ವೈಟ್ಫೀಲ್ಡ್ ನಿವಾಸಿಗಳಿಗೆ ಮುಂದುವರಿದ ನೀರಿನ ಕೊರತೆ
ಬೆಂಗಳೂರು, ಜೂನ್ 9: ಬೆಂಗಳೂರಿನ ವೈಟ್ಫೀಲ್ಡ್ ಪ್ರದೇಶದ ನಿವಾಸಿಗಳು ತಮ್ಮ ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ನೀರು ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರು ನೀರು ಪೂರೈಸುವ ಟ್ಯಾಂಕರ್ಗಳನ್ನು ಕಾಯ್ದಿರಿಸಲು ತಿಂಗಳಿಗೆ ₹ 10,000 ಎತ್ತಿ ಇಡಬೇಕಾಗಿದೆ.
ವೈಟ್ಫೀಲ್ಡ್ನಲ್ಲಿ ದಿನನಿತ್ಯದ ಬಳಕೆಯ ನೀರಿಗೂ ಹಾಹಾಕಾರ ಮುಂದುರೆದಿದೆ. ಕಳೆದ ಎರಡು ತಿಂಗಳುಗಳಿಂದ ತಮ್ಮ ಕಾಲೋನಿಗಳಿಗೆ ಸರಿಯಾದ ನೀರಿನ ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

'ನಮಗೆ ಸರಿಯಾಗಿ ನೀರು ಪೂರೈಕೆಯಾಗಿ ಆರು ತಿಂಗಳಾಗಿದೆ. ಕಾವೇರಿ ಪೈಪ್ಲೈನ್ನಲ್ಲಿನ ಕೆಲವು ಸಮಸ್ಯೆ ಮತ್ತು ಇತರ ವಿಷಯಗಳೆ ಇದಕ್ಕೆ ಕಾರಣ. ಆದರೆ ನಮಗೆ ನಿಖರವಾಗಿ ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ ಎಂದು ವೈಟ್ಫೀಲ್ಡ್ನ ಪ್ರೆಸ್ಟೀಜ್ ಬೌಲೆವರ್ಡ್ನಲ್ಲಿ ವಾಸಿಸುವ ಇರ್ಷಾದ್ ಅಹಮದ್ ಹೇಳಿದ್ದಾರೆ. ಅವರ ಅಪಾರ್ಟ್ಮೆಂಟ್ ಸಂಕೀರ್ಣವು 144 ಫ್ಲಾಟ್ಗಳನ್ನು ಹೊಂದಿದೆ.
ವೈಟ್ಫೀಲ್ಡ್ ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ನೀಡಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದ ವಾರ್ಡ್ ಸಮಿತಿ ಸಭೆಗಳೂ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೋರ್ವೆಲ್ ನೀರನ್ನೇ ಅವಲಂಬಿಸಿದ್ದೇವೆ:
ನಮ್ಮದು ಹೊಸ ಬಡಾವಣೆ, ಹೀಗಾಗಿ ಸದ್ಯ ಬೋರ್ವೆಲ್ ನೀರನ್ನೇ ಅವಲಂಬಿಸಿದ್ದೇವೆ. ನಮಗೆ ಸ್ವಲ್ಪ ಕಾವೇರಿ ನೀರು ಸಿಗುತ್ತದೆ. ಆದರೆ ಅದು ಏನಕ್ಕೂ ಸಾಕಾಗಲ್ಲ. ನನಗೆ ಗೊತ್ತಿರುವ ಹತ್ತಿರದ ಹಲವಾರು ಕಾಲೋನಿಗಳು ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಮಾಡಿವೆ. ಜನರು ನೀರಿಗಾಗಿ ತಿಂಗಳಿಗೆ ₹ 10,000 ಖರ್ಚು ಮಾಡುತ್ತಾರೆ. ಹೆಚ್ಚಿನ ಉಪ್ಪಿನ ಅಂಶದಿಂದಾಗಿ ಬೋರಿಂಗ್ ನೀರು ಸಹ ಉತ್ತಮ ಆಯ್ಕೆಯಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳ ಚರ್ಮವು ಊತ ಬಂದಿದೆ ಎಂದು ಅಹಮದ್ ಹೇಳಿದರು.

ಶೇಕಡ 50ರಷ್ಟು ನೀರು ಸಿಗುತ್ತಿಲ್ಲ:
ಈ ಪ್ರದೇಶದಲ್ಲಿ ಸ್ವತಂತ್ರ ಮನೆ ಹೊಂದಿರುವ ಉತ್ತಮ್ ಸದಾಶಿವ ಅವರು ಈ ಹಿಂದೆ ಸಿಗುತ್ತಿದ್ದ ನೀರಿನ ಶೇಕಡ 50ರಷ್ಟು ನೀರು ಈಗ ಪೂರೈಕೆಯಾಗುತ್ತಿಲ್ಲ. ನಾನು ಒಂದೆರಡು ತಿಂಗಳಿನಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ ಯಾವುದೇ ದೂರುಗಳಿಗೆ ಸ್ಪಂದಿಸುತ್ತಿಲ್ಲ. ನಾನು ಆರು ದೂರುಗಳನ್ನು ಸಲ್ಲಿಸಿದ್ದೇನೆ. ನಾನು ಪ್ರತಿ ತಿಂಗಳು ಕನಿಷ್ಠ ಮೂರರಿಂದ ನಾಲ್ಕು ಟ್ಯಾಂಕರ್ಗಳನ್ನು ಕಾಯ್ದಿರಿಸಬೇಕು ಅದು ನನಗೆ ₹2,500-3,000 ವೆಚ್ಚವಾಗುತ್ತದೆ. 10 ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್ ಬೆಲೆ 800ರಿಂದ 1,600 ರೂಪಾಯಿ ಆಗಿದೆ ಎಂದರು.
1.5 ವರ್ಷಗಳಿಂದ ನೀರಿನ ಸಮಸ್ಯೆ:
ವೈಟ್ಫೀಲ್ಡ್ ಮುಖ್ಯರಸ್ತೆಯಲ್ಲಿ ಮನೆ ಹೊಂದಿರುವ ಮತ್ತೊಬ್ಬ ನಿವಾಸಿ ವೆಂಕಟೇಶ್ ಎಸ್ ಮಾತನಾಡಿ, ಕಳೆದ 1.5 ವರ್ಷಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಕಳೆದ ತಿಂಗಳಿಂದ ಇದು ಮತ್ತಷ್ಟು ಹೆಚ್ಚಾಗಿದೆ. ಜನವರಿ 2022 ರ ಮೊದಲು ನಮ್ಮ ಅಗತ್ಯಗಳನ್ನು ನೋಡಿಕೊಳ್ಳಲು ನಾನು ಸಾಕಷ್ಟು ನೀರನ್ನು ಪಡೆಯುತ್ತಿದ್ದೆ. ನನ್ನ ಬಳಿ 8,000 ಲೀಟರ್ ಸಂಪ್ ಕೂಡ ಇದೆ. ನಮಗೆ ವಾರಕ್ಕೆ ಎರಡು ಬಾರಿ ನೀರು ಸಿಗಬೇಕು. ಪ್ರತಿ ಬಾರಿ ನೀರು ಬಂದರೆ ಸಂಪ್ ತುಂಬಿ ಹರಿಯುತ್ತಿತ್ತು. ನನಗೂ ಈಗ ಒತ್ತಡ ಹೆಚ್ಆಗಿದ್ದು, ಈಗ ಸಂಪ್ನಲ್ಲಿ ಪೈಪ್ನ ಮಟ್ಟವನ್ನು ಇನ್ನೂ 2 ಅಡಿಗಳಷ್ಟು ಕಡಿಮೆ ಮಾಡಿದ್ದೇನೆ, ಆದರೆ ಇನ್ನೂ ನೀರು ಬಂದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ ಎಂದು ವೆಂಕಟೇಶ್ ಹೇಳಿದರು.
ದೂರುಗಳಿಗೆ ಸ್ಪಂದಿಸುವುದಿಲ್ಲ:
ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ತಮ್ಮ ದೂರುಗಳಿಗೆ ಸ್ಪಂದಿಸುವುದಿಲ್ಲ. ಪ್ರತಿ ಬಾರಿ ಅವರನ್ನು ತಲುಪಿದಾಗ ಬೇರೆ ಬೇರೆ ನೆಪ ಹೇಳುತ್ತಾರೆ. ಮೊದಲು ಅವರು ನನ್ನ ಸಂಪ್ ಮುಖ್ಯ ನೀರಿನ ಮಾರ್ಗದಿಂದ ತುಂಬಾ ದೂರದಲ್ಲಿದೆ ಎಂದು ಹೇಳಿದರು. ಗೇಟ್ಗೆ ಹತ್ತಿರದಲ್ಲಿ ಒಂದನ್ನು ನಿರ್ಮಿಸಲು ನನ್ನನ್ನು ತಿಳಿಸಿದರು. ಕೋವಿಡ್ ನಂತರ ನಗರದಿಂದ ಹೋದ ಜನರು ಮರಳಿ ಬಂದ ನಂತರ ನೀರಿಗೆ ಹೆಚ್ಚು ಬೇಡಿಕೆಯಿದೆ. ಈಗ ಒತ್ತುವರಿ ಸಮಸ್ಯೆ ಇದೆ ಎನ್ನುತ್ತಿದ್ದಾರೆ. ಆದರೆ ಪಂಪ್ ಬದಲಾಯಿಸಿದ ನಂತರವೂ ಯಾವುದೇ ಸುಧಾರಣೆಯಾಗಿಲ್ಲ ಎಂದರು.
ವಿದ್ಯುತ್ ಏರಿಳಿತದಿಂದ ಸಮಸ್ಯೆ:
ಇನ್ನು BWSSB ಕಾರ್ಯನಿರ್ವಾಹಕ ಇಂಜಿನಿಯರ್ ಮಿರ್ಜಾ ಅಹ್ಮದ್, ಬೇಸಿಗೆಯಲ್ಲಿ ವಿದ್ಯುತ್ ಏರಿಳಿತದಿಂದ ಸಮಸ್ಯೆ ಉಂಟಾಗುತ್ತದೆ. ಇದರ ಪರಿಣಾಮವಾಗಿ, ವೈಟ್ಫೀಲ್ಡ್ನ ಕೆಲವು ಪ್ರದೇಶಗಳು ಬಾಧಿತವಾಗಿವೆ. ವಿದ್ಯುತ್ ಬಂದರೆ ಸಮಯವೂ ಬದಲಾಗುತ್ತಿತ್ತು. ಕಳೆದ ಎರಡು ತಿಂಗಳಿನಿಂದ ನಾವು ಎದುರಿಸುತ್ತಿರುವ ಸಮಸ್ಯೆ ಇದು ಎಂದರು.
-
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ











Click it and Unblock the Notifications