ರಥಸಪ್ತಮಿ ನಿಮಿತ್ತ ಬದಲಿ ಮಾರ್ಗಸೂಚಿ ನೋಡಿ
ಬೆಂಗಳೂರು, ಫೆ.5: ರಥಸಪ್ತಮಿ ದಿನದಂದು ಸೂರ್ಯ ತನ್ನ ಹೊಸ ಪಥ ಹಿಡಿದು ರಥವೇರಿ ಸಂಚಾರಕ್ಕೆ ಹೊರಡುತ್ತಿದ್ದಂತೆ ಟ್ರಾಫಿಕ್ ಜಾಮ್ ಜಂಜಾಟಕ್ಕೆ ಸಿಲುಕುವ ಬೆಂಗಳೂರು ನಗರದಲ್ಲಿ 'ಬದಲಿ ಮಾರ್ಗ ಅನುಸರಿಸಿ' ನೋಡುವುದು ಅನಿವಾರ್ಯವಾಗಲಿದೆ. ರಥಸಪ್ತಮಿ ನಿಮಿತ್ತ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು-ಲಷ್ಕರ್ ರಸ್ತೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.
ಫೆ.6ರ ಸಂಜೆ 8 ಗಂಟೆಯಿಂದ ಫೆ..7ರ ಬೆಳಗ್ಗೆ 9 ಗಂಟೆಯವರೆಗೆ ರಥಸಪ್ತಮಿ ಹಬ್ಬದ ಪ್ರಯುಕ್ತ ಮುತ್ತಿನ ಪಲ್ಲಕ್ಕಿ ಹಾಗೂ 31 ದೇವರುಗಳ ಮೆರವಣಿಗೆ ನಡೆಯಲಿದ್ದು, ಸಂಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.
ಮಡಿವಾಳ ಮಾರ್ಗವಾಗಿ ಆಡುಗೋಡಿ ಕಡೆಗೆ ಬರುವ ವಾಹನ ಸಂಚಾರವನ್ನು ಮಡಿವಾಳ ಚೆಕ್ ಪೋಸ್ಟ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ. ಬದಲಿ ಸಂಚಾರ ಮಾರ್ಗವಾಗಿ ಸರ್ಜಾಪುರ ರಸ್ತೆಯ ಮಾರ್ಗವಾಗಿ ಕೋರಮಂಗಲ ವಾಟರ್ ಟ್ಯಾಂಕ್ ವೃತ್ತದ ಮೂಲಕ ಕೋರಮಂಗಲ 100 ಅಡಿ ರಸ್ತೆಯ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಕೋರಮಂಗಲ 80 ಅಡಿ ರಸ್ತೆಯ ಕಡೆಯಿಂದ ಆಡುಗೋಡಿ ಕಡೆಗೆ ಸಂಚರಿಸುವ ಸಂಚಾರವನ್ನು ಯುಕೋಬ್ಯಾಂಕ್ ವೃತ್ತದಲ್ಲಿ ಬಲತಿರುವು ಪಡೆಯುವುದನ್ನು ನಿರ್ಬಂಸಲಾಗಿದ್ದು, ಮಡಿವಾಳ ಉಕ್ಕಡದಕಡೆಗೆ ಸಂಚರಿಸಿ ಡಾ.ಮರಿಗೌಡ ರಸ್ತೆಯಲ್ಲಿ ಸಂಚರಿಸಿ ಬೆಂಗಳೂರು ಡೈರಿ ವೃತ್ತವನ್ನು ಸೇರಿ ಸಂಚರಿಸಬಹುದು.
ಲಾಂಗ್ ಫೋರ್ಡ್ ರಸ್ತೆಯ ಕಡೆಯಿಂದ ಆಡುಗೋಡಿ ಮುಖ್ಯರಸ್ತೆಗಳ ಕಡೆಗೆ ಸಂಚರಿಸುತ್ತಿದ್ದ ಸಂಚಾರವನ್ನು ಆನೇಪಾಳ್ಯ ವೃತ್ತದಲ್ಲಿ ನಿರ್ಬಂಧಿಸಿದ್ದು, ನಿರ್ಬಂಧಿಸಿದ ಸಂಚಾರವನ್ನು ಬನ್ನೇರುಘಟ್ಟ ರಸ್ತೆಯ ಮಾರ್ಗವಾಗಿ ಸಂಚರಿಸಿ ಬೆಂಗಳೂರು ಡೈರಿ ವೃತ್ತವನ್ನು ಸೇರಿ ಸಂಚರಿಸಬಹುದು.
ವಿಲ್ಸನ್ ಗಾರ್ಡನ್ ಕಡೆಯಿಂದ ಮೈಕೋ ಲಿಂಕ್ ರಸ್ತೆಯ ಮಾರ್ಗವಾಗಿ ಆಡುಗೋಡಿ ವೃತ್ತದ ಕಡೆಗೆ ಸಂಚರಿಸುತ್ತಿದ್ದ ಸಂಚಾರವನ್ನು ಮೈಕೋಬಂಡೇ ವೃತ್ತದಲ್ಲಿ ನಿರ್ಬಂಧಿಸಿದ್ದು, ನಿರ್ಬಂಧಿಸಿದ ಸಂಚಾರವನ್ನು ಬನ್ನೇರುಘಟ್ಟ ರಸ್ತೆಯ ಮಾರ್ಗವಾಗಿ ಬೆಂಗಳೂರು ಡೈರಿ ವೃತ್ತದ ಕಡೆಗೆ ಸಂಚರಿಸಬಹುದಾಗಿರುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಟ್ರಾಫಿಕ್ ಅಲರ್ಟ್ ಪಡೆಯಲು 09219592195 ಗೆ JOIN BTP ಎಂದು ಸಂದೇಶ ಕಳಿಸಿ.. ಒಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಟ್ರಾಫಿಕ್ ಪೊಲೀಸರ ಕಡತದಲ್ಲಿ ದಾಖಲಾದರೆ ನಿಮಗೆ ಕಾಲ ಕಾಲಕ್ಕೆ ಟ್ರಾಫಿಕ್ ಅಲರ್ಟ್ ಸಂದೇಶ ಬರುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications