ಗಣೇಶನ ಹಬ್ಬದಲ್ಲಿ ಕನ್ನಡಿಗನಿಗೆ ಅವಮಾನವಾದಾಗ...
Recommended Video

ಬೆಂಗಳೂರು, ಆಗಸ್ಟ್ 31 : ಎಲ್ಲಿದ್ದೀರಿ ಯಶ್, ಜಗ್ಗೇಶ್, ಸಾರಾ ಗೋವಿಂದು, ಟಿಎ ನಾರಾಯಣ ಗೌಡ, ವಾಟಾಳ್ ನಾಗರಾಜ್, ಅಗ್ನಿ ಶ್ರೀಧರ್, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಮುಖ್ಯಮಂತ್ರಿ ಚಂದ್ರು, ಚಂಪಾ... ಎಲ್ಲಿದ್ದೀರಿ ಕನ್ನಡ ಹೋರಾಟಗಾರರೆ ಎಲ್ಲಿದ್ದೀರಿ?
ಹೀಗೆಂದು ಕನ್ನಡವನ್ನು ಹೃದಯದಲ್ಲಿ ತುಂಬಿಕೊಂಡಿರುವ, ಕನ್ನಡಕ್ಕೆ ಧಕ್ಕೆಯಾದಾಗ ಮಿಡಿಯುವ, ಕನ್ನಡಿಗರಿಗೆ ಅವಮಾನವಾದರೆ ಕುದಿಯುವ, ಅವಶ್ಯಕತೆ ಬಿದ್ದರೆ ಎಲ್ಲವನ್ನೂ ಬಿಟ್ಟು ಸಿಡಿದೇಳುವ ಕನ್ನಡಿಗರು ಕೇಳುತ್ತಿದ್ದಾರೆ. ಎಲ್ಲಿದ್ದೀರಿ ಸ್ವಾಮೀ ಎಚ್ಚರಗೊಳ್ಳಿ.

ಗಣೇಶನ ಹಬ್ಬ ಕರ್ನಾಟಕ್ಕೇ ದೊಡ್ಡ ಹಬ್ಬ. ಪ್ರತಿವರ್ಷ ಬೆಂಗಳೂರನಲ್ಲಿ ನಡೆಯುವ ಬೆಂಗಳೂರು ಗಣೇಶ ಉತ್ಸವಕ್ಕೆ ದೇಶದ ನಾನಾ ಕಡೆಗಳಿಂದ ನಾನಾ ಕಲಾವಿದರನ್ನು ಕರೆಯಿಸುತ್ತಾರೆ. ಅಲ್ಲಿಯೂ ಅಲ್ಪಸ್ವಲ್ಪ ಕನ್ನಡವಿರುತ್ತದೆನ್ನಿ. ಆದರೆ, ಕನ್ನಡ ಹಾಡು ಹಾಡಬೇಕು ಎಂಬುದು ಕನ್ನಡಿಗರ ಮೂಲಭೂತ ಹಕ್ಕು ಅಲ್ಲವೆ?
ಆದರೆ, ಬೆಂಗಳೂರು ಗಣೇಶ ಉತ್ಸವದಲ್ಲಿ ಆಗಿದ್ದೇನು? 'ಕನಿಷ್ಠ ಕಡೆಯ ಹಾಡನ್ನಾದರೂ ಕನ್ನಡ ಹಾಡು ಹಾಡಬೇಕು' ಎಂದು ಕನ್ನಡಿಗರೇ ಆದ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ವಿನಯ್ ಚ. ಶರ್ಮಾ ಎಂಬುವವರು ಕೋರಿದಾಗ, ಆಯೋಜಕರು ಅವರನ್ನು ಕಾರ್ಯಕ್ರಮದಲ್ಲಿ ಕೆಟ್ಟದಾಗಿ ನಡೆಸಿಕೊಂಡಿದ್ದಲ್ಲದೆ ಹೊರಗೆ ಕಳಿಸಿದ್ದಾರೆ.
ಇದೇನು ಕಾವೇರಿಗಾಗಿ ತಮಿಳುನಾಡಿನ ವಿರುದ್ಧದ ಹೋರಾಟವಾ ಅಥವಾ ಗೋಕಾಕ್ ಚಳವಳಿ ಮಾದರಿಯ ಹೋರಾಟವಾ, ಕನ್ನಡಿಗರೆಲ್ಲ ಬೀದಿಗಿಳಿದು ಧಿಕ್ಕಾರ ಕೂಗಲು ಅಥವಾ ಕನ್ನಡ ಚಿತ್ರರಂಗವೆಲ್ಲ ಒಕ್ಕೊರಲಿನಿಂದ ಪ್ರತಿಭಟನೆ ನಡೆಸಲು?
ಅದು ಬಸವನಗುಡಿಯಂಥ ಅಪ್ಪಟ ಕನ್ನಡ ಪ್ರದೇಶದಲ್ಲಿ, ಹೆಚ್ಚಾಗಿ ಕನ್ನಡಿಗರೇ ಇರುವಂಥ ಬಡಾವಣೆಯಲ್ಲಿ, ಕನ್ನಡಿಗರೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವಂಥ ಕಾರ್ಯಕ್ರಮದಲ್ಲಿ ಕನ್ನಡಿಗನೊಬ್ಬನಿಗೆ ಅವಮಾನವಾಗಿರುವುದು ನಮ್ಮ ಕನ್ನಡಪರ ಹೋರಾಟಗಾರರಿಗೆ ದೊಡ್ಡ ವಿಷಯವಲ್ಲವೇ ಅಲ್ಲ ಬಿಡಿ.
ಇಂಥ ಹೋರಾಟಕ್ಕೆಲ್ಲ ಸಾಮಾಜಿಕ ತಾಣಗಳ ಮೂಲಕ ದನಿಯೆತ್ತುವವರು ಮತ್ತೊಮ್ಮೆ ಅರುಣ್ ಜಾವಗಲ್, ವಸಂತ್ ಶೆಟ್ಟಿ, ಜಯಂತ್ ಸಿದ್ಮಲ್ಲಪ್ಪ, ಗಣೇಶ್ ಚೇತನ್ ಮುಂತಾದವರೆ.
ಇಷ್ಟೆಲ್ಲ ಕನ್ನಡದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ, ಅಲ್ಲಿ ದೂರದ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು 'ಜೈ ಮಹಾರಾಷ್ಟ್ರ' ಎಂದು ಬೊಬ್ಬೆ ಹೊಡೆದಿದ್ದು ಕನ್ನಡಿಗರಿಗೆ ಮರ್ಮಾಘಾತ ನೀಡಿದ್ದಾರೆ.
ಇಂಥವರ ವಿರುದ್ಧ ಪ್ರತಿಕ್ರಿಯೆ ನೀಡಿದರೆ ಅವರು ಮತ್ತಷ್ಟು ಕೆರಳಿ, ಕನ್ನಡ ವಿರೋಧಿ ಚಟುವಟಿಕೆಗಳಲ್ಲಿಯೇ ತೊಡಗುತ್ತಾರೆ ಎಂದು ಹಲವಾರು ಕನ್ನಡಪರ ಹೋರಾಟಗಾರರು ತಣ್ಣಗೆ ಕುಳಿತಿದ್ದಾರೆ. ವಿಧಾನಸಭೆ ಚುನಾವಣೆ ಇನ್ನೂ ಹೇಗಿದ್ದರೂ ದೂರವಿದೆಯಲ್ಲ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications