Year Ender 2025: ನಿರೀಕ್ಷೆಯಷ್ಟು ಆಗದ ನಮ್ಮ ಮೆಟ್ರೋ ವಿಸ್ತರಣೆ, BMRCL ಸಾಧಿಸಿದ್ದೆಷ್ಟು?
Bengaluru Metro: ಬೆಂಗಳೂರಿನ ಸುಮಾರು 10 ಲಕ್ಷ ಮಂದಿ ಪ್ರಯಾಣಿಕರು ನಿತ್ಯ ನಮ್ಮ ಮೆಟ್ರೋ ಸಾರಿಗೆ ಅವಲಂಬಿಸಿದ್ದಾರೆ. ಅಷ್ಟ ದಿಕ್ಕುಗಳಿಗೂ ವಿಸ್ತರಣೆಗೆ ಉದ್ದೇಶಿಸಲಾಗಿರುವ ಮೆಟ್ರೋ ಜಾಲ ಈ 2025ರಲ್ಲಿ ನಿರೀಕ್ಷೆಯಷ್ಟು ವಿಸ್ತರಣೆ ಆಗಲಿಲ್ಲ. ಹಾಗಾದರೆ ಈ ವರ್ಷ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಜಾಲ ವಿಸ್ತರಣೆಯಲ್ಲಿ ಸಾಧಿಸಿದ್ದೆಷ್ಟು? ಉದ್ದೇಶಿತ ಮಾರ್ಗಗಳು ಯಾವುವು, ತೆರೆಯಲು ಸಜ್ಜಾಗಿರುವ ಮಾರ್ಗಗಳು ಯಾವುವು?
ಹೊಸ ಮಾರ್ಗಗಳ ಅನುಮೋದನೆ ಬೆನ್ನಲ್ಲೆ, ಡಿಪಿಆರ್, ಕಾರ್ಯಸಾಧ್ಯತಾ ವರದಿ ಕೆಲಸಗಳಿಗೆ ನಮ್ಮ ಮೆಟ್ರೋ ವೇಗ ನೀಡಿದೆ. 2026ರಲ್ಲಿ ಒಟ್ಟು 176 ಕಿಲೋ ಮೀಟರ್ ವರೆಗೆ ಮೆಟ್ರೋ ಜಾಲ ವಿಸ್ತರಿಸುವ ಗುರಿ ಹೊಂದಲಾಗಿದೆ.

2041ರ ಹೊತ್ತಿಗೆ 314 ಕಿಲೋ ಮೀಟರ್ ಗುರಿ ಇಟ್ಟುಕೊಳ್ಳಲಾಗಿದೆ. ಹಾಗಾದರೆ ಗುರಿಯಲ್ಲಿ ಈವರೆಗೆ ಎಷ್ಟು ಸಾಧನೆ ಆಗಿದೆ ಎಂದು ನೋಡಿದರೆ ನಿರೀಕ್ಷೆಯಷ್ಟು ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆ ಆಗಿಲ್ಲ. ಎರಡು ವರ್ಷಗಳ ಹಿಂದೆಯೇ ತೆರೆಯಬೇಕಿದ್ದ 19.4 ಕಿಲೋ ಮೀಟರ್ ಉದ್ದದ ಬೊಮ್ಮಸಂದ್ರ-ಆರ್.ವಿ.ರಸ್ತೆ ಹಳದಿ ಮೆಟ್ರೋ ಮಾರ್ಗವು ಈ ವರ್ಷ ಆಗಸ್ಟ್ 10ರಂದು ಲೋಕಾರ್ಪಣೆಗೊಂಡಿತು. ಇದರ ಹೊರತು ಮತ್ತಾವುದೇ ಮಾರ್ಗ ವಿಸ್ತರಣೆ ಆಗಿಲ್ಲ. ಈ ವಿಚಾರದಲ್ಲಿ ಬಿಎಂಆರ್ಸಿಎಲ್ ತೀರಾ ಕಡಿಮೆ ಸಾಧನೆ ಮಾಡಿದೆ ಎನ್ನಬಹುದು.
ಹಸಿರು ಮಾರ್ಗ, ನೇರಳೆ ಮಾರ್ಗ ವಿಸ್ತರಣೆ
ಕಳೆದ ನವೆಂಬರ್ ತಿಂಗಳಲ್ಲಿ ಹಸಿರು ಮಾರ್ಗದ ಕೊನೆ ನಿಲ್ದಾಣವಾಗಿದ್ದ ನಾಗಸಂದ್ರದಿಂದ ಮಾದವರವರೆಗೆ 3.5 ಕಿಲೋ ಮೀಟರ್ ವಿಸ್ತರಣೆ ಆಗಿತ್ತು. ಅದಕ್ಕೂ ಹಿಂದಿನ ವರ್ಷ 2023ರಲ್ಲಿ ಮೆಟ್ರೋ ನೇರಳೆ ಮಾರ್ಗವು ಚಲಘಟ್ಟ, ವೈಟ್ಫಿಲ್ಡ್ ವರೆಗೆ ವಿಸ್ತರಣೆ ಆಗಿತ್ತು. ಈ ವರ್ಷ ಬಾಕಿ ಮಾರ್ಗವನ್ನೆ ವಿಸ್ತರಣೆ ಮಾಡಿದೆ. ಈ ವಿಳಂಬ ನೀತಿ ಅಥವಾ ಕಾಮಗಾರಿಗೆ ಎದುರಾಗುವ ಸವಾಲುಗಳ ನಿವಾರಣೆ ತಡವಾದಲ್ಲಿ 2026ರ ಜಾಲ ವಿಸ್ತರಣೆ ಮುಟ್ಟುವುದು ಕಷ್ಟವಾಗಲಿದೆ.
ಮೆಟ್ರೋ ಗುಲಾಬಿ ಮಾರ್ಗ ಓಪನ್..
ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಇರುವ ನಮ್ಮ ಮೆಟ್ರೋ ಪಿಂಕ್ ಲೈನ್ 2026 ರಲ್ಲಿ ಎರಡು ಹಂತಗಳಲ್ಲಿ ತೆರೆಯಲು ಬಿಎಂಆರ್ಸಿಎಲ್ ಸಜ್ಜಾಗಿದೆ. 2026 ರ ಮೇ ತಿಂಗಳಲ್ಲಿ ವೇಳೆಗೆ ಎತ್ತರದ ತಾವರೆಕೆರೆ-ಕಾಲೇನ ಅಗ್ರಹಾರವರೆಗಿನ ಲೈನ್ ಅನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಿದೆ. ನಂತರ ಡಿಸೆಂಬರ್ 2026 ರ ಹೊತ್ತಿಗೆ ಈ 21.5 ಕಿಲೋ ಮೀಟರ್ನ ಈ ಗುಲಾಬಿ ಮಾರ್ಗವು ಪೂರ್ಣವಾಗಿ ತೆರೆಯುವ ನಿರೀಕ್ಷೆ ಇದೆ. ರೈಲುಗಳ ಪೂರೈಕೆ ವಿಳಂಬವಾದರೆ ಹೊಸ ಮಾರ್ಗ ತೆರೆಯುವುದು ನಿಧಾನವಾಗಬಹುದು. ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಟಿಟಾಘರ್ನಿಂದ ತಿಂಗಳಿಗೆ ಒಂದರಂತೆ ಹೊಸ ರೈಲು ಬೋಗಿಗಳ ಸೆಟ್ ಬೆಂಗಳೂರಿಗೆ ರವಾನಿಸುವ ಬಗ್ಗೆ ಕಂಪನಿ ಈಗಾಗಲೇ ಭರವಸೆ ನೀಡಿದೆ.
-
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications