ಬಣ್ಣ ಬಣ್ಣದ ಚಿತ್ತಾರ ಕಲರ್ ಥಾನ್ ಸ್ಪರ್ಧೆ
ಬೆಂಗಳೂರು, ಜ.21: ವಂದೇ ಮಾತರಂ ಟ್ರಸ್ಟ್ ಹಾಗೂ ಐಡಿಎಲ್ ಫೌಂಡೇಶನ್ ಜಂಟಿಯಾಗಿ ಕಲರ್ ಥಾನ್ ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. ಗಣತಂತ್ರ ದಿನದಂದು ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರತಿ ವಿಭಾಗದಿಂದ 5 ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 3 ಅತ್ಯುತ್ತಮ ಚಿತ್ರಗಳನ್ನು ಬಿಡಿಸಿದ ಕಲಾವಿದರಿಗೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೌರವಿಸಲಿದ್ದಾರೆ. ಇದ್ರ ಜೊತೆ 50 ಖ್ಯಾತ ಕಲಾವಿದರು ಐಡಿಯಲ್ ಫೌಂಡೇಷನ್ಗಾಗಿ ಲೈವ್ ಪೈಂಟಿಂಗ್ ಕೂಡ ಮಾಡಲಿದ್ದಾರೆ. ಇದನ್ನು ಐಡಿಯಲ್ ಫೌಂಡೇಷನ್ ಹರಾಜು ಹಾಕಲಿದೆ. ಕಲರ್ ಥಾನ್ 2014ರಲ್ಲಿ ಪೈಂಟಿಂಗ್ ಹೊರತಾಗಿ ಕೆಲವು ವಿಭಿನ್ನ ಕಾರ್ಯಕ್ರಮಗಳಿವೆ.

* ಆರ್.ಡಿ. 350 ಬೈಕರ್ಸ್ ಕ್ಲಬ್ನ ಸುಮಾರು 200 ಸದಸ್ಯರು ಪೈಂಟಿಂಗ್ ನಡೆಯುವ ಸ್ಥಳದಿಂದ 5 ಕಿಲೋಮೀಟರ್ ಸುತ್ತಳತೆಯಲ್ಲಿ ಬೈಕ್ ರ್ಯಾಲಿ ನಡೆಸಲಿದ್ದಾರೆ.
* ಮಕ್ಕಳ ಮನಗೆದ್ದ ಚೋಟಾಬೀಮ್, ಚುಟ್ಕಿ ಮತ್ತು ಮೈಟಿ ರಾಜು ಬೈಕ್ ರ್ಯಾಲಿಯ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ.
* ಲೈವ್ ಮ್ಯೂಸಿಕ್ ಬ್ಯಾಂಡ್ ಫರ್ಪಾಮೆನ್ಸ್ ಕೂಡ ಕಲರ್ಥಾನ್ 2014 ಕಾರ್ಯಕ್ರಮದ ಹೈಲೈಟ್ ಆಗಲಿದೆ. ಇದ್ರಲ್ಲಿ ಆರ್ಟ್ ಬಜಾರ್, ಮ್ಯಾಜಿಕ್ ಶೋ, ಡ್ರಮ್ ಸರ್ಕಲ್ ಇಂಡಿಯಾ ಬೈ ಡ್ರಮ್ಸ್ ಇಂಡಿಯಾ ಜೊತೆಗೆ ಕಾಮಿಡಿ ಶೋ ಕೂಡ ಇರಲಿದೆ.
ಕಲರ್ಥಾನ್2014 ಜನವರಿ 26ರಂದು ಬೆಳಗ್ಗೆ 8 ಗಂಟೆಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ನಲ್ಲಿ ಆರಂಭವಾಗಲಿದೆ. 10 ರಿಂದ 12.30ರ ತನಕ ಪೈಂಟಿಂಗ್ ನಡೆಯಲಿದೆ. ಕಲರ್ಥಾನ್2014ನಲ್ಲಿ ಪಾಲ್ಗೊಳ್ಳಲು ಯಾವುದೇ ರಿಜಿಸ್ಟ್ರೇಷನ್ ಫೀಸ್ ಇಲ್ಲ. ಪೈಂಟಿಂಗ್ಗೆ ಬೇಕಾದ ಎಲ್ಲಾ ವಸ್ತುಗಳನ್ನು ಭಾಗವಹಿಸುವವರೇ ತರಬೇಕಿದೆ. ಆಯೋಜಕರು ಪೇಪರ್ಗಳನ್ನು ಮಾತ್ರ ಒದಗಿಸಕೊಡಲಿದ್ದಾರೆ.
* 9 ವರ್ಷದೊಳಗಿನವರಿಗೆ
* 10 ರಿಂದ 12 ವರ್ಷ ಒಳಗಿನವರಿಗೆ
* 13ರಿಂದ 20 ವರ್ಷ ಒಳಗಿನವರಿಗೆ
* 21 ರಿಂದ 30 ವರ್ಷದವರಿಗೆ
* 30 ವರ್ಷ ಮೇಲಿನವರಿಗೆ ಸ್ಪರ್ಧೆ ನಡೆಯಲಿದೆ.
ರಿಜಿಸ್ಟ್ರೇಷನ್ ಗಾಗಿ ಇಲ್ಲಿ ಸಂಪರ್ಕಿಸಿ
www.colorothon.com Or call : 9483537475, 9986984878
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications