ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ
ತ್ರಿಕೋನದ ಆಕಾರದ ಮಸಾಲೆ ದೋಸೆಯ ಒಳಗೆ ಅವಿತಿಟ್ಟುಕೊಂಡ ಆಲೂಗಡ್ಡೆ ಪಲ್ಯ. ಕೆಂಪು ಚಟ್ನಿ ಹಾಕಬೇಡಿ ಎಂದು ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ಅಲ್ಲಿ ಕೆಂಪು ಚಟ್ನಿ ಬಳಸಲ್ಲ. ಒಬ್ಬೊಬ್ಬರು ಸಪ್ಲೈಯರ್ ಕೈಲೂ ಇಪ್ಪತ್ತು-ಇಪ್ಪತ್ತೈದು ಪ್ಲೇಟ್ ದೋಸೆ ಕೈ ಬದಲಾಗುತ್ತಾ ಗ್ರಾಹಕರು ಕೂತ ಜಾಗದಲ್ಲಿ ಕೆಲ ನಿಮಿಷಗಳಲ್ಲಿ ಖಾಲಿ ಆಗುತ್ತಲೇ ಇರುತ್ತವೆ.
ವಿದ್ಯಾರ್ಥಿ ಭವನ ಅಂದರೆ ಮಸಾಲೆ ದೋಸೆ ಮಾತ್ರ ಅಲ್ಲ. ತಲೆಮಾರುಗಳ ನೆನಪು, ನಂಬಿಕೆ, ಬಂಧ. ಇಂಥ ಪದಗಳು ಉಳಿದ ಹೋಟೆಲ್ ಗಳ ಪಾಲಿಗೆ ಅತಿ ಎನಿಸಬಹುದೇನೋ ಆದರೆ ವಿದ್ಯಾರ್ಥಿ ಭವನಕ್ಕೆ ಅಲ್ಲ. ಎಪ್ಪತ್ತೈದು ವರ್ಷ ಪೂರೈಸಿರುವ ವಿದ್ಯಾರ್ಥಿ ಭವನಕ್ಕೆ ಶುಕ್ರವಾರದಂದು ಸೊಗಸಾದ ಕಾರ್ಯಕ್ರಮ.
ಬೆಂಗಳೂರಿನ ಗಾಂಧಿ ಬಜಾರ್ ನ ಬಗ್ಗೆ ನೆನಪಿಸಿಕೊಳ್ಳುವುದು, ಬರೆಯುವುದು ಅಂದರೆ ಅದೊಂದು ಬಗೆಯ ಸಂತೋಷ. ಹಬ್ಬದ ಮುನ್ನಾ ದಿನಗಳಲ್ಲಿ, ವಾರಾಂತ್ಯಗಳಲ್ಲಿ ಬೆಂಗಳೂರಿನ ನಾನಾ ಭಾಗದಿಂದ ಬಂದ ಜನರು ಇಲ್ಲಿ ಶಾಪಿಂಗ್ ಮಾಡುತ್ತಾರೆ, ತಿಂಡಿ ತಿನ್ನಲೆಂದೇ ಬರುತ್ತಾರೆ. ಹ್ಞಾಂ, ತಿಂಡಿ ಅಂದಾಕ್ಷಣ ನೆನಪಾಗುವುದು ಗಾಂಧಿ ಬಜಾರ್ ನ ವಿದ್ಯಾರ್ಥಿ ಭವನ.

ಮನಸು ಗಾಂಧಿ ಬಜಾರು ಎಂಬ ಕವಿತೆ
ಸಾಲಾಗಿ ಕೂರುವ ಹೂವು ಮಾರಾಟಗಾರರು, ವೀಳ್ಯದೆಲೆ-ಬಾಳೆಹಣ್ಣು, ಇತರೆ ಹಣ್ಣುಗಳನ್ನು ಮಾರುವವರ ಮುಂದೆ ಜನ ಜಂಗುಳಿ ಇರುವಂತೆಯೇ ವಿದ್ಯಾರ್ಥಿ ಭವನದ ಮುಂದೆಯೂ ಜನವೋ ಜನ. ಮೂರು ತಲೆಮಾರಿನ ಜನರ ಬಾಯಿ ರುಚಿ ತಣಿಸುವ ಮಸಾಲೆ ದೋಸೆ ಮತ್ತಿತರ ತಿನಿಸು ಒದಗಿಸುತ್ತಿರುವ ವಿದ್ಯಾರ್ಥಿ ಭವನಕ್ಕೆ ಎಪ್ಪತ್ತೈದು ವರ್ಷದ ಸಂಭ್ರಮ. ಡಿವಿಜಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪಿ.ಲಂಕೇಶ್, ನಿಸಾರ್ ಅಹ್ಮದ್ ಹೀಗೆ ಎಷ್ಟೋ ಸಾಹಿತಿಗಳ ಪಾಲಿಗೂ ಈ ಹೋಟೆಲ್ ಅಚ್ಚುಮೆಚ್ಚು ಹೌದು. ಅದರಲ್ಲೂ ನಿಸಾರ್ ಅಹ್ಮದ್ ರ ಗಾಂಧಿ ಬಜಾರಿನ ಪ್ರೀತಿ ಎಂಥದ್ದು ಅಂದರೆ, ಮನಸು ಗಾಂಧಿ ಬಜಾರು ಎಂಬ ಕವಿತೆಯನ್ನೇ ಬರೆದಿದ್ದಾರೆ.

ಮುನಿಸು ಕರಗಲು ಮಸಾಲೆ ದೋಸೆ
ಸಾಹಿತಿಗಳು ಅಂತಲ್ಲ. ರಾಜಕಾರಣಿಗಳು, ಸಿನಿ ನಟ-ನಟಿಯರು ಪಾಲಿಗೂ ಈ ಸ್ಥಳ ಅಚ್ಚುಮೆಚ್ಚು. ಒಂದು ಮಸಾಲೆ ದೋಸೆ ತಿಂದು ತೃಪ್ತಿ ಆಗಲಿಕ್ಕಿಲ್ಲ. ಮತ್ತೊಮ್ಮೆ ಆರ್ಡರ್ ಮಾಡುವುದು ಹೊತ್ತಾಗಬಹುದು ಎಂಬ ಗುಮಾನಿಯಿಂದ ಒಟ್ಟೊಟ್ಟಿಗೆ ಒಬ್ಬರಿಗೆ ಎರಡೆರಡು ಮಸಾಲೆ ದೋಸೆ ಹೇಳಿಬಿಡುವ ಗ್ರಾಹಕರು ಈ ಹೋಟೆಲ್ ಗೆ ಇದ್ದಾರೆ. ಪ್ರೀತಿಸುವವರು ಭೇಟಿಯಾಗಲು, ಗಂಡ-ಹೆಂಡತಿ ಮಧ್ಯೆ ಮುನಿಸು ಕರಗಲು, ಸ್ನೇಹಿತರ ಮಧ್ಯದ ಲೋಕಾಭಿರಾಮದ ಹರಟೆಗೆ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಕಾರಣವನ್ನು ಒದಗಿಸುತ್ತಲೇ ಇದೆ! ಅಲ್ಲಿನ ರವೆ ವಡೆ, ಬೆಳಗಿನ ಹೊತ್ತು ಸಿಗುವ ಸಾಗು ಮಸಾಲೆ ದೋಸೆಗೂ ಅಭಿಮಾನ ಇರದವರು ಉಂಟೇ ಎಂದರೆ ಅತಿಶಯೋಕ್ತಿ ಅಲ್ಲ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ತಲೆಮಾರಿನವರ ತನಕ
ಹೋಟೆಲ್ ಗೆ ಹೋಗುತ್ತಾ, ಅಲ್ಲಿನ ಮಸಾಲೆ ದೋಸೆ ಸವಿಯುತ್ತಾ ವಯಸ್ಸಾಗುತ್ತಿರುವುದೇ ಗೊತ್ತಾಗುತ್ತಿಲ್ಲ ಎನ್ನುವವರ ಮಧ್ಯೆ, ಹೊಸ ತಲೆಮಾರಿನವರು ಮಸಾಲೆ ದೋಸೆ ಪ್ಲೇಟು ಹಾಗೂ ವಿದ್ಯಾರ್ಥಿ ಭವನ್ ಬೋರ್ಡ್ ನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ತಲೆಮಾರಿನ ತನಕ ಏನೆಲ್ಲ ಬದಲಾವಣೆಗಳು ಆಗಿವೆ. ಆದರೆ ರುಚಿಯಲ್ಲಿ ಮಾತ್ರ ಅದೇ ಮಸಾಲೆ ದೋಸೆಯ ಸ್ವಾದ. ರುಚಿ.

ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿದೆ
ವಿದ್ಯಾರ್ಥಿ ಭವನಕ್ಕೆ ಎಪ್ಪತ್ತೈದು ವರ್ಷ ತುಂಬಿದ ಸಂಭ್ರಮಕ್ಕೆ ಅಕ್ಟೋಬರ್ 26ರ ಶುಕ್ರವಾರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಲೀಕರಾದ ರವೀಂದ್ರ ಅಡಿಗ ಅದ್ಭುತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಈ ರೀತಿಯ ಹೋಟೆಲ್ ನಂತೆಯೇ ಬಹುಶಃ ಈ ರೀತಿಯ ಕಾರ್ಯಕ್ರಮವೂ ಅಪರೂಪ. ಗಾಂಧಿ ಬಜಾರಿನ ನೆನಪಿನ ಭಾಗವೇ ಆಗಿರುವ ವಿದ್ಯಾರ್ಥಿ ಭವನದ ಈ ಕಾರ್ಯಕ್ರಮಕ್ಕೆ ಸಾಧ್ಯವಾದರೆ ಹೋಗಿಬರಬಹುದು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications