ಬೈಕ್ ಸವಾರರನ್ನು ರಕ್ಷಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ
ಬೆಂಗಳೂರು, ಜು.3: ಬೈಕ್ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದಿದ್ದ ಬೈಕ್ ಸವಾರನನ್ನು ಕಾಪಾಡಲು ಹೋಗಿ ಲಾರಿ ಚಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ನೈಸ್ರೋಡ್ ಬಳಿ ನಡೆದಿದೆ.
ಮಂಗಳವಾರ ನೈಸ್ರೋಡ್ನಲ್ಲಿ ಅಪಘಾತ ಒಂದು ಸಂಭವಿಸಿದೆ, ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ರಸ್ತೆಯ ಮೇಲೆ ಬಿದಿದ್ದರು, ಗಂಭೀರವಾಗಿ ಗಾಯಗೊಂಡದ್ದರು, ಅದನ್ನು ಕಂಡ ಲಾರಿ ಚಾಲಕ ರಾಘವೇಂದ್ರ(29) ಲಾರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಅವರನ್ನು ಮೇಲೆತ್ತಲು ರಸ್ತೆ ದಾಟುತ್ತಿದ್ದರು

ಸಂದರ್ಭದಲ್ಲಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.












Click it and Unblock the Notifications