ವಾಸುದೇವ ಅಡಿಗಾಸ್ ನಲ್ಲಿ 1 ರೂ. ದರ ಹೆಚ್ಚಳ
ಬೆಂಗಳೂರು, ನ. 14 : ಪ್ರಸಿದ್ಧ ವಾಸುದೇವ ಅಡಿಗಾಸ್ ತನ್ನೆಲ್ಲಾ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳ ದರವನ್ನು ಗುರುವಾರದಿಂದ 1ರೂ.ಹೆಚ್ಚಳ ಮಾಡುತ್ತಿದೆ. ಹೆಚ್ಚಿನ ದರವನ್ನು ಇಸ್ಕಾನ್ ಅಕ್ಷಯ ಪಾತ್ರಾ ಯೋಜನೆಗೆ ನೀಡಲು ಅಡಿಗಾಸ್ ನಿರ್ಧರಿಸಿದೆ. ಈ ದರ ಗುರುವಾರದಿಂದಲೇ ಜಾರಿಗೆ ಬರುತ್ತಿದೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಸುದೇವ ಅಡಿಗಾಸ್ ಹೋಟೆಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜೇಕಬ್ ಕುರಿಯನ್ ಈ ಕುರಿತು ಮಾಹಿತಿ ನೀಡಿದರು. 'ಇಸ್ಕಾನ್ ಅಕ್ಷಯ ಪಾತ್ರಾ' ಯೋಜನೆಗೆ ಕೈಜೋಡಿಸಿರುವ 'ವಾಸುದೇವ ಅಡಿಗಾಸ್' ಗುರುವಾರದಿಂದ ತನ್ನೆಲ್ಲಾ ಹೋಟೆಲ್ಗಳಲ್ಲಿ ಆಹಾರ ಪದಾರ್ಥಗಳ ದರವನ್ನು 1 ರೂ. ಹೆಚ್ಚಿಸಲು ಪ್ಲಸ್ಒನ್ ಅಭಿಯಾನ ನಡೆಸಲಿದೆ ಎಂದರು.

ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ ಇಸ್ಕಾನ್ ಸಂಸ್ಥೆಯ ಇಸ್ಕಾನ್ ಅಕ್ಷಯ ಪಾತ್ರಾ' ಯೋಜನೆಗೆ ನಾವು ಕೈಜೋಡಿಸುತ್ತಿದ್ದೇವೆ. ಆದ್ದರಿಂದ ಪ್ಲಸ್ ಒನ್ ಅಭಿಯಾನ ಆರಂಭಿಸಿದ್ದು, ಪ್ರತಿ ಆಹಾರ ಪದಾರ್ಥಗಳ ಮೇಲೆ ಹೆಚ್ಚುವರಿಯಾಗಿ ಪಡೆಯಲಾಗುವ 1 ರೂಪಾಯಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅಕ್ಷಯ ಪಾತ್ರಾ ಯೋಜನೆಗೆ ದೇಣಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಡಿಗಾಸ್ ಸಮೂಹ ಸಂಸ್ಥೆಯ ಒಟ್ಟು 20 ಶಾಖೆಗಳಿವೆ. ಗ್ರಾಹಕರು, ಪಾಲುದಾರರು ಹಾಗೂ ಉದ್ಯೋಗಿಗಳ ಸಹಭಾಗಿತ್ವದಲ್ಲಿ ಅಕ್ಷಯ ಪಾತ್ರಾ ಯೋಜನೆಗೆ 10 ಲಕ್ಷ ಊಟದ ಆರ್ಥಿಕ ನೆರವು ನೀಡಲು ಪ್ಲಸ್ಒನ್ ಎಂಬ ಅಭಿಯಾನ ಆರಂಭಿಸಲಾಗಿದೆ ಎಂದರು. ಗುರುವಾರ ನ.14ರ ಮಕ್ಕಳ ದಿನಾಚರಣೆಯಾದ ಕಾರಣ ಅಂದಿನಿಂದಲೇ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ 1 ರೂ. ಏರಿಕೆಯಾಗಲಿದೆ ಎಂದು ತಿಳಿಸಿದರು.
ಎಷ್ಟು ಸಂಗ್ರಹವಾಗುತ್ತದೆ : ಅಡಿಗಾಸ್ ಸಂಸ್ಥೆಯು 10 ಲಕ್ಷ ಊಟದ ಆರ್ಥಿಕ ನೆರವು ಭರಿಸಲು ಕನಿಷ್ಠ 36.50 ಲಕ್ಷ ರೂ. ಅಗತ್ಯವಿದೆ ಎಂದು ಅಂದಾಜಿಸಿದೆ. ಎಲ್ಲಾ ಅಡಿಗಾಸ್ ಶಾಖೆಗಳಲ್ಲಿ ಪ್ರತಿ ತಿಂಗಳು 7 ರಿಂದ 8 ಲಕ್ಷ ಗ್ರಾಹಕರು ಆಹಾರ ಸೇವಿಸಲಿದ್ದಾರೆ. ಪ್ರತೀ ಗ್ರಾಹಕ ಕನಿಷ್ಠ 2 ಪದಾರ್ಥ ಕೊಂಡರೂ 1 ರೂ. ಹೆಚ್ಚಳದಿಂದ ತಿಂಗಳಿಗೆ 14 ರಿಂದ 16 ಲಕ್ಷ ರೂ. ಸಂಗ್ರಹವಾಗುತ್ತದೆ ಎಂದು ಕುರಿಯನ್ ಹೇಳಿದರು.
2 ತಿಂಗಳಲ್ಲಿ 32 ಲಕ್ಷ ರೂ. ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಉಳಿದ ಹಣವನ್ನು ಪಾಲುದಾರರು, ಉದ್ಯೋಗಿಗಳ ಸಹಭಾಗಿತ್ವದಲ್ಲಿ ಕ್ರೋಡಿಕರಿಸಿ ಅಕ್ಷಯ ಪಾತ್ರಾ ಯೋಜನೆಗೆ ನೀಡಲಾಗುವುದು ಎಂದು ತಿಳಿಸಿದರು. ಅಕ್ಷಯ ಪಾತ್ರಾ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ (ನಿರ್ವಹಣೆ) ವಿನಯ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications