ಯಕ್ಷಸಂಸ್ಕಾರ: ಯಕ್ಷಗಾನ ಪ್ರಶಿಕ್ಷಣದ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು, ನ 12: ಯಕ್ಷಗಾನಕ್ಕೆ ವೇಷ ಮತ್ತು ಬಣ್ಣಗಾರಿಕೆಯ ಶಾಸ್ತ್ರವಿದೆ, ಅದರ ಚೌಕಟ್ಟನ್ನು ಮೀರಿ ಹೋಗಬಾರದು. ತೆಂಕು - ಬಡಗನ್ನು ಅದರ ಶೈಲಿಯ ವ್ಯತ್ಯಾಸದಿಂದ ಭೇದ ಮಾಡಿದೆ. ಅದನ್ನು ಪ್ರತ್ಯೇಕವಾಗಿಯೇ ಕಲಿಯಬೇಕು ಎಂಬು ಹಿರಿಯ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟರಮಣ ಭಟ್ಟರು ಹೇಳಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ "ಯಕ್ಷಸಂಸ್ಕಾರ" ಕಾರ್ಯಕ್ರಮದ ತೆಂಕುತಿಟ್ಟು ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಪಾತಾಳ ವೆಂಕಟರಮಣ ಭಟ್ಟರು, ಕಲಿಯಲು ನಮ್ಮಕಾಲದಲ್ಲಿ ವ್ಯವಸ್ಥೆ ಇರಲಿಲ್ಲ. ಕಲಾವಿದರ ಸೇವೆ ಮಾಡಿ ಬೈಸಿಕೊಳ್ಳುತ್ತ ಅವರ ಚೀಲ ಹೊತ್ತು ಓಡಾಡಿ ಕಲಿಯಬೇಕಿತ್ತು ಎಂದು ಹೇಳಿದ್ದಾರೆ.

ಇಂದಿನ ಹೆಜ್ಜೆಗಳು ಸುಧಾರಿಸಿದೆ. ಅನ್ಯಮತದವರು ದೀಪ ಆರಿಸುವ ಸಂಸ್ಕೃತಿಯವರು ನಾವು ದೀಪ ಹಚ್ಚಿ ಉದ್ಘಾಟಿಸುತ್ತೇವೆ. ದೀಪ ಶಕ್ತಿಸ್ವರೂಪ, ಕಲೆಯೂ ಹಾಗೇ ಜಾಜ್ವಲ್ಯಮಾನವಾಗಬೇಕು. ಈ ನಿಟ್ಟಿನಲ್ಲಿ ಈ ಶ್ರೇಷ್ಠ ಕಲೆಯನ್ನು ಕಲಿಯುವ ಅವಕಾಶಮಾಡಿಕೊಡುವ ಶಿಬಿರವನ್ನು ವ್ಯವಸ್ಥೆಗೊಳಿದ್ದು ಕಾಲೋಚಿತವಾಗಿದೆ ಎಂದು ವೆಂಕಟರಮಣ ಭಟ್ಟರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬಡಗುತಿಟ್ಟಿನ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಕೆರೆಮನೆ ಶಿವಾನಂದ ಹೆಗಡೆ, ಭರತನೃತ್ಯ ಇತ್ಯಾದಿ ಕಲೆಗಳು ಬೆಳೆದ ತೆರದಲ್ಲಿ ಯಕ್ಷಗಾನ ವ್ಯಾಪಿಸಬೇಕು. ಕ್ಷಿಪ್ರಕಾಲದಲ್ಲಿ ಸ್ಟಾರ್ ಮಟ್ಟದ ಕಲಾವಿದ ತಯಾರಾಗಬೇಕು ಎಂಬ ಧೋರಣೆ ಸರಿಯಲ್ಲ ಎಂದು ಹೇಳಿದ್ದಾರೆ.
ಬಡಗುತಿಟ್ಟಿನ ಪ್ರಶಿಕ್ಷಕರಾದ ಬಂದ ತೋಟಿಮನೆ ಗಣಪತಿಯವರು ಮಾತನಾಡಿ ಯಕ್ಷಗಾನವೆಂದರೆ ಕುಣಿತವಷ್ಟೇ ಅಲ್ಲ. ಅದಕ್ಕೆ ವೇಷಧಾರಿಗಳು ಬೇಕಾಗಿಲ್ಲ. ಪಾತ್ರಧಾರಿಗಳಾಗಬೇಕಾಗಿದೆ. ತರಬೇತಿಕೇಂದ್ರಗಳು ಸಾಕಷ್ಟಿವೆ ಆದರೆ ಅವೆಲ್ಲ ಧಿಡೀರ್ ಕಲಾವಿದರನ್ನು ನಿರ್ಮಿಸುತ್ತವೆ. ಪಾತ್ರಧಾರಿಗಳನ್ನು ಹುಟ್ಟು ಹಾಕುತ್ತಿಲ್ಲ.ಸರಿಯಾದ ವಿಮರ್ಶಕರು ಹುಟ್ಟಬೇಕು ಎಂದು ಹೇಳಿದ್ದಾರೆ.
ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಗಿರಿಧರ್ ಕಜೆ ಮಾತನಾಡಿ, ಕಲೆಯನ್ನು ನೈಜ ಮೂಲರೂಪದಲ್ಲಿ ತೋರಿಸಬೇಕು. ಈ ನಿಟ್ಟಿನಲ್ಲಿ ಈ ಯಕ್ಷಸಂಸ್ಕಾರ ಕೇಂದ್ರ ಧ್ಯೇಯಯುತವಾಗಿದೆ. ಪಾರ್ಥೇನಿಯಂ ಕಳೆ ಸ್ವಯಂ ಬೇಗ ಬೆಳೆದು ಹರಡುತ್ತದೆ. ತುಳಸಿ ಬಿಲ್ವಗಳನ್ನು ಕಷ್ಟದಿಂದ ಬೆಳೆಸಬೇಕಾಗುತ್ತದೆ. ಹಾಗೆಯೇ ಒಂದು ಸದ್ವಿಚಾರ ಹರಡಲು ತುಂಬ ಪ್ರಯತ್ನ ಬೇಕಾಗುತ್ತದೆ. ಒಳ್ಳೆಯ ಕಲಾರತ್ನಗಳನ್ನು ಉತ್ಪಾದಿಸುವುದು ಈ ಕೇಂದ್ರದ ಉದ್ದೇಶ ಎಂದು ಹೇಳಿದರು.
ಪ್ರತೀ ಭಾನುವಾರ ಬೆಳಗ್ಗೆಯಿಂದ (ನ. 19ರಿಂದ) ಶಿಬಿರ ನಡೆಯಲಿದ್ದು, ತೆಂಕುತಿಟ್ಟು ಪ್ರಶಿಕ್ಷಕರಾಗಿ ಲಕ್ಷ್ಮೀನಾರಾಯಣ ಕಲ್ಚಾರ್, ಈಶ್ವರಚಂದ್ರ ನಿಡ್ಲೆ, ರವಿಶಂಕರ ಬಡೆಕ್ಕಿಲ. ಬಡಗುತಿಟ್ಟು ಪ್ರಶಿಕ್ಷಕರಾಗಿ ತೋಟಿಮನೆ ಗಣಪತಿ ಹೆಗಡೆ, ಪ್ರಸನ್ನಕುಮಾರ್, ಶ್ರೀ ಮಂಜು ಯಕ್ಷಗಾನ ತರಬೇತಿ ನೀಡಲಿದ್ದಾರೆ. ಯಕ್ಷಗಾನ ಕಲಿಯಲು ಆಸಕ್ತಿ ಇರುವವರು ಹವ್ಯಕ ಮಹಾಸಭೆಯನ್ನು ಸಂಪರ್ಕಿಸಬಹುದಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications