ಬೆಂಗ್ಳೂರಲ್ಲಿ ಸಾಕು ನಾಯಿ ಸುಸು ಮಾಡಿದರೂ ದಂಡ ಕಟ್ಬೇಕು!
ಬೆಂಗಳೂರು, ಆ. 03: ಮನಸ್ಸಿಗೆ ಬಂದಂತೆ ಮನೆಯ ಕಸವನ್ನೆಲ್ಲ ತುಂಬಿ ಘಂಟೆ ಗಾಡಿಗೆ ನೀಡಿದರೆ ಇನ್ನು ಮುಂದೆ ದಂಡ ಕಟ್ಟಬೇಕಾಗುವುದು. ನಿಮ್ಮ ಮನೆ ಸಾಕು ಪ್ರಾಣಿ ಪಬ್ಲಿಕ್ ನಲ್ಲಿ ಸುಸು ಮಾಡಿದರೂ ನೀವೇ ದಂಡ ಕಟ್ಟಬೇಕು. ಘನ ತ್ಯಾಜ್ಯ ನಿರ್ವಹಣೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಬಿಬಿಎಂಪಿ 'ದಂಡಕ್ರಮ' ಕ್ಕೆ ಮುಂದಾಗಿದೆ.
ಹಸಿ ತ್ಯಾಜ್ಯ, ಘನ ತ್ಯಾಜ್ಯ ಮತ್ತು ಒಣ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ ನೀಡಬೇಕು ಎಂದು ಬಿಬಿಎಂಪಿ ಹೇಳುತ್ತಲೇ ಬಂದಿದ್ದರೂ ನಾಗರಿಕರು ಗಮನ ನೀಡಿಲ್ಲ. ಹಾಗಾಗಿ ಆರಂಭದಲ್ಲೇ ಕಸ ವಿಂಗಡನೆ ಮಾಡಿ ನೀಡದ ಮನೆಗಳಿಗೆ 100 ರು. ಎರಡನೇ ಬಾರಿಗೆ 200 ರು. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಉದ್ದಿಮೆಗಳಿಗೆ ಮೊದಲನೆ ಬಾರಿಗೆ 500 ರು. 2 ನೇ ಬಾರಿಗೆ ಸಾವಿರ ರು, ದಂಡ ವಿಧಿಸಲು ಬಿಬಿಎಂಪಿ ಅಧಿಸೂಚನೆ ಹೊರಡಿಸಲಿದೆ.[ಕಸ ಹಾಕುವವರ ಫೋಟೋ ತೆಗೆದು ವಾಟ್ಸಪ್ ಮಾಡಿ]

ಇದಲ್ಲದೇ ಮಲ, ಮೂತ್ರ ವಿಸರ್ಜಿಸುವುದು, ಉಗುಳುವುದನ್ನು ಮಾಡಿದರೂ ದಂಡ ತೆರಬೇಕಾಗುತ್ತದೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋದಾಗ ಗಲೀಜು ಮಾಡಿದರೂ ನೀವೇ ದಂಡ ಕಟ್ಟಬೇಕು.
ಮೂಲದಲ್ಲಿಯೇ ಕಸ ವಿಂಗಡನೆ ಮಾಡಬೇಕು. ಇದು ಮರುಬಳಕೆಗೆ ಅನುವಾಗುತ್ತದೆ. ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತದೆ. ಸರಿಯಾಗಿ ಕಸ ವಿಂಗಡನೆ ಮಾಡದವರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.[ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ಬೆಂಗಳೂರಿನ ಅನೇಕ ಕಡೆ ಖಾಳಿ ನಿವೇಶನಗಳಲ್ಲಿ ಕಸ ತುಂಬಿಕೊಂಡಿದ್ದು ಮಾಲೀಕರಿಗೆ ಮೂರು ದಿನದಲ್ಲಿ ಸ್ವಚ್ಛ ಮಾಡುವಂತೆ ತಿಳಿಸಿ ನೋಟಿಸ್ ನೀಡಲಾಗುವುದು. ಮಾಲೀಕರು ಸ್ವಚ್ಛ ಮಾಡದಿದ್ದರೆ ಬಿಬಿಎಂಪಿಯೇ ಗುತ್ತಿಗೆದಾರರನ್ನು ಹಿಡಿದು ಕಸ, ಗಿಡಗಂಟೆ ತೆರವು ಮಾಡುತ್ತದೆ. ನಂತರ ಪ್ರತಿ ಚದರ ಅಡಿಗೆ ಎರಡು ರು. ವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ
ದಂಡ ಪಟ್ಟಿ ನೋಡಿ
* ಉಗುಳುವುದು, ಮೂತ್ರ ವವಿಸರ್ಜನೆ: ಮೊದಲ ಸಲ 100, 2ನೇ ಸಲ 200
* ಮೂಲದಲ್ಲೇ ಕಸ ಬೇರ್ಪಡಿಸದಿದ್ದರೆ(ನಿವಾಸಿಗಳಿಗೆ): ಮೊದಲ ಸಲ 100, 2ನೇ ಸಲ 200
* ವಾಣಿಜ್ಯ ಕಟ್ಟಡಗಳಿಗೆ: ಮೊದಲ ಸಲ 500, 2ನೇ ಸಲ 1000
* ಉದ್ಯಾನ,ಕಟ್ಟಡ, ಸ್ಯಾನಿಟರಿ ತ್ಯಾಜ್ಯ: ಮೊದಲ ಸಲ 500, 2ನೇ ಸಲ 1000
* ಸಾಕು ಪ್ರಾಣಿಗಳಿಂದ ಗಲೀಜು: ಮೊದಲ ಸಲ 100, 2ನೇ ಸಲ 200
-
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ












Click it and Unblock the Notifications