Wipro Wage Hike: ಟಿಸಿಎಸ್ ಬಳಿಕ ನೌಕರರ ವೇತನ ಹೆಚ್ಚಳದ ಅಪ್ಡೇಟ್ ಕೊಟ್ಟ ವಿಪ್ರೋ
ಬೆಂಗಳೂರು, ಏಪ್ರಿಲ್ 17: ಖಾಸಗಿ ಉದ್ಯೋಗ ವಲಯದಲ್ಲಿ ಐಟಿ, ಕಾರ್ಪೋರೇಟ್ ಕಂಪನಿಗಳ ನೌಕರರು ಸದ್ಯ ವೇತನ ಹೆಚ್ಚಳ ಘೋಷಣೆ ನಿರೀಕ್ಷೆಯಲ್ಲಿದ್ದಾರೆ. ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸ್ಲ್ಟೆನ್ಸಿ ಸರ್ವೀಸಸ್ (TCS), ವಿಪ್ರೋ ಕಂಪನಿಗಳ ಉದ್ಯೋಗಿಗಳಿಗೆ ಸದರಿ ವಾರ್ಷಿಕ ವೇತನ ಹೆಚ್ಚಳ ತಡವಾಗಬಹುದು ಎನ್ನಲಾಗುತ್ತಿದೆ. ಸದ್ಯ ವಿಪ್ರೋ ಕಂಪನಿಯು ಟಿಸಿಎಸ್ ನಂತರ ವೇತನ ಹೆಚ್ಚಳ ಬಗ್ಗೆ ಅಪ್ಡೇಟ್ ನೀಡಿದೆ.
ಐಟಿ ಕಂಪನಿಗಳು ಈ ವರ್ಷ ಹಣದುಬ್ಬರ, ವಿದೇಶಿ ಸುಂಕ ನೀತಿ ಹಾಗೂ ಇನ್ನಿತರ ಕಾರಣಗಳಿಂದ ವೇತನ ಹೆಚ್ಚಳದಲ್ಲಿ ವಿವೇಚನಾಯುತವಾಗಿ ನಡೆದುಕೊಳ್ಳುತ್ತಿವೆ. ವಿಪ್ರೋ ಪ್ರಸಕ್ತ ಹಣಕಾಸು ವರ್ಷ (FY26) 2026ರಲ್ಲಿ ನೌಕರರ ವೇತನ ಹೆಚ್ಚಳವನ್ನು ಕೊನೆಯ ದಿನಾಂಕದ ವೇಳೆಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ವ್ಯವಹಾರ ಸ್ನೇಹಿ ವಾತಾವರಣ ನೋಡಿಕೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಪ್ರೋ ಕಂಪನಿಯು ಪ್ರತಿ ವರ್ಷದಂತೆ ಈ ವರ್ಷವು ವೇತನ ಹೆಚ್ಚಳ ಘೋಷಣೆಗೆ ಸಾಕಷ್ಟು ಸಮಯ ಇದೆ ಎಂದಿದೆ. ಸಾಮಾನ್ಯವಾಗಿ ಕಂಪನಿಗಳು ಮಾರ್ಚ್ 31ರ ಹಳೆಯ ಹಣಕಾಸು ವರ್ಷಾಂತ್ಯಕ್ಕೆ ಕಾರ್ಮಿಕರ ಅಪ್ರೈಸಲ್ ಪ್ರಕ್ರಿಯೆ ಪೂರ್ಣಗೊಳಿಸಿರುತ್ತವೆ. ಆದರೆ ವಿಪ್ರೋ ಕಳೆದ 2024-2025ರ ಸಾಲಿನಲ್ಲಿ ಸಹ ಸೆಪ್ಟಂಬರ್ನಿಂದ ಅಕ್ಟೋಬರ್ ನಲ್ಲಿ ವಾರ್ಷಿಕ ವೇತನ ಹೆಚ್ಚಿಸಿತ್ತು. ಈ ವರ್ಷವು ಇದೇ ತಿಂಗಳು ಸಮೀಪ ಬಂದಾಗ ಘೋಷಿಸುವುದಾಗಿ ತಿಳಿಸಿದೆ.
ವಿಪ್ರೋ ಮಾನವ ಸಂಪನ್ಮೂಲ ಮುಖ್ಯ ಅಧಿಕಾರಿ ಸೌರಭ್ ಗೋವಿಲ್ ಅವರು ಇತ್ತೀಚೆಗೆ ಇತ್ತೀಚೆಗೆ ಕಂಪನಿಯು ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಮಾಡಿದ ಸಾಧನೆ, ಫಲಿತಾಂಶಗಳನ್ನು ವಿವರಿಸಿದರು. ಈ ವೇಳೆ ವೇತನ ಹೆಚ್ಚಳಕ್ಕೆ ಸಮಯ ವಿರುದ್ದು, ದಿನಾಂಕ ಹತ್ತಿರ ಬಂದಾಗ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ. ಇದರಿಂದಾಗಿ ಈ ವರ್ಷ ವೇತನ ಏರಿಕೆ ಆಗುತ್ತಾ ಇಲ್ಲವಾ? ಎಂಬ ಆತಂಕ ನೌಕರರಲ್ಲಿದೆ.
ವಿದೇಶಿ ಸುಂಕ ನೀತಿ: ಕಂಪನಿಗಳ ವಹೀವಾಟು ಮೇಲೆ ಪ್ರಭಾವ?
ವಿಪ್ರೋ ಕಳೆದ ವರ್ಷ ಸೆಪ್ಟೆಂಬರ್ಗೂ ಮೊದಲೇ ವೇತನ ಹೆಚ್ಚಳ ಪ್ರಕಟಿಸಿತ್ತು. 2023 ರಲ್ಲಿ ಡಿಸೆಂಬರ್ ಹೊತ್ತಿಗೆ ವೇತನ ಜಾರಿಗೊಳಿಸಿತ್ತು. ಈ ವರ್ಷ ಅಮೆರಿಕಾ ತೆರಿಗೆ ನೀತಿ, ಹಣ್ಣದುಬ್ಬರ, ಆರ್ಥಿಕ ಹಿಂಜರಿಕೆ ಸೇರಿದಂತೆ ಮೊದಲಾದ ಆರ್ಥಿಕ ಕಳವಳ ಇರುವ ಕಾರಣ ವೇತನ ಹೆಚ್ಚಳ ಕುರಿತು ಕಂಪನಿಗಳು ಸೂಕ್ಷ್ಮವಾಗಿ ಗಮನಿಸಿ ನಿರ್ಧಾರ ಕೈಗೊಳ್ಳುತ್ತಿವೆ.
ಅಮೆರಿಕಾ ಸುಂಕ ನೀತಿಯು ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಮಾತ್ರವೇ ಪರಿಣಾಮ ಬೀರುತ್ತಿಲ್ಲ. ಕಂಪನಿಗಳ ವಹೀವಾಟು, ನೌಕರರ ಉದ್ಯೋಗ ವೇತನ ಮೇಲೂ ಪ್ರಭಾವ ಬೀರುತ್ತಿದೆ. ಹೀಗಾಗಿ ಐಟಿ ವಲಯಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಅನಿಶ್ಚಿತತೆ ಕಾಡುತ್ತಿದೆ. ಇದರಿಂದ ವೇತನ ಹೆಚ್ಚಳದಲ್ಲಿ ಒಂದಷ್ಟು ನಾಟಕೀಯ ಬೆಳವಣಿಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications