ವಿಟ್ರಾದಿಂದ ಬೆಂಗಳೂರಲ್ಲಿ ವಿಶಿಷ್ಟವಾದ ಬಾತ್ ರೂಮ್ ಮಳಿಗೆ
ಬೆಂಗಳೂರು, ಜೂನ್ 09: ಟರ್ಕಿಯ ಕಟ್ಟಡ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಕ್ಝಾಸಿಬಸಿ ಸಂಸ್ಥೆಯ ಅಂಗಸಂಸ್ಥೆಯಾಗಿರುವ ವಿಟ್ರಾ (ವಿಐಟಿಆರ್ಎ)ದ ವಿಶಿಷ್ಟಾಅದ ಬಾತ್ ರೂಮ್ ಪರಿಕರಗಳ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ.
ಬನಶಂಕರಿ ಮೂರನೇ ಸ್ಟೇಜ್ ನ 2 ನೇ ಹಂತದ 7 ನೇ ಬ್ಲಾಕ್ ನಲ್ಲಿನ 80 ಅಡಿ ರಸ್ತೆಯ ಹೊಸಕೆರೆಹಳ್ಳಿಯ ಸಿಗ್ನಲ್ ಬಳಿ ಎಂಪಿ ಅಂಡ್ ಸನ್ ನಲ್ಲಿ ಈ ವಿಶಾಲವಾದ ಶೋರೂಂ ಆರಂಭಗೊಂಡಿದೆ.
3000 ಚದರಡಿಯ ವಿಸ್ತಾರವಾದ ಮಳಿಗೆಯಲ್ಲಿ ವಿಟ್ರಾದ ಬಾತ್ ರೂಮ್ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಇದಲ್ಲದೇ ವಿಶ್ವದಾದ್ಯಂತ ಇಂಟೀರಿಯರ್ ಕಾಂಟ್ರಾಕ್ಟರ್ ಗಳು ಮತ್ತು ವಾಸ್ತುಶಿಲ್ಪಿಗಳು ಮೆಚ್ಚಿಕೊಂಡಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಬಾತ್ ರೂಮ್ ಉತ್ಪನ್ನಗಳ ಪ್ರದರ್ಶನವನ್ನು ಎಲ್ಲರ ಗಮನ ಸೆಳೆಯುತ್ತಿವೆ.

ವಿಟ್ರಾ ತನ್ನ ಬಾತ್ ರೂಮ್ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಅತ್ಯಂತ ಶ್ರೇಷ್ಠವಾದ ಬಾತ್ ರೂಮ್ ಪರಿಹಾರಗಳನ್ನು ಒದಗಿಸುತ್ತದೆ. ವಿಟ್ರಾದ ಉತ್ಪನ್ನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸೊಗಸಾಗಿ ಕಾಣಿಸುತ್ತವೆ. ವಿಟ್ರಾ ಇಡೀ ವಿಶ್ವದ ಮಾರುಕಟ್ಟೆಯಲ್ಲಿ ಬಾತ್ ರೂಮ್ ಗೆ ಬೇಕಾದ ಎಲ್ಲಾ ಬಗೆಯ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿರುವ ಏಕೈಕ ಸಂಸ್ಥೆಯಾಗಿದೆ.
ಮೆಮೋರಿಯಾ, ಇಸ್ತಾಂಬುಲ್, ಮೆಟ್ರೋಪೋಲ್, ವಾಟರ್ ಜ್ಯುವೆಲ್ಸ್, ನೆಸ್ಟ್, ಟಿ4 ಕಲೆಕ್ಷನ್ಸ್ ಸೇರಿದಂತೆ ವಿಶ್ವ ಖ್ಯಾತಿಯ ಉತ್ಪನ್ನಗಳನ್ನು ಭಾರತೀಯ ಗ್ರಾಹಕರಿಗೆ ನೀಡುತ್ತಿದೆ.
ಎಕ್ಝಾಸಿಬಸಿ ಬಿಲ್ಡಿಂಗ್ ಪ್ರಾಡಕ್ಟ್ಸ್ ಡಿವಿಷನ್ ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಸೆರ್ಹಾನ್ ಅತೀಸ್ಯಾಗಿಝ್ : ವಿಟ್ರಾ ಮಳಿಗೆಯನ್ನು ಆರಂಭಿಸುವ ಮೂಲಕ ನಾವು ಅಂತಾರಾಷ್ಟ್ರೀಯ ಗುಣಮಟ್ಟದ ಮತ್ತು ಆವಿಷ್ಕಾರಕ ಬಾತ್ ರೂಮ್ ಸಂಸ್ಕೃತಿಯನ್ನು ಬೆಂಗಳೂರಿಗೆ ತಂದಿದ್ದೇವೆ.
ವಿಟ್ರಾದಿಂದ ಬೆಂಗಳೂರಲ್ಲಿ ವಿಶಿಷ್ಟವಾದ ಬಾತ್ ರೂಮ್ ಮಳಿಗೆ
ಭಾರತದಲ್ಲಿ ಎಕ್ಝಾಸಿಬಸಿಯ ವಿಟ್ರಾ ಕಚೇರಿ ಆರಂಭ ಮತ್ತು ಡೀಲರ್ ಗಳ ಜಾಲ ವಿಸ್ತರಣೆಗಾಗಿ ಸಂಸ್ಥೆ ಭಾರತದಲ್ಲಿ ಬಂಡವಾಳ ತೊಡಗಿಸಿದೆ. ಪ್ರಸ್ತುತ 75 ದೇಶಗಳಿಗೆ ಬಾತ್ ರೂಮ್ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ವಿಟ್ರಾ ಮುಂಬರುವ ದಿನಗಳಲ್ಲಿ ಜಾಗತಿಕ ಕಂಪನಿಗಳ ಪಟ್ಟಿಯ ಟಾಪ್ 3 ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications