ಮುಖ್ಯಮಂತ್ರಿ ಮಗ ಬರೋಬ್ಬರಿ 660 ಕೋಟಿ ರೂಪಾಯಿ ಒಡೆಯ!
ಚಿಂದ್ವಾರಾ, ಏಪ್ರಿಲ್ 10: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಮಂಗಳವಾರ ಚಿಂದ್ವಾರಾ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರ ಚರ ಮತ್ತು ಸ್ಥಿರ ಆಸ್ತಿಯ ಒಟ್ಟು ಮೌಲ್ಯ 660 ಕೋಟಿ ರೂಪಾಯಿ.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ನಾಮಪತ್ರದೊಂದಿಗೆ ನಕುಲ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖಿಸಿರುವ ಆಸ್ತಿ ವಿವರಗಳು ಬೆರಗು ಮೂಡಿಸುತ್ತದೆ. ಏಕೆಂದರೆ ಅವರ ಆಸ್ತಿ ಅವರ ಪೊಷಕರ ಆಸ್ತಿಗಿಂತ ಐದು ಪಟ್ಟು ಹೆಚ್ಚು. ಮುಖ್ಯಮಂತ್ರಿ ಕಮಲ್ ನಾಥ್ ಅವರ ಅಫಿಡವಿಟ್ ಪ್ರಕಾರ ಅವರ ಬಳಿ ಇರುವ ಆಸ್ತಿ 124 ಕೋಟಿ ರೂಪಾಯಿ.
ಉದ್ಯಮಿಯಾಗಿದ್ದ ನಕುಲ್ ನಾಥ್ 615.93 ಕೋಟಿ ರೂಪಾಯಿಗೂ ಹೆಚ್ಚು ಚರ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಪ್ರಿಯಾ ನಾಥ್ ಅವರ ಚರ ಆಸ್ತಿ ಅಫಿಡವಿಟ್ ಪ್ರಕಾರ 2.30 ಕೋಟಿ ರೂಪಾಯಿ.

ನಕುಲ್ ಅವರ ಬಳಿ 41.77 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಇದೆ. ಅವರ ಪತ್ನಿ ಪ್ರಿಯಾ ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ.
ಅಫಿಡವಿಟ್ನಲ್ಲಿ ಉಲ್ಲೇಖಿಸಿರುವಂತೆ ನಕುಲ್ ಈ ಆಸ್ತಿಗಳನ್ನು ತಮ್ಮದೇ ಹೆಸರಿನಲ್ಲಿ, ಜಂಟಿ ಹೆಸರು ಮತ್ತು ಕುಟುಂಬದ ನಿಯಂತ್ರಣವಿರುವ ಕಂಪೆನಿ ಹಾಗೂ ಟ್ರಸ್ಟ್ಗಳ ಹೆಸರಿನಲ್ಲಿ ಹೊಂದಿದ್ದಾರೆ. ನಕುಲ್ ಮತ್ತು ಪ್ರಿಯಾ ಅವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲ.
896.669 ಗ್ರಾಮ್ ಚಿನ್ನ, 7.630 ಕೆಜಿ ಬೆಳ್ಳಿ, 147.58 ಕ್ಯಾರಟ್ ವಜ್ರ ಮತ್ತು 78.45 ಲಕ್ಷ ಮೌಲ್ಯದ ಸ್ಟೋನ್ ಆಭರಣ ನಕುಲ್ ಅವರಲ್ಲಿದೆ. ಅವರ ಪತ್ನಿ ಬಳಿ 270.322 ಗ್ರಾಂ ಚಿನ್ನ, 161.84 ಕ್ಯಾರಟ್ ವಜ್ರ ಮತ್ತು 57.62 ಲಕ್ಷ ರೂ ಮೌಲ್ಯದ ಸ್ಟೋನ್ ಆಭರಣ ಇದೆ.
2017-18ನೇ ಸಾಲಿನಲ್ಲಿ ಸಲ್ಲಿಸಿದ ಆದಾಯ ತೆರಿಗೆ ವಿವರದ ಪ್ರಕಾರ ನಕುಲ್ ನಾಥ್ ತಮ್ಮ ವಾರ್ಷಿಕ ಆದಾಯವನ್ನು 2.76 ಕೋಟಿ ರೂ. ಮತ್ತು ಪತ್ನಿಯ ವಾರ್ಷಿಕ ಆದಾಯವನ್ನು 4.18 ಕೋಟಿ ರೂ. ಎಂದು ದಾಖಲಿಸಿದ್ದಾರೆ.
ವಿವಿಧೆಡೆ ಬ್ಯಾಂಕ್ ಖಾತೆಗಳಲ್ಲಿ ಅವರು ಠೇವಣಿ ಇರಿಸಿದ್ದಾರೆ. ದುಬೈ ಮತ್ತು ಶಾರ್ಜಾಗಳಲ್ಲಿ ಇರುವ ಐಎಂಟಿ ಸಂಸ್ಥೆ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ.
ಚಿಂದ್ವಾರಾ ಜಿಲ್ಲೆಯಲ್ಲಿ ನಕುಲ್ ಮತ್ತು ಅವರ ಸಹೋದರ ಜಂಟಿಯಾಗಿ 7.82 ಎಕರೆ ಭೂಮಿ ಹೊಂದಿದ್ದಾರೆ.
ಸ್ವಂತ ವೆಬ್ಸೈಟ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಗೂಗಲ್ ಪ್ಲಸ್ ಮತ್ತು ಬ್ಲಾಗ್ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ನಕುಲ್ ಚುನಾವಣೆಗೆ ಇಳಿದಿದ್ದಾರೆ. ಚಿಂದ್ವಾರಾ ಲೋಕಸಭೆ ಕ್ಷೇತ್ರದಲ್ಲಿ ಅವರು ಬುಡಕಟ್ಟು ಮುಖಂಡ ಮತ್ತು ಮಾಜಿ ಶಾಸಕ ಬಿಜೆಪಿಯ ನಥನ್ ಶಾ ಎದುರು ಸ್ಪರ್ಧಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಕುಲ್ ಅಮೆರಿಕದ ಬಾಸ್ಟನ್ನಲ್ಲಿರುವ ಬೇ ಸ್ಟೇಟ್ ಕಾಲೇಜ್ನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications