ಬೆಂಗಳೂರು: ಊಬರ್ ಪ್ರಯಾಣ ದರ ಶೇ.10 ಏರಿಕೆ, ಓಲಾದಲ್ಲೂ ಹೆಚ್ಚಳ ಆಗುತ್ತಾ?
ಬೆಂಗಳೂರು, ಏಪ್ರಿಲ್ 20: ಬೆಂಗಳೂರಿನಲ್ಲಿ ಕ್ಯಾಬ್ ರೈಡ್ ದುಬಾರಿಯಾಗಲಿದೆ. ಏರುತ್ತಿರುವ ಡೀಸೆಲ್ ಬೆಲೆಗಳನ್ನು ನಿಭಾಯಿಸಲು ತನ್ನ ಚಾಲಕ-ಪಾಲುದಾರರಿಗೆ ಸಹಾಯ ಮಾಡಲು ಟ್ರಿಪ್ ದರವನ್ನು ಹೆಚ್ಚಿಸಲಾಗಿದೆ ಎಂದು ಊಬರ್ ಮಂಗಳವಾರ ಹೇಳಿದೆ.
ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾವು ಚಾಲಕರಿಂದ ಪ್ರತಿಕ್ರಿಯೆಯನ್ನು ಕೇಳುತ್ತೇವೆ ಮತ್ತು ಪ್ರಸ್ತುತ ಇಂಧನ ಬೆಲೆಗಳ ಏರಿಕೆಯು ಕಳವಳವನ್ನು ಉಂಟುಮಾಡುತ್ತಿದೆ ಎಂದು ಅರ್ಥಮಾಡಿಕೊಂಡಿದ್ದೇವೆ," ಎಂದಿದ್ದಾರೆ.
"ಪ್ರಸ್ತುತ ಇಂಧನ ಬೆಲೆ ಏರಿಕೆಯಿಂದಾಗಿ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಚಾಲಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ಬೆಂಗಳೂರಿನಲ್ಲಿ ಊಬರ್ ಪ್ರಯಾಣ ದರವನ್ನು ಏರಿಕೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ದರವನ್ನು ಶೇಕಡ 10ರಷ್ಟು ಹೆಚ್ಚಿಸಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ.

"ನಾವು ಇಂಧನ ಬೆಲೆ ಏರಿಳಿತವನ್ನು ಗಮನಹರಿಸುತ್ತಿರುತ್ತೇವೆ.ಅಗತ್ಯವಿರುವಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಕೂಡಾ ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ತಿಳಿಸಿದ್ದಾರೆ.
ಓಲಾ ಪ್ರಯಾಣ ದರ ಏರಿಕೆಯಾಗುತ್ತಾ?
ಈ ನಡುವೆ ಓಲಾ ಕೂಡಾ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಈ ಬಗ್ಗೆ ಓಲಾ ಈವರೆಗೂ ಯಾವುದೇ ಪ್ರತಿಕ್ರಿಯೆ, ಹೇಳಿಕೆಯನ್ನು ನೀಡಿಲ್ಲ.
ದರ ಹೆಚ್ಚಳವನ್ನು ಸ್ವಾಗತಿಸಿದ ಚಾಲಕರು
ಕೆಲವು ಚಾಲಕರು ಈ ಕ್ರಮವನ್ನು ಸ್ವಾಗತಿಸಿದರು. "ದರಗಳನ್ನು ಪರಿಷ್ಕರಿಸುವುದು ಒಳ್ಳೆಯದು, ಆದರೆ ಲಾಭವನ್ನು ಚಾಲಕರಿಗೆ ವರ್ಗಾಯಿಸಬೇಕು. ಸಂಗ್ರಾಹಕರು ವಿಧಿಸುವ ಕಮಿಷನ್ಗೆ ಕಡಿವಾಣ ಹಾಕಬೇಕು. ಈಗ ನಮ್ಮ ಸಂಪಾದನೆ ಇಂಧನ ತುಂಬುವುದಕ್ಕೂ ಸಾಕಾಗುತ್ತಿಲ್ಲ," ಎಂದು ಕೋರಮಂಗಲದ ಕ್ಯಾಬ್ ಚಾಲಕ ಕೆ ಮಂಜುನಾಥ್ ಹೇಳಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರು ಹಲವಾರು ದೂರುಗಳ ಹೊರತಾಗಿಯೂ ಕಾರಿನಲ್ಲಿ ಎಸಿ ಆನ್ ಮಾಡುವುದಿಲ್ಲ. ವಿಶೇಷವಾಗಿ ಇಂಧನ ಬೆಲೆಗಳ ಏರಿಕೆಯ ನಂತರ ಎಸಿ ಆನ್ ಮಾಡಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.09 ರೂ., ಡೀಸೆಲ್ ದರ ಲೀಟರ್ಗೆ 94.79 ರೂ. ಆಗಿದೆ.
ಜಿಎಸ್ಟಿ ನಿಯಮ ಬದಲಾವಣೆ
ಜನವರಿ 1 ರಿಂದ ಜಾರಿಗೆ ಬರುವಂತೆ ಜಿಎಸ್ಟಿ ನಿಯಮ ಬದಲಾವಣೆ ಆಗಿದೆ. ಈ ನಿಯಮದ ಪ್ರಕಾರ ಓಲಾ ಮತ್ತು ಊಬರ್ ದ್ವಿಚಕ್ರ ಅಥವಾ ಕಾರಿನಲ್ಲಿ ಪ್ರಯಾಣಕ್ಕೆ ಶೇಕಡ 5 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ನು ವಿಧಿಸಬೇಕಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications