ವಿಡಿಯೋ : ವಾಹನ ಹಾಯ್ದರೂ ಪವಾಡಸದೃಶವಾಗಿ ಬದುಕುಳಿದ ಮಗು
ಅಪ್ಪ ಅಮ್ಮ ಸದಾ ಬಿಜಿ, ಕೆಲಸಕ್ಕೆ ಹೋಗುವ ತವಕ, ಯಾವುದೋ ಲೋಕದಲ್ಲಿ ವಿಹರಿಸುತ್ತಿರುತ್ತಾರೆ, ಮಕ್ಕಳೇನೋ ಮಾಡುತ್ತಿರುತ್ತವೆ, ಹೊರಗಡೆ ರಸ್ತೆಯಲ್ಲಿ ಏನೋ ಸಂಭವಿಸಿರುತ್ತದೆ. ಅನಾಹುತ ನಡೆದಾಗಲೇ ಪೋಷಕರು ಈ ವಾಸ್ತವ ಲೋಕಕ್ಕಿಳಿಯುವುದು.
ಬೆಂಗಳೂರು, ಮೇ 22 : ಉಸಿರನ್ನು ಬಿಗಿಯಾಗಿ ಹಿಡಿದುಕೊಂಡು ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ವಿಡಿಯೋ ಇದು. ಏಕೆಂದರೆ, ಹಿಂದಿನ ಬೆಂಗಳೂರಾಗಿ ಉಳಿದಿರದ ಇಂದಿನ ಬೆಂಗಳೂರಿನಲ್ಲಿ ನಿಮ್ಮ ಮಗುವಿಗೆ ಏನು ಬೇಕಾದರೂ ಸಂಭವಿಸಬಹುದು.
ಅಪ್ಪ ಅಮ್ಮ ಸದಾ ಬಿಜಿ, ಕೆಲಸಕ್ಕೆ ಹೋಗುವ ತವಕ, ಯಾವುದೋ ಲೋಕದಲ್ಲಿ ವಿಹರಿಸುತ್ತಿರುತ್ತಾರೆ, ಮಕ್ಕಳೇನೋ ಮಾಡುತ್ತಿರುತ್ತವೆ, ಹೊರಗಡೆ ರಸ್ತೆಯಲ್ಲಿ ಏನೋ ಸಂಭವಿಸಿರುತ್ತದೆ. ಅನಾಹುತ ನಡೆದಾಗಲೇ ಪೋಷಕರು ಈ ವಾಸ್ತವ ಲೋಕಕ್ಕಿಳಿಯುವುದು. ಹೀಗಾಗದಂತೆ ಎಚ್ಚರವಹಿಸಬೇಕಾದರೆ ಈ ವಿಡಿಯೋ ನೋಡಿ. [ಪವಾಡ: ತಲೆಗೆ ಪೆಟ್ಟು ಬಿದ್ದಿದ್ದೆ ತಡ ಕುರುಡುತನ ಮಾಯ!]

ತಂದೆ ನಾಪಿತ. ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿಯೇ ಕ್ಷೌರದಂಗಡಿ ಇಟ್ಟಿದ್ದಾರೆ. ತಾಯಿ ಖಾಸಗಿ ಕಂಪನಿಯ ಉದ್ಯೋಗಿ. ಬೆಳಗಿನ ಜಾವ ಕ್ಷೌರದಂಗಡಿ ಬಾಗಿಲು ತೆರೆದಿದ್ದಾಗ, ಅಲ್ಲೇ ಆಟವಾಡುತ್ತಿದ್ದ ನೋಡಿ 14 ತಿಂಗಳ ಮಗು ಹೊರಗೆ ರಸ್ತೆಗೆ ಬಂದಿದೆ.[ಮಧ್ಯಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬಸ್, 6 ಮಂದಿ ಸಾವು]
ಅಷ್ಟರಲ್ಲಿ ಕಪ್ಪು ಬಣ್ಣದ ಕಾರು ಹಿಂಬದಿ ಮುಖವಾಗಿ ಬಂದಿದೆ. ಅದರ ಅಡಿ ಮಗು ಸಿಲುಕಿದೆ. ನೋಡನೋಡುತ್ತಿದ್ದಂತೆ ಮಗುವಿನ ಮೇಲೆ ವಾಹನ ಹತ್ತಿಬಿಟ್ಟಿದೆ. ಅಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಕಿರುಚಿಕೊಂಡಾಗಲೇ ನಡೆದ ದುರಂತ ಗಮನಕ್ಕೆ ಬಂದಿದೆ.
ಅದೃಷ್ಟವಶಾತ್ ಮಗು ಬದುಕುಳಿದಿದೆ. ಅಷ್ಟು ದೊಡ್ಡ ವಾಹನ ಹತ್ತಿಳಿದರೂ ಮಗು ಬದುಕುಳಿದಿರುವುದು ಪವಾಡವೇ ಸರಿ ಎಂದು ವೈದ್ಯರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಲಿನ ಹೆಬ್ಬೆರಳ ಮೂಳೆ ಪುಡಿಪುಡಿಯಾಗಿರುವುದು ಬಿಟ್ಟರೆ ಮಗುವಿಗೆ ಅಂತಹ ಗಾಯವಾಗಿಲ್ಲ.
ದೇವರು ದೊಡ್ಡವನು. ಮಗು ಬದುಕುಳಿಯಿತು. ಆದರೆ, ಇನ್ನು ಮೇಲಾದರೂ ಸದಾ ತಮ್ಮ ಕೆಲಸದಲ್ಲಿಯೇ ಮಗ್ನರಾಗಿರುವ ಪೋಷಕರು ಪಾಠ ಕಲಿಯುತ್ತಾರೆಯೆ? ಅದಕ್ಕೇ ಹೇಳಿದ್ದು ಇಂದು ಬೆಂಗಳೂರು ಅಂದಿನ ಬೆಂಗಳೂರಾಗಿ ಉಳಿದಿಲ್ಲ. ಮಕ್ಕಳು ರಸ್ತೆಗಿಳಿದರೆ ಸಾಕು ಏನು ಸಂಭವಿಸುತ್ತದೋ ಎಂಬ ಭಯ ಕಾಡುತ್ತಿರುತ್ತದೆ. [ಮದರ್ ತೆರೆಸಾ ಸಂತಳಾಗಿದ್ದು ಹೇಗೆ? ಪವಾಡಗಳೇನು?]
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications