ಬೆಂಗ್ಳೂರಲ್ಲಿ ಸಾಕು ನಾಯಿ ಸುಸು ಮಾಡಿದರೂ ದಂಡ ಕಟ್ಬೇಕು!
ಬೆಂಗಳೂರು, ಆ. 03: ಮನಸ್ಸಿಗೆ ಬಂದಂತೆ ಮನೆಯ ಕಸವನ್ನೆಲ್ಲ ತುಂಬಿ ಘಂಟೆ ಗಾಡಿಗೆ ನೀಡಿದರೆ ಇನ್ನು ಮುಂದೆ ದಂಡ ಕಟ್ಟಬೇಕಾಗುವುದು. ನಿಮ್ಮ ಮನೆ ಸಾಕು ಪ್ರಾಣಿ ಪಬ್ಲಿಕ್ ನಲ್ಲಿ ಸುಸು ಮಾಡಿದರೂ ನೀವೇ ದಂಡ ಕಟ್ಟಬೇಕು. ಘನ ತ್ಯಾಜ್ಯ ನಿರ್ವಹಣೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಬಿಬಿಎಂಪಿ 'ದಂಡಕ್ರಮ' ಕ್ಕೆ ಮುಂದಾಗಿದೆ.
ಹಸಿ ತ್ಯಾಜ್ಯ, ಘನ ತ್ಯಾಜ್ಯ ಮತ್ತು ಒಣ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ ನೀಡಬೇಕು ಎಂದು ಬಿಬಿಎಂಪಿ ಹೇಳುತ್ತಲೇ ಬಂದಿದ್ದರೂ ನಾಗರಿಕರು ಗಮನ ನೀಡಿಲ್ಲ. ಹಾಗಾಗಿ ಆರಂಭದಲ್ಲೇ ಕಸ ವಿಂಗಡನೆ ಮಾಡಿ ನೀಡದ ಮನೆಗಳಿಗೆ 100 ರು. ಎರಡನೇ ಬಾರಿಗೆ 200 ರು. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಉದ್ದಿಮೆಗಳಿಗೆ ಮೊದಲನೆ ಬಾರಿಗೆ 500 ರು. 2 ನೇ ಬಾರಿಗೆ ಸಾವಿರ ರು, ದಂಡ ವಿಧಿಸಲು ಬಿಬಿಎಂಪಿ ಅಧಿಸೂಚನೆ ಹೊರಡಿಸಲಿದೆ.[ಕಸ ಹಾಕುವವರ ಫೋಟೋ ತೆಗೆದು ವಾಟ್ಸಪ್ ಮಾಡಿ]

ಇದಲ್ಲದೇ ಮಲ, ಮೂತ್ರ ವಿಸರ್ಜಿಸುವುದು, ಉಗುಳುವುದನ್ನು ಮಾಡಿದರೂ ದಂಡ ತೆರಬೇಕಾಗುತ್ತದೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋದಾಗ ಗಲೀಜು ಮಾಡಿದರೂ ನೀವೇ ದಂಡ ಕಟ್ಟಬೇಕು.
ಮೂಲದಲ್ಲಿಯೇ ಕಸ ವಿಂಗಡನೆ ಮಾಡಬೇಕು. ಇದು ಮರುಬಳಕೆಗೆ ಅನುವಾಗುತ್ತದೆ. ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತದೆ. ಸರಿಯಾಗಿ ಕಸ ವಿಂಗಡನೆ ಮಾಡದವರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.[ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ಬೆಂಗಳೂರಿನ ಅನೇಕ ಕಡೆ ಖಾಳಿ ನಿವೇಶನಗಳಲ್ಲಿ ಕಸ ತುಂಬಿಕೊಂಡಿದ್ದು ಮಾಲೀಕರಿಗೆ ಮೂರು ದಿನದಲ್ಲಿ ಸ್ವಚ್ಛ ಮಾಡುವಂತೆ ತಿಳಿಸಿ ನೋಟಿಸ್ ನೀಡಲಾಗುವುದು. ಮಾಲೀಕರು ಸ್ವಚ್ಛ ಮಾಡದಿದ್ದರೆ ಬಿಬಿಎಂಪಿಯೇ ಗುತ್ತಿಗೆದಾರರನ್ನು ಹಿಡಿದು ಕಸ, ಗಿಡಗಂಟೆ ತೆರವು ಮಾಡುತ್ತದೆ. ನಂತರ ಪ್ರತಿ ಚದರ ಅಡಿಗೆ ಎರಡು ರು. ವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ
ದಂಡ ಪಟ್ಟಿ ನೋಡಿ
* ಉಗುಳುವುದು, ಮೂತ್ರ ವವಿಸರ್ಜನೆ: ಮೊದಲ ಸಲ 100, 2ನೇ ಸಲ 200
* ಮೂಲದಲ್ಲೇ ಕಸ ಬೇರ್ಪಡಿಸದಿದ್ದರೆ(ನಿವಾಸಿಗಳಿಗೆ): ಮೊದಲ ಸಲ 100, 2ನೇ ಸಲ 200
* ವಾಣಿಜ್ಯ ಕಟ್ಟಡಗಳಿಗೆ: ಮೊದಲ ಸಲ 500, 2ನೇ ಸಲ 1000
* ಉದ್ಯಾನ,ಕಟ್ಟಡ, ಸ್ಯಾನಿಟರಿ ತ್ಯಾಜ್ಯ: ಮೊದಲ ಸಲ 500, 2ನೇ ಸಲ 1000
* ಸಾಕು ಪ್ರಾಣಿಗಳಿಂದ ಗಲೀಜು: ಮೊದಲ ಸಲ 100, 2ನೇ ಸಲ 200
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications