ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: 441ಅನ್ನು 4ರಿಂದ ಭಾಗಿಸಿ ಉತ್ತರ 1.2 ಎಂದ ಶಿಕ್ಷಕಿಗೆ ಒಂದು ಲಕ್ಷ ಸಂಬಳ

|
Google Oneindia Kannada News

ಬಾಲಘಾಟ್ ಆಗಸ್ಟ್ 27: ಅಧ್ಯಯನದಲ್ಲಿ ದುರ್ಬಲವಾಗಿರುವ ಮಕ್ಕಳನ್ನು ಆಡುಮಾತಿನಲ್ಲಿ ಕತ್ತೆ ಎಂದು ಕರೆಯಲಾಗುತ್ತದೆ. ಆದರೆ ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಗಣಿತದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದಾಗ, ಅವರನ್ನು ಏನೆಂದು ಕರೆಯುತ್ತಾರೆ? ಇದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರಲ್ಲ ಮುಖ್ಯೋಪಾಧ್ಯಾಯರ ಸ್ಥಿತಿ. ಜಿಲ್ಲಾಧಿಕಾರಿ ಇಲ್ಲಿಗೆ ದಿಢೀರ್‌ ಪರಿಶೀಲನೆ ನಡೆಸಿದಾಗ 441ಅನ್ನು 4ರಿಂದ ಭಾಗಿಸಲು ಮುಖ್ಯಶಿಕ್ಷಕರಿಗೆ ಆಗಲಿಲ್ಲ. ಅದರ ನಂತರ ಏನಾಯಿತು, ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಇದು ಮಧ್ಯಪ್ರದೇಶ ಬಾಲಘಾಟ್ ಜಿಲ್ಲೆಯ ಪ್ರಾಥಮಿಕ ಶಾಲೆಯ ಚಿತ್ರಣ. ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ ಅವರು ಪರಿಶೀಲನೆಗೆ ಶಾಲೆಗೆ ತೆರಳಿದ್ದರು. ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ ಮತ್ತು ಶಿಕ್ಷಕರು ಹೇಗೆ ಕಲಿಸುತ್ತಿದ್ದಾರೆ ಎಂದು ತಿಳಿಯಲು ತರಗತಿಯಲ್ಲಿ ಕುಳಿತುಕೊಂಡರು. ಮೊದಲಿಗೆ ಕಪ್ಪು ಹಲಗೆಯ ಮೇಲೆಯೇ 441 ಸಂಖ್ಯೆಯನ್ನು 4 ರಿಂದ ಭಾಗಿಸಲು ಮಕ್ಕಳನ್ನು ಕೇಳಿದರು. ಈ ಗಣಿತ ಸಮಸ್ಯೆಯನ್ನು ಪರಿಹರಿಸಲು ವಿದ್ಯಾರ್ಥಿಗೆ ಅವಕಾಶ ನೀಡಲಾಯಿತು. ಅವರು ಸಂಖ್ಯೆಗಳನ್ನು ಮಾತ್ರ ಬರೆಯಬಲ್ಲರಾಗಿದ್ದರು. ಆದರೆ ಅವರಿಂದ ಭಾಗಿಸಲಾಗಲಿಲ್ಲ. ಈ ವೇಳೆ ಶಾಲೆಯ ಶಿಕ್ಷಕಿ ಸೋನಾ ಧುರ್ವೆ ಕೂಡ ಉಪಸ್ಥಿತರಿದ್ದರು. ಲಾಕ್‌ಡೌನ್‌ನಿಂದಾಗಿ ಅನೇಕ ಮಕ್ಕಳು ಗುಣಾಕಾರವನ್ನು ಮರೆತಿದ್ದಾರೆ, ಅವರು ಇನ್ನೂ ಅವರಿಗೆ ಕಲಿಸುತ್ತಿದ್ದಾರೆ ಎಂದು ಶಿಕ್ಷಕಿ ಹೇಳಿದರು.

441 ಸಂಖ್ಯೆಯನ್ನು 4 ರಿಂದ ಭಾಗಿಸಲು ಸಾಧ್ಯವಾಗದ ಶಿಕ್ಷಕಿ

441 ಸಂಖ್ಯೆಯನ್ನು 4 ರಿಂದ ಭಾಗಿಸಲು ಸಾಧ್ಯವಾಗದ ಶಿಕ್ಷಕಿ

ಆಗ ಮೇಡಂ, ದಯವಿಟ್ಟು ಈ ಗಣಿತದ ಸಮಸ್ಯೆಯನ್ನು ಪರಿಹರಿಸಿ ಮಕ್ಕಳಿಗೆ ತಿಳಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು. ಬಹಳ ಉತ್ಸಾಹದಿಂದ ಮೇಡಂ ಜೋರು ಧ್ವನಿಯಲ್ಲಿ ಓದತೊಡಗಿದರು. 441 ಸಂಖ್ಯೆಯನ್ನು 4 ರಿಂದ ಭಾಗಿಸಿದ ನಂತರ, ಮೇಡಂ ಅವರ ಉತ್ತರ 1.2 ಆಗಿತ್ತು. ಇದನ್ನು ನೋಡಿದ ಜಿಲ್ಲಾಧಿಕಾರಿ ತಲೆ ಅಲ್ಲಾಡಿಸಿದರು. ಅವರು ಮತ್ತೆ ಪ್ರಶ್ನೆಯನ್ನು ಪರಿಹರಿಸಲು ಕೇಳಿದಾಗ, ಅವರ ಉತ್ತರ 11.2 ಕ್ಕೆ ಬಂತು.

ಮೇಡಂ ಗಣಿತದಲ್ಲಿ ವೀಕ್

ಮೇಡಂ ಗಣಿತದಲ್ಲಿ ವೀಕ್

ಸಾಮಾನ್ಯ ಗಣಿತಶಾಸ್ತ್ರದ ಮುಖ್ಯೋಪಾಧ್ಯಾಯರಾದ ಸೋನಾ ಧುರ್ವೆ ಅವರಿಂದ 'ಭಾಗ' ಆಗದಿದ್ದಕ್ಕಾಗಿ ಜಿಲ್ಲಾಧಿಕಾರಿ ಕೋಪಗೊಂಡರು. ಅವರು ಹೇಳಿದರು 'ಮೇಡಂ, ಸಾಮಾನ್ಯ ಗಣಿತ ನಿಮ್ಮಿಂದ ಭಾಗಿಸಲು ಆಗುತ್ತಿಲ್ಲ. ಹೀಗಿರುವಾಗ ಅದನ್ನು ಮಕ್ಕಳು ಹೇಗೆ ಮಾಡುತ್ತಾರೆ? ಲಾಕ್‌ಡೌನ್‌ನಿಂದ ಮಕ್ಕಳು ಭಾಗವಹಿಸಲು ಮರೆತಿದ್ದಾರೆ ಎಂದು ಪದೇ ಪದೇ ಹೇಳುತ್ತೀರಿ. ನಿಮ್ಮಿಂದಾಗದು ಮಕ್ಕಳು ಹೇಗೆ ಮಾಡುತ್ತಾರೆ' ಎಂದು ತರಾಟೆ ತೆಗೆದುಕೊಂಡರು. ಕೂಡಲೇ ಮೇಡಂ ಅವರ ವೇತನ ಹೆಚ್ಚಳವನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಮುಖ್ಯೋಪಾಧ್ಯಾಯರ ಹುದ್ದೆಯಿಂದಲೂ ಅವರನ್ನು ತೆಗೆದುಹಾಕಲಾಯಿತು.

ಶಿಕ್ಷಣದ ಮಟ್ಟವನ್ನು ನೋಡಿ ಗದರಿದ ಜಿಲ್ಲಾಧಿಕಾರಿ

ಶಿಕ್ಷಣದ ಮಟ್ಟವನ್ನು ನೋಡಿ ಗದರಿದ ಜಿಲ್ಲಾಧಿಕಾರಿ

ಈ ಶಾಲೆಯು ಬಾಲಘಾಟ್‌ನ ಬಿರ್ಸಾ ಅಭಿವೃದ್ಧಿ ಬ್ಲಾಕ್ ಅಡಿಯಲ್ಲಿ ಬರುತ್ತದೆ. ಮೊಹಗಾಂವ್ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 98 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ. ಒಂದೆಡೆ ಮಧ್ಯಪ್ರದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಲು ಶಿಕ್ಷಕರಿಲ್ಲ. ನೂರಾರು ವಿದ್ಯಾರ್ಥಿಗಳಿರುವ ಶಾಲೆಗಳು 1-2 ಶಿಕ್ಷಕರ ಆಧಾರದ ಮೇಲೆ ನಡೆಯುತ್ತಿವೆ. ಹೀಗಾಗಿ ಇಲ್ಲಿ ನಾಲ್ವರು ಶಿಕ್ಷಕರಿದ್ದು, ಶಿಕ್ಷಣದ ಮಟ್ಟವನ್ನು ಜಿಲ್ಲಾಧಿಕಾರಿಯೂ ಊಹಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ಓದುತ್ತಾರೆ ಮತ್ತು ಬೆಳೆಯುತ್ತಾರೆ?

ನಗರದಿಂದ ಹಳ್ಳಿಗೆ ಎಲ್ಲರೂ ಓದಬೇಕು, ಎಲ್ಲರೂ ಬೆಳೆಯಬೇಕು ಎಂಬುದು ಸರ್ಕಾರದ ಘೋಷವಾಕ್ಯ. ಸರ್ವಶಿಕ್ಷಾ ಅಭಿಯಾನ ಸೇರಿದಂತೆ ಶಿಕ್ಷಕರ ದಕ್ಷತೆಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗಣಿತದ ಸಮಸ್ಯೆಗಳನ್ನು ಸ್ವತಃ ಪರಿಹರಿಸಲು ಸಾಧ್ಯವಾಗದ ಅಂತಹ ಶಿಕ್ಷಕರಿಗೆ ವಾರ್ಷಿಕವಾಗಿ ಲಕ್ಷ ರೂ. ವೇತನವಿದೆ. ಇವರಿಂದ ಮಕ್ಕಳ ಭವಿಷ್ಯ ಎಷ್ಟು ಉಜ್ವಲವಾಗಿದೆ ಎನ್ನುವುದನ್ನು ಬಾಲಘಾಟ್‌ದಂತಹ ಶಾಲೆಗಳ ಚಿತ್ರಣ ಹೇಳುತ್ತಿದೆ. ಮಕ್ಕಳು ಎಷ್ಟರ ಮಟ್ಟಿಗೆ ಪ್ರಗತಿ ಹೊಂದುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.

English summary
Sona Dhurve the headmaster of a primary school in Madhya Pradesh's Balaghat district, has been reprimanded by District Collector Dr. Girish Kumar Mishra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X