ಕಾಲುಜಾರಿ ಸಂಪ್ನೊಳಗೆ ಬಿದ್ದು ಎರಡು ಪುಟ್ಟ ಜೀವಗಳ ಬಲಿ
ಕೆ.ಆರ್.ಪುರ, ಮಾರ್ಚ್ 29: ನಿರ್ಮಾಣದ ಹಂತದ ಕಟ್ಟಡದಲ್ಲಿದ್ದ ಸಂಪ್ನಲ್ಲಿ ಮುಳುಗಿ ಎರಡು ಮುಗ್ಧ ಜೀವಗಳು ಮೃತಪಟ್ಟಿವೆ.
ನವೀನ್(5) ಮತ್ತು ಬಸಮ್ಮ(1) ಮೃತ ಮಕ್ಕಳು. ಯಾದಗಿರಿ ಮೂಲದ ಮಲ್ಲಪ್ಪ ಹಾಗೂ ಕಾಶಮ್ಮ ದಂಪತಿ ಮಕ್ಕಳು.
ಗೋವಾದಿಂದ ಬೆಂಗಳೂರಿಗೆ ಬರುವಾಗ ಲಾರಿಗೆ ಕಾರು ಡಿಕ್ಕಿ: ಮೂವರ ಸಾವು
ಕವಿತಾ ಮತ್ತು ಮಲ್ಲಪ್ಪ ದಂಪತಿ ಕೊಡಿಗೇಹಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದರು. 15 ದಿನಗಳಿಂದ ಮಲ್ಲಪ್ಪ ತನ್ನ ಮೊದಲ ಪತ್ನಿಯ ಜೊತೆಗೆ ಯಾದಗಿರಿಯಲ್ಲಿ ನೆಲೆಸಿದ್ದರು.
ಕವಿತಾ ತನ್ನ ಸಹೋದರ ಭೀಮಪ್ಪ ಜೊತೆ ನೆಲೆಸಿದ್ದರು.ಅಲ್ಲೇ ಆಟವಾಡುತ್ತಿದ್ದ ನವೀನ್ ಮತ್ತು ಬಸಮ್ಮ ಮಧ್ಯಾಹ್ನ ಆಕಸ್ಮಿಕವಾಗಿ ಸಂಪ್ಗೆ ಕಾಣದೆ ಬಿದ್ದಿದ್ದರೆ. ಇತ್ತ ಮಕ್ಕಳು ಕಾಣದೆ ಇದ್ದಾಗ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ.
ಪಟಾಕಿ ಘಟಕದ ಭಾರೀ ದುರಂತದಲ್ಲಿ ಆರು ಕಾರ್ಮಿಕರು ಸಾವು, ಕುಸಿದ ಕಟ್ಟಡ
ದಂಪತಿ ಕೊನೆಗೆ ನೀರಿನ ಸಂಪ್ ನೋಡಿದಾಗ ಮಕ್ಕಳು ಕಂಡಿದ್ದಾರೆ. ಅಷ್ಟರಲ್ಲಿ ಮೃತಪಟ್ಟಿರುವುದು ವೈದ್ಯರಿಂದ ತಿಳಿದುಬಂದಿದೆ. 10 ಅಡಿ ಆಳದ ಸಂಪ್ನಲ್ಲಿ 4 ಅಡಿಗಳಷ್ಟು ನೀರಿತ್ತು ಎಂದು ತಿಳಿದುಬಂದಿದೆ.