ಕಾವಲುಗಾರನಂತೆ ನಿಂತು ಮನೆಯೊಳಗೆ ಹಾವು ಬರದಂತೆ ತಡೆದ ಬೆಕ್ಕು
ಭುವನೇಶ್ವರ, ಜುಲೈ 22: ಪ್ರಾಣಿಗಳಿಗೆ ಒಂದಿಷ್ಟು ಪ್ರೀತಿ ತೋರಿದರೂ ಮಾಲೀಕರಿಗೆ ಜೀವನವಿಡೀ ಪ್ರಾಮಾಣಿಕವಾಗಿರುತ್ತವೆ ಎನ್ನುವ ಮಾತಿದೆ. ಹಾಗೆಯೇ ಈ ಬೆಕ್ಕು ಕೂಡ ನಾಗರಹಾವನ್ನು ತನ್ನ ಮಾಲೀಕನ ಮನೆಯೊಳಗೆ ಬರದಂತೆ ತಡೆದಿದ್ದು, ಸುಮಾರು ಮೂವತ್ತು ನಿಮಿಷಗಳ ಕಾಲ ಕಾವಲುಗಾರನಂತೆ ನೋಡಿಕೊಂಡಿದೆ.
ಒಡಿಶಾದ ಭುವನೇಶ್ವರದಲ್ಲಿ ಈ ಸಂಗತಿ ನಡೆದಿದ್ದು, ಮುದ್ದಾದ ಬೆಕ್ಕಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಸಂಜೆ ಭುವನೇಶ್ವರದ ಸಂಪದ್ ಕುಮಾರ್ ಪರಿದಾ ಎಂಬುವರ ಮನೆ ಸಮೀಪ ಈ ಸಂಗತಿ ನಡೆದಿದೆ. ಸಂಪದ್ ಅವರ ಮನೆಯೊಳಗೆ ನಾಗರ ಹಾವು ಪ್ರವೇಶಿಸಲು ಮುಂದಾಗಿದ್ದು, ಆ ಹಾವನ್ನು ಒಳನುಗ್ಗದಂತೆ ತಡೆಯುವ ಬೆಕ್ಕಿನ ಪ್ರಯತ್ನದ ವಿಡಿಯೋ ವೈರಲ್ ಆಗಿದೆ.

ಏನನ್ನೋ ಕಂಡಂತೆ ಬೆಕ್ಕು ಓಡುತ್ತಿದ್ದುದನ್ನು ಕಂಡ ಮನೆಯವರು ಹೊರಗೆ ಬಂದು ನೋಡಿದಾಗ, ನಾಗರ ಹಾವು ಕಾಣಿಸಿದೆ. ನಾಗರ ಹಾವನ್ನು ನೋಡುತ್ತಿದ್ದಂತೆ ಪರಿದಾ ಮನೆಯವರು ಗಾಬರಿಯಾಗಿ, ಹಾವು ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಹಾವು ಮನೆಯೊಳಗೆ ಪ್ರವೇಶಿಸಲು ಸುಮಾರು ಬಾರಿ ಪ್ರಯತ್ನಿಸಿದೆ. ಆದರೆ ಇದಕ್ಕೆ ಎಡೆಮಾಡಿಕೊಡದ ಬೆಕ್ಕು ಕಾವಲಾಗಿ ನಿಂತಿದೆ. ಹಾವು ಬುಸುಗುಡುತ್ತಾ ಮುಂದಕ್ಕೆ ಬರಲು ಪ್ರಯತ್ನಿಸುತ್ತಿದ್ದರೂ ಅದನ್ನು ತಡೆದಿದೆ.
ಅರ್ಧ ಗಂಟೆ ನಂತರ ಸಹಾಯವಾಣಿ ಸ್ವಯಂ ಸೇವಕರು ಹಾವನ್ನು ಹಿಡಿದಿದ್ದಾರೆ. "ನಾನು ಇಲ್ಲಿಗೆ ಬರುವವರೆಗೂ ಹಾವನ್ನು ಒಳಹೋಗದಂತೆ ಬೆಕ್ಕು ಕಾವಲು ನಿಂತಿದೆ" ಎಂದು ಸ್ವಯಂಸೇವಕ ಅರುಣ್ ಹೇಳಿದ್ದಾರೆ.
"ಬೆಕ್ಕಿಗೆ ಈಗ ಒಂದೂವರೆ ವರ್ಷ. ನಮ್ಮ ಮನೆಯ ಸದಸ್ಯನೇ ಆಗಿಬಿಟ್ಟಿದೆ. ಇದು ಹಾವು ಮನೆಯೊಳಗೆ ಹೋಗದಂತೆ ತಡೆದಿದೆ" ಎಂದು ಪರೀದಾ ಸಂತಸ ವ್ಯಕ್ತಪಡಿಸಿದ್ದಾರೆ.
-
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Pawan Kalyan: ಪವನ್ ಕಲ್ಯಾಣ್ ವಿರುದ್ಧ ಕಾಮಿಡಿ ವಿಡಿಯೋ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಬಂಧನ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications