ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರ ಪರ ಕಾಂಗ್ರೆಸ್ನಿಂದ ಟ್ವೀಟ್
Recommended Video
ಬೆಂಗಳೂರು, ಅಕ್ಟೋಬರ್ 29: ಕಾಂಗ್ರೆಸ್ ನಾಯಕರ ಒಗ್ಗಟ್ಟು ಒಡೆಯುವಂತಹ ಕೆಲವು ಕೆಲಸಗಳು ನಡೆಯುತ್ತಲೇ ಇರುತ್ತದೆ ಆದರೆ ಇದೆಲ್ಲದರ ನಡುವೆಯೂ ನಾಯಕರೆಲ್ಲರೂ ಒಗ್ಗಟ್ಟಾಗಿ ಮುಂದುವರೆಯುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಭಾವಿ ಮುಖಂಡರು, ಹಾಗೆಯೇ ಡಿಕೆ ಶಿವಕುಮಾರ್ ಕೂಡ ನಮ್ಮ ಪಕ್ಷದ ನಾಯಕರು ಪಕ್ಷದ ಒಗ್ಗಟ್ಟು ಒಡೆಯಲು ಕಾಣದ ಕೈಗಳು ಪ್ರಯತ್ನ ಮಾಡುತ್ತಲೇ ಬಂದಿವೆ.
ವಿರೋಧಿಗಳಿಗೆ ಸಿದ್ದರಾಮಯ್ಯ ದೀಪಾವಳಿ ರಾಕೆಟ್ !
ಹೀಗೆಯೇ ಅವರಿಬ್ಬರ ಜಗಳ ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಹಾಗಾಗಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಜಗಳಕ್ಕೆ ತೇಪೆ ಹಚ್ಚಲು ಹಾಗೂ ಅವರ ಸಂಬಂಧ ಸರಿಪಡಿಸಲು ಕಾಂಗ್ರೆಸ್ ಶತ ಪ್ರಯತ್ನ ಮಾಡುತ್ತಿದೆ.
ಹಿಂದೆ ಕಾಂಗ್ರೆಸ್ ಮಾಡಿದ್ದ ಕೆಲಸಗಳನ್ನು ಜನತೆ ನೆನೆಯುತ್ತಿದೆ
ಸರ್ಕಾರ ಜನಪರ ಕೆಲಸ ಮಾಡ್ತಿದೆಯಾ, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆಯೇ ಅನ್ನೋದು ನಮಗೆ ಮುಖ್ಯ. ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸಗಳನ್ನು ಜನತೆ ನೆನೆಯುತ್ತಿದ್ದಾರೆ.
ಸಿದ್ದರಾಮಯ್ಯ ಆಂತರಿಕವಾಗಿ ಮಾತನಾಡಿದ್ದಾರೆ
ಮಾಜಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಆಂತರಿಕವಾಗಿ
ಮಾತನಾಡಿದ್ದಾರೆ.
ಕಾಂಗ್ರೆಸ್
ಜ್ಯಾತ್ಯಾತೀತ
ಸೈದ್ಧಾಂತಿಕ
ಹಿನ್ನೆಲೆಯ
ಪಕ್ಷ
ಈ
ಹಿನ್ನೆಯಲ್ಲಿ
ಸಿದ್ಧರಾಮಯ್ಯ
ಅವರು
ಮಾತನಾಡಿದ್ದರಲ್ಲಿ
ತಪ್ಪೇನಿದೆ?
ಎಚ್ಡಿ
ಕುಮಾರಸ್ವಾಮಿ
ಹೇಳಿಕೆಗೆ
ಯಾವ
ಪ್ರತಿಕ್ರಿಯೆ
ನೀಡಲು
ಹೋಗುವುದಿಲ್ಲ
ಒಂದೊಂದು
ಬಾರಿ
ಒಂದೊಂದು
ರೀತಿ
ಮಾತಾಡುತ್ತಾರೆ
ಎಂದು
ಕಾಂಗ್ರೆಸ್
ಟ್ವೀಟ್
ಮಾಡಿದೆ.
ಇಲ್ಲ ಇಲ್ಲ ಸಿದ್ದರಾಮಯ್ಯ ಹಾಗೆ ಹೇಳಿರಲಿಕ್ಕಿಲ್ಲ ಎಂದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಏನು ಹೇಳಿದ್ದರು?
ನಾನು ಜಾತಿವಾದಿ ಅಲ್ಲ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ನಾನು ಅಂಬೇಡ್ಕರ್,ಗಾಂಧೀಜಿ, ಬಸವಣ್ಣ ಮತ್ತು ಕುವೆಂಪು ಅವರ ಚಿಂತನೆಯಿಂದ ಪ್ರೇರಿತನಾದ ಜಾತ್ಯತೀತ. ಅವರ ಚಿಂತನೆಗಳ ಫಲವೇ ನನ್ನ ಸರ್ಕಾರದ ಯೋಜನೆಗಳಾಗಿದ್ದವು. ಇದು ನನ್ನ ಜಾತಿವಿನಾಶದ ಹಾದಿ. ನಿಮ್ಮದು ಯಾವ ಹಾದಿ? ಎಂದು ಪ್ರಶ್ನಿಸಿದ್ದರು.
ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿದಿದ್ದೇ ಮುನಿಸಿಗೆ ಕಾರಣ
ಡಿಕೆ ಶಿವಕುಮಾರ್ ಕೆಂಪೇಗೌಡ ಏರ್ಪೋರ್ಟ್ ನಿಂದ ಬರುವ ಸಮಯದಲ್ಲಿ ಜೆಡಿಎಸ್ ಬಾವುಟವನ್ನು ಕೈಯಲ್ಲಿ ಹಿಡಿದಿದ್ದರು, ಇದು ಕಾಂಗ್ರೆಸ್ ಕೆಂಗಣ್ಣಿಗೆ ಕಾರಣವಾಗಿತ್ತು. ಸಿದ್ದರಾಮಯ್ಯ ಕೂಡ ಈ ಕುರಿತು ವ್ಯಂಗ್ಯ ಮಾಡಿದ್ದರು. ಆದರೆ ಇಬ್ಬರೂ ಕೂಡ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿರುವುದರಿಂದ ಇವರ ಜಗಳಕ್ಕೆ ತೇಪೆ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.