ವೈರಲ್ ಆದ ಬಿಬಿಎಂಪಿ 'ನೋ ಜಾಗಿಂಗ್, ನೋ ರನ್ನಿಂಗ್' ಫಲಕ
ಬೆಂಗಳೂರು ಜುಲೈ 14: ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲೇ ಉದ್ಯಾನವೊದರ ಮುಂದೆ ಬಿಬಿಎಂಪಿ ಹಾಕಿರುವ ನಾಮಫಲಕ ಸಾಮಾಜಿಕ ಜಾತಲಾಣಗಳಲ್ಲಿ ವೈರಲ್ ಆಗಿದೆ. ಈ ನಾಮಫಲಕದ ವಿರುದ್ಧ ಕೆಲವು ನೆಟ್ಟಿಗರು ಲೇವಡಿ ಮಾಡಿದ್ದಾರೆ.
ಬೆಂಗಳೂರಿಗೆ ಉದ್ಯಾನ ನಗರಿ ಎಂದು ಸುಖಾಸುಮ್ಮನೆ ಕರೆಯುವುದಿಲ್ಲ. ರಾಜಧಾನಿಯಲ್ಲಿ ಗಲ್ಲಿ-ಗಲ್ಲಿಗಳಲ್ಲಿ ಹಾಗೂ ಪ್ರತಿ ಬಡಾವಣೆಗಳಲ್ಲೂ ಒಂದೋ ಎರಡೋ ಉದ್ಯಾನಗಳು ಕಾಣಸಿಗುತ್ತವೆ. ಅಲ್ಲಿಗೆ ವಿಶ್ರಾಂತಿಗಾಗಿ, ವಾಯು ವಿಹಾರಕ್ಕಾಗಿ, ಬೆಳಗ್ಗೆ ಮತ್ತು ಸಂಜೆ ಹಿರಿಯರು, ಮಕ್ಕಳು, ಮಹಿಳೆಯರು ಆಗಮಿಸುತ್ತಾರೆ.
ಉದ್ಯಾನದಲ್ಲಿ ಪ್ರವೇಶಿಸುವ ಕುರಿತು, ವ್ಯಾಯಾಮ, ವಾಕಿಂಗ್ ಮಾಡುವ ಕುರಿತು ಒಂದಷ್ಟು ವೇಳಾ ಪಟ್ಟಿಯ ನಾಮಫಲಕಗಳನ್ನು ನಾವು ನೋಡಿದ್ದೇವೆ. ಬೆಳಗ್ಗೆ ಮತ್ತು ಸಂಜೆ ಇಂತಿಷ್ಟು ಗಂಟೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಎಂದು ಸಮಯ ನಿಗದಿ ಮಾಡಿರುವುದನ್ನು ಗಮನಿಸಿದ್ದೇವೆ.

ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದು ಉದ್ಯಾನದ ಮುಂದೆ 'ಇಲ್ಲಿ ಯಾರು ಜಾಗಿಂಗ್ ಮತ್ತು ಓಡಾಟ (ರನ್ನಿಂಗ್) ಮಾಡುವಂತಿಲ್ಲ. ಬಲದಿಂದ ಎಡಕ್ಕೆ ಯಾರು ನಡೆಯುವಂತಿಲ್ಲ' ಎಂಬ ನಾಮಫಲಕ ಅಳವಡಿಸಿದೆ. ಇದೀಗ ಈ ಬೋರ್ಡು ನೆಟ್ಟಿಗರಿಗೆ ಆಹಾರವಾಗಿದೆ.
ನೋ ಜಾಗಿಂಗ್, ನೋ ರನ್ನಿಂಗ್; ಉದ್ಯಾನಕ್ಕೆ ಬರುವುದೇ ವಿಶ್ರಾಂತಿ, ವಾಕಿಂಗ್ಗೆ, ಓಡಾಡಲು, ವ್ಯಾಯಾಮ ಮಾಡಲು. ಆದರೆ ಬಿಬಿಎಂಪಿ ಇಲ್ಲಿ ಯಾರು ಜಾಗಿಂಗ್ ಮತ್ತು ರನ್ನಿಂಗ್ ಮಾಡುವಂತಿಲ್ಲ. ನಡೆದಾಡುವಂತಿಲ್ಲ ಎಂದು ನಿಯಮ ಹೇರಿದೆ. ಹಾಗಾದರೆ ಉದ್ಯಾನದಲ್ಲಿ 'ನಾಗಿಣಿ ಡ್ಯಾನ್ಸ್' ಮಾಡಬೇಕೆ? ಎಂದು ಲೇವಡಿ ಮಾಡಿದ್ದಾರೆ.
ನಗರದ ಉದ್ಯಾನ ಒಂದರ ಮುಂದೆ ಹಾಕಿರುವ ಬೋರ್ಡ್ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಬಿಬಿಎಂಪಿ ಪೇಚಿಗೆ ಸಿಲುಕಿದೆ. ನಡೆದಾಡಬಾರದು ಎಂದಾದರೆ ಉದ್ಯಾನದಲ್ಲಿ ನಾಗಿಣಿ ನೃತ್ಯ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಮತ್ತೊಬ್ಬರು ನೀವು ನಾಗಿಣಿ ನೃತ್ಯ ಮಾಡಬಹುದು. ಆದರೆ ಅದನ್ನು ಎಡದಿಂದ ಬಲಕ್ಕೆ ಮಾಡಬೇಕು ಇಲ್ಲದಿದ್ದರೆ ನಿಮಗೆ ಅನುಮತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮೂನ್ ವಾಕ್ ಮಾಡಬಹುದೇ?; ಇನ್ನು ಕೆಲವೊಬ್ಬರು ಬಿಬಿಎಂಪಿಗೆ ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದಲ್ಲೇ ಪಾರ್ಕ್ನಲ್ಲಿ ಮೂನ್ವಾಕ್ ಮಾಡಬಹುದೇ? ಎಂದು ಕೇಳಿದ್ದಾರೆ. ನಗರದ ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗೆ ಗಮನ ಹರಿಸದ ಬಿಬಿಎಂಪಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹಾಗೂ ಸಾರ್ವಜನಿಕವಾಗಿ ಪೇಚಿಗೆ ಸಿಲುಕುವಂತೆ ನಿಯಮಗಳನ್ನು ತರುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications