಗೂ ಹಾವನ್ನು ಒಳಹೋಗದಂತೆ ಬೆಕ್ಕು ಕಾವಲು ನಿಂತಿದೆ" ಎಂದು ಸ್ವಯಂಸೇವಕ ಅರುಣ್ ಹೇಳಿದ್ದಾರೆ.
"ಬೆಕ್ಕಿಗೆ ಈಗ ಒಂದೂವರೆ ವರ್ಷ. ನಮ್ಮ ಮನೆಯ ಸದಸ್ಯನೇ ಆಗಿಬಿಟ್ಟಿದೆ. ಇದು ಹಾವು ಮನೆಯೊಳಗೆ ಹೋಗದಂತೆ ತಡೆದಿದೆ" ಎಂದು ಪರೀದಾ ಸಂತಸ ವ್ಯಕ್ತಪಡಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications